52
ಸಿದ್ದರಸನ ನಿಧನದ ತರುವಾಯ ಆತನ ಹಿರಿಯ ಆಸ್ತಿಯೆಲ್ಲ ತನ್ನಿಂದ
ತಾನೇ ಬಸವಣ್ಣನವರಿಗೆ ಲಭಿಸಿತು. ಬಿಜ್ಜಳರಾಯನೂ ಅದಕ್ಕೆ
ಒಪ್ಪಿಕೊಂಡ. ಇಷ್ಟೇ ಅಲ್ಲ ಸಿದ್ಧರಸನು ಈವರೆಗೆ ವಹಿಸಿದ್ದ ದಂಡಾಧಿಪನ ಅಧಿಕಾರವನ್ನೂ ಆತನು ಬಸವಣ್ಣನವರಿಗೆ ಕೊಡಮಾಡಿದ.
ಬಸವಣ್ಣನವರ ಬುದ್ಧಿವೈಭವವೂ ಶೀಲಸೌರಭವೂ ಶಾಸನ
ಕೌಶಲದಕ್ಷತೆಗಳೂ ಈ ಮೊದಲೇ ರಾಯನ ಗೌರವವನ್ನು ಪಡೆದಿದ್ದವು.
ಆತನ ಮನಸ್ಸನ್ನು ಸೆಳೆದಿದ್ದವು, ಮುಗ್ಧಗೊಳಿಸಿದ್ದವು. ಸಿದ್ಧರಸನ ತೆರವಾದ
ಸ್ಥಾನವನ್ನು ಪಡೆಯಲು ಬೇರಾರೂ ಸಮರ್ಥರಿರಲಿಲ್ಲ. ಆದುದರಿಂದ
ಬಸವಣ್ಣನವರೇ ಅದನ್ನು ಸಮರ್ಥ ರೀತಿಯಿಂದ ನಿರ್ವಹಿಸಬಲ್ಲರೆಂದು
ಬಗೆದು ರಾಯನು ಬಸವಣ್ಣನವರನ್ನು ಕೇಳಿಕೊಂಡನು. ರಾಯನ ಈ
ಕೊಡುಗೆಯನ್ನು ಅವರು ಸಂತೋಷದಿಂದ ಸ್ವೀಕರಿಸಿದರು ಮತ್ತು ಕೆಲವೇ
ದಿನಗಳಲ್ಲಿ ಅವರು ಸಿದ್ಧರಸನ ಅಧಿಕಾರಸ್ಥಾನವನ್ನು ಪಡೆದು ದಂಡಾಧಿಪರೂ ಪ್ರಧಾನಮಂತ್ರಿಗಳೂ ಆದರು. ಬಸವಣ್ಣನವರ ಅಲೌಕಿಕ
ಭಾಗ್ಯವು ಈ ಬಗೆಯಾಗಿ ಶಿಖರವನ್ನು ಮುಟ್ಟಿತು.
ದಂಡಾಧಿಪ :
ಪರಶಿವನ ಕರುಣದಿಂದ ನಡೆದ ಇನ್ನೊಂದು ಸಂಗತಿಯು ಈ
ಶಿಖರಕ್ಕೆ ಕಳಸವನ್ನಿಟ್ಟಿತು. ಬಸವಣ್ಣನವರು ದಂಡಾಧಿಪನ ಹಾಗೂ
ಪ್ರಧಾನಮಂತ್ರಿಗಳ ಕೆಲಸವನ್ನು ನಿರ್ವಹಿಸಲು ಪ್ರಾರಂಭಿಸಿದ ತರುವಾಯ
ಕೆಲದಿನಗಳಲ್ಲಿಯೇ ಬಿಜ್ಜಳನ ಮನಸ್ಸಿನಲ್ಲಿ ಇನ್ನೊಂದು ಯೋಚನೆಯು
ತಲೆದೋರಿತು. ಬಿಜ್ಜಳನಿಗೆ ನೀಲಲೋಚನೆಯೆಂಬ ಅತಿ ಸುಂದರಿಯಾದ
ತಂಗಿಯಿದ್ದಳು. ಆಕೆಯನ್ನು ಈ ಪ್ರಭಾವಯುತ ಮಂತ್ರಿಗೆ ಕೊಟ್ಟು ಆತನ
ಆಪ್ತಸಂಬಂಧವನ್ನು ಬೆಳೆಸಬೇಕು. ಅದರ ಫಲವಾಗಿ ಒಬ್ಬ ಸಮರ್ಥ
ಬೆಂಬಲಿಗನನ್ನು ಪಡೆದು ತನ್ನ ಆಸನವನ್ನು ತುಂಬ ಭದ್ರಪಡಿಸಬೇಕು,
ಎಂದು ಬಿಜ್ಜಳರಾಯನು ಯೋಚಿಸಿದನು. ಆದರೆ ಇದಾಗುವದೆಂತು?
೨೧. ದ.ಭ. ಪು. XXII ೧೩೫
ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೭೧
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ