ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

144
ಸೇವಿಸಬೇಕೆಂಬ ಬಸವಣ್ಣನವರ ಬೋಧೆಯ ತಿರುಳನ್ನು ಅವರ ಪರಂಪರೆಯಲ್ಲಿಯ ಸರ್ವಜ್ಞನ ಕೆಳಗಿನ ವಚನದಲ್ಲಿ ಚೆನ್ನಾಗಿ ಅರುಹಲಾಗಿರುವದು :

ನೀರ ಬೊಬ್ಬುಳಿ ನೆಚ್ಚಿ ಸಾರಿ ಕೆಡದಿರು ಮರುಳೇ !.
ಸಾರಗುಣಿಯಾಗು, ನಿಜ ತಿಳಿ, ಸರುವರೊಳು.
ಕಾರಣಿಕನಾಗು, ಸರ್ವಜ್ಞ.

.

ದೇಹವು ನೀರ ಗುಳ್ಳೆಯಂತೆ ಅನಿತ್ಯ-ಕ್ಷಣಭಂಗುರ. ಅದನ್ನು ನೆಚ್ಚಿ ಅದರಿಂದ ಲಭಿಸುವ ಸುಖದುಃಖಗಳ ಜಾಲದಲ್ಲಿ ಸಿಲುಕಿ ಕೆಡಬಾರದು. ಸಾರಭೂತವಾದ ಆತ್ಮನನ್ನು ಅರಿಯಬೇಕು. ಸಾರಗುಣಗಳನ್ನು ಪಡೆಯಬೇಕು. ಅದರಿಂದ ತನ್ನ ಹಾಗೂ ಅನ್ಯರ ಶಾಶ್ವತ ಕಲ್ಯಾಣವನ್ನು ಸಾಧಿಸಬೇಕು.

ತನ್ನ ಗುಣದೋಷಗಳನ್ನು ಅರಿಯುವದು, ತನ್ನ ತಾನರಿಯುವುದ' ರ ಎರಡನೆಯ ಅರ್ಥ. ತನ್ನಲ್ಲಿ ಅದಾವ ಗುಣಗಳು ನೆಲೆಸಿರುವವು? ಅದಾವ ಅವಗುಣಗಳು ನೆಲೆಸಿರುವವು? ಗುಣಗಳನ್ನು ಬೆಳೆಸುವದೆಂತು? ಅವಗುಣಗಳನ್ನು ಅಳಿಸುವದೆಂತು? ಎಂಬುದನ್ನು ನಾವು ಅರಿಯಬೇಕು. ಇದಕ್ಕೆ ಸರಿಯಾದ ಅಂತರ್ನಿರೀಕ್ಷಣವು ಅಗತ್ಯ. ಮಾನವರು ಸಾಮಾನ್ಯವಾಗಿ ಹೊರನೋಟವುಳ್ಳವರು. ಒಳನೋಟವುಳ್ಳವರು ಅವರಲ್ಲಿ ವಿರಲ. ಏಕೆಂದರೆ ಕಠೋಪನಿಷತ್ತು ಅರುಹುವ ಮೇರೆಗೆ -

ಪರಾಂಚಿ ಖಾನಿ ವ್ಯತೃಣತ್ ಸ್ವಯಂಭೂಃ -
ತಸ್ಮಾತ್ ಪರಾಶ್ವತಿ ನಾಂತರಾತ್ಮನ್ |
ಕಶ್ಚಿತ್ ಧೀರ: ಪ್ರತ್ಯಗಾತ್ಮಾನಮೈಕ್ಷತ್
ಆವೃತ್ತ ಚಕ್ಷುರಮೃತತ್ವಮಿಚ್ಛನ್ ||

ಐಐ4-1

“ಭಗವಂತನು ನಮ್ಮ ಇಂದ್ರಿಯಗಳನ್ನು ಹೊರನೋಟ-ಹೊರ ಓಟವುಳ್ಳವುಗಳನ್ನಾಗಿ ನಿರ್ಮಿಸಿರುವ, ಆದುದರಿಂದ ಮನುಜನು ಒಳಗೆ ನೋಡುವದನ್ನುಳಿದು ಹೊರಗೆ ನೋಡುವ, ಅಮರಜೀವನವನ್ನು