ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

20

॥ಶಿವಯೋಗೀಶ್ವರಾಯ ನಮಃ॥

ಶ್ರೀ ನಿ.ಪ್ರ.ಸ್ವ.
ಮೃತ್ಯುಂಜಯನಗರ
ಮೃತ್ಯುಂಜಯ ಮಹಾಸ್ವಾಮಿಗಳು
ಧಾರವಾಡ
ಶ್ರೀ ಮುರುಘಾಮಠ
೧೬-೬-೧೯೬೬

ಮಹಾನುಭಾವ ಶ್ರೀ ಬಸವಣ್ಣನವರು ಮಾನವತೆಯ ಕಲ್ಯಾಣಕ್ಕಾಗಿ ಹೆಣಗಿದ ಮಹಾಶರಣರು. ಸಮತಾವಾದವನ್ನು ಒತ್ತಿ ಹಿಡಿದು ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಗೂ ಸುಖ ದೊರೆಯಲೆಂದು ಹೆಣಗಿದ ಸತ್ಯವಾದಿಗಳು. ಅವರ ವ್ಯಕ್ತಿತ್ವ ಬಹುಮುಖವುಳ್ಳದಾಗಿದೆ. ನರನು ಶುದ್ಧ ಆಚರಣೆಯಿಂದ, ಸತ್ಯಶುದ್ಧ ಕಾಯಕದಿಂದ ಕೈಲಾಸ ಕಾಣಬಲ್ಲನೆಂಬುದಕ್ಕೆ ಅವರ ಜೀವನವೇ ಸಾಕ್ಷಿಯಾಗಿದೆ. ಅವರನ್ನು ಕುರಿತು ಪುರಾಣಕವಿಗಳು, ಇತಿಹಾಸಜ್ಞರು, ತತ್ತ್ವಜ್ಞಾನಿಗಳು ಈಗಾಗಲೇ ಅನೇಕ ಕೃತಿಗಳನ್ನು ರಚಿಸಿದ್ದಾರೆ, ರಚಿಸುತ್ತಿದ್ದಾರೆ. ಆ ಮಾಲಿಕೆಯಲ್ಲಿ ಸೇರಲು ಶ್ರೀ ಮನೋಹರ ಶ್ರೀ ದೇಶಪಾಂಡೆ, ಎಂ.ಎ., ಅವರು ಯತ್ನಿಸಿದ್ದಾರೆ. ಲಿಂಗೈಕ್ಯ ಶ್ರೀ ಗುರು ಮೃತ್ಯುಂಜಯ ಮಹಾಸ್ವಾಮಿಗಳವರಿಗೆ ಚಿರಪರಿಚಿತರು. ಅವರ ಪ್ರಯತ್ನ ಯಶಸ್ವಿಯಾಗಿದೆ ಎಂದೇ ನಮ್ಮ ಭಾವನೆ. ಶ್ರೀ ಬಸವಣ್ಣನವರ ದಿವ್ಯ ಜೀವನವನ್ನು ಒಳಹೊಕ್ಕು ನೋಡಿ ಅಲ್ಲಿರುವ ಒಳತಿರುಳನ್ನು ಓದುಗರಿಗೆ ನೀಡಿದುದು, ಶ್ರೀ ಶಿವಯೋಗಿ ಗಳಿಗೆ ತುಂಬಾ ಆನಂದದಾಯಕವಾದ ಸಂಗತಿ. ಶ್ರೀ ಶಿವಯೋಗಿಗಳು ಅವರ ಸತ್ಕಾರ್ಯಕ್ಕಾಗಿ ಸಕಲ ಸಂಪದ ನೀಡಲೆಂದು ಹಾರೈಸುತ್ತೇನೆ.

ಲೋಕ ಶಿಕ್ಷಣ ಟ್ರಸ್ಟನವರು ಇಂಥ ಉಪಯುಕ್ತ ಗ್ರಂಥಗಳನ್ನು ಪ್ರಕಾಶನ ಮಾಡುತ್ತಿರುವುದು ಸಂತೋಷದಾಯಕ ಸಂಗತಿಯಾಗಿದೆ.

ಮಹಾಂತ ಸ್ವಾಮಿಗಳು
ಶ್ರೀ ಗುರು ಮೃತ್ಯುಂಜಯ ಸ್ವಾಮಿಗಳು
ಶ್ರೀ ಮುರುಘಾಮಠ