144
ಸೇವಿಸಬೇಕೆಂಬ ಬಸವಣ್ಣನವರ ಬೋಧೆಯ ತಿರುಳನ್ನು ಅವರ
ಪರಂಪರೆಯಲ್ಲಿಯ ಸರ್ವಜ್ಞನ ಕೆಳಗಿನ ವಚನದಲ್ಲಿ ಚೆನ್ನಾಗಿ
ಅರುಹಲಾಗಿರುವದು :
ನೀರ ಬೊಬ್ಬುಳಿ ನೆಚ್ಚಿ ಸಾರಿ ಕೆಡದಿರು ಮರುಳೇ !.
ಸಾರಗುಣಿಯಾಗು, ನಿಜ ತಿಳಿ, ಸರುವರೊಳು.
ಕಾರಣಿಕನಾಗು, ಸರ್ವಜ್ಞ.
.
ದೇಹವು ನೀರ ಗುಳ್ಳೆಯಂತೆ ಅನಿತ್ಯ-ಕ್ಷಣಭಂಗುರ. ಅದನ್ನು ನೆಚ್ಚಿ
ಅದರಿಂದ ಲಭಿಸುವ ಸುಖದುಃಖಗಳ ಜಾಲದಲ್ಲಿ ಸಿಲುಕಿ ಕೆಡಬಾರದು.
ಸಾರಭೂತವಾದ ಆತ್ಮನನ್ನು ಅರಿಯಬೇಕು. ಸಾರಗುಣಗಳನ್ನು
ಪಡೆಯಬೇಕು. ಅದರಿಂದ ತನ್ನ ಹಾಗೂ ಅನ್ಯರ ಶಾಶ್ವತ ಕಲ್ಯಾಣವನ್ನು
ಸಾಧಿಸಬೇಕು.
ತನ್ನ ಗುಣದೋಷಗಳನ್ನು ಅರಿಯುವದು, ತನ್ನ ತಾನರಿಯುವುದ' ರ
ಎರಡನೆಯ ಅರ್ಥ. ತನ್ನಲ್ಲಿ ಅದಾವ ಗುಣಗಳು ನೆಲೆಸಿರುವವು? ಅದಾವ
ಅವಗುಣಗಳು ನೆಲೆಸಿರುವವು? ಗುಣಗಳನ್ನು ಬೆಳೆಸುವದೆಂತು?
ಅವಗುಣಗಳನ್ನು ಅಳಿಸುವದೆಂತು? ಎಂಬುದನ್ನು ನಾವು ಅರಿಯಬೇಕು.
ಇದಕ್ಕೆ ಸರಿಯಾದ ಅಂತರ್ನಿರೀಕ್ಷಣವು ಅಗತ್ಯ. ಮಾನವರು
ಸಾಮಾನ್ಯವಾಗಿ ಹೊರನೋಟವುಳ್ಳವರು. ಒಳನೋಟವುಳ್ಳವರು
ಅವರಲ್ಲಿ ವಿರಲ. ಏಕೆಂದರೆ ಕಠೋಪನಿಷತ್ತು ಅರುಹುವ ಮೇರೆಗೆ -
ಪರಾಂಚಿ ಖಾನಿ ವ್ಯತೃಣತ್ ಸ್ವಯಂಭೂಃ -
ತಸ್ಮಾತ್ ಪರಾಶ್ವತಿ ನಾಂತರಾತ್ಮನ್ |
ಕಶ್ಚಿತ್ ಧೀರ: ಪ್ರತ್ಯಗಾತ್ಮಾನಮೈಕ್ಷತ್
ಆವೃತ್ತ ಚಕ್ಷುರಮೃತತ್ವಮಿಚ್ಛನ್ ||
“ಭಗವಂತನು ನಮ್ಮ ಇಂದ್ರಿಯಗಳನ್ನು ಹೊರನೋಟ-ಹೊರ ಓಟವುಳ್ಳವುಗಳನ್ನಾಗಿ ನಿರ್ಮಿಸಿರುವ, ಆದುದರಿಂದ ಮನುಜನು ಒಳಗೆ ನೋಡುವದನ್ನುಳಿದು ಹೊರಗೆ ನೋಡುವ, ಅಮರಜೀವನವನ್ನು