ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
55

ಮೊದಲಿನ ವಿವಾಹದಂತೆ- ಅದೇಕೆ ಅದಕ್ಕೂ ಮಿಗಿದಾದ ವೈಭವದಿಂದ ಜರುಗಿತು. ಅಂದು ಮುನಿಗಳು ಅಲ್ಲಿಗೆ ದಯಮಾಡಿಸಿ, ವಧೂವರರನ್ನು ಆಶೀರ್ವದಿಸಿ, ಸಂಗಮಕ್ಕೆ ಮರಳಿದರು. ಗಂಗಾದೇವಿಯು ನೀಲಲೋಚನೆಯನ್ನು ತನ್ನ ತಂಗಿಯಂತೆ ಪ್ರೀತಿಸತೊಡಗಿದಳು. ನಾಗಮ್ಮನಿಗಂತೂ ಈ ಇಬ್ಬರೂ ಅಕ್ಕರದ ನಾದಿನಿಯರಲ್ಲಿ ಅತೀವ ನಲ್ಮೆಯು ಜನಿಸಿತು, ನೆಲೆಸಿತು. ಕಾಲಕ್ರಮದಲ್ಲಿ ನೀಲಲೋಚನೆಗೂ ಒಂದು ಗಂಡುಮಗು ಜನಿಸಿತು. 'ಸಂಗ'ನ ನೆನವಿಗಾಗಿ ಗಂಗಾದೇವಿಯ ಮಗನನ್ನು 'ಸಂಗ' ನೆಂದು ಹೆಸರಿಸಿದಂತೆ, ಸಿದ್ದರಸನ ನೆನವಿಗಾಗಿ ಈ ಮಗುವನ್ನು 'ಸಿದ್ಧರಸ'ನೆಂದು ಹೆಸರಿಸಲಾಯಿತು.


ಮುಂದೆ ಕೆಲಕಾಲದಲ್ಲಿಯೇ ಈಶಾನ್ಯ ಮುನಿಗಳು ಒಮ್ಮೆಲೇ ಸಮಾಧಿಯನ್ನು ಪಡೆದರು. ಇನ್ನು ನನ್ನ ಕಾರ್ಯವು ಮುಗಿಯಿತು. ಮುಂದಿನದನ್ನು ನೆರವೇರಿಸುವುದು ಪ್ರಭುವಿನ ಹೊಣೆ' ಎಂದು ಶಿಷ್ಯರಿಗೆ ಅರುಹಿ ಮುನಿಗಳು ಪರಶಿವನೆಡೆ ತೆರಳಿದರು. ಮರೆಯಲ್ಲಿ ಮೆರೆಯುವ ಇಂಥ ಹಿರಿಯರು ನಿಜವಾಗಿ ಧನ್ಯರು! ಇಂಥವರ ಇರುವಿನಿಂದಲೇ ಭಕ್ತಿ ಉಳಿದು, ಬೆಳೆದು, ಸಮಾಜವು ಉಳಿಯುವದು ಬೆಳೆಯುವದು. ಮುನಿಗಳು ತಮಗೆ ತಿಳಿಸದೆ, ಅಕಸ್ಮಾತ್ತಾಗಿ ಸಮಾಧಿಸ್ಥರಾದ ಸುದ್ದಿಯನ್ನು ಕೇಳಿ ಬಸವಣ್ಣನವರಿಗೆ ಸಿಡಿಲೆರಗಿದಂತೆ ಆಯಿತು. ಅವರು ತುಂಬ ಕಳವಳಗೊಂಡರು. ಕೂಡಲೇ ಅವರು ತಮ್ಮ ಬಳಗದವರೊಡನೆ ಸಂಗಮಕ್ಕೆ ತೆರಳಿ, ಭಕ್ತಿಭಾವದಿಂದ ಸದ್ಗುರುಗಳ ಅಂತ್ಯವಿಧಿಯನ್ನು ತೀರಿಸಿದರು. ಶಿಷ್ಯರಿಂದ ಗುರುಗಳ ಕೊನೆಯ ಸಂದೇಶವನ್ನು ಅರಿತು, ಬಸವಣ್ಣನವರು ಕಲ್ಯಾಣಕ್ಕೆ ತೆರಳಿದರು ಹಾಗೂ 'ಪ್ರಭುವಿನ ಬರವನ್ನು ಕಾಯುತ್ತ ತಮ್ಮ ದೈನಂದಿನ ಕಾರ್ಯದಲ್ಲಿ ನಿರತರಾದರು.
ಗೃಹಸ್ಥಾಶ್ರಮ :
ಸುಸಂಸ್ಕೃತರೂ ಸುಶೀಲರೂ ಆದ ಇಬ್ಬರು ಪತ್ನಿಯರೊಡನೆ ಬಸವಣ್ಣನವರ ಸಂಸಾರವು ಸರಾಗವಾಗಿಯೇ ಸಾಗಿತು. ಲೌಕಿಕ ದೃಷ್ಟಿಯಿಂದ ಅದರಲ್ಲಿ ಯಾವ ಬಗೆಯ ಕೊರತೆಯೂ