ಪುಟ:ಶ್ರೀ ಮದಾನಂದ ರಾಮಾಯಣ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Mu ಮುದಾನಂದ ರಾಮಾಯಣ, ರಮೇಶ್ವರಕ್ಕೆ ಹೋಗಿ ರಾಹುಲಿಂಗನಿಗೆ ಗಂಗಾಜಲಗಳಿಂದ ಸಾಸಮಾಡಿಸಿ, ಧನುಷ್ಟಿ ಯಲ್ಲಿ ಸ್ನಾನಮಾಡಿದನು ಮತ್ತು ಅಲ್ಲಿ ಕೋಟಿತೀರ್ಥವೆಂಬ ಒಂದು ಪುಣ್ಯಕ್ಷೇತ್ರವನ್ನು ನಿರ್ಮಾಣಮಾಡಿದನು. ಅನಂತರ ಸೇತುಮಾಧವನ ದರ್ಶನಮಾಡಿಕೊಂಡು ವಿಮಾನಾರೂಢನಾಗಿ ಸಮಸ್ತ ಪರಿವಾರದೊಡನೆ ಆಕಾಶ ಮಾರ್ಗದಿಂದ ಪ್ರಯಾಣಬೆಳಸಿದನು. ಅನಂತರ ಶ್ರೀ ರಾಮನು ತುಂಬ್ರಪರ್ಣಿ ಸಂಗಮದಲ್ಲಿ ಸ್ನಾನದಾನಾದಿ - ಗಳನ್ನು ನೆರವೇರಿಸಿ, ಸಮುದ್ರ ತೀರದಲ್ಲಿರುವ ಸ್ಕಂಧನನ್ನು ಪೂಜಿಸಿ, ತಾಂಬ್ರಹ ರ್m ತೀರದಲ್ಲಿರುವ ಪುಣ್ಯಕ್ಷೇತ್ರಗಳನ್ನು ನೋಡುತ್ತ ಪ್ರಯಾಣಮಾಡಿದನು. ಮಾರ್ಗದಲ್ಲಿ ತೋತಾಡಿ, ಕನ್ಯಾಕುಮಾರಿ ಈ ಪ್ರದೇಶಗಳು ಸಂಧಿಸಿದವು. ಕನ್ಯಾ ಕುಮಾರಿಯು ಒಬ್ಬ ಬ್ರಾಹ್ಮಣನ ಮಗಳು. ಈಕೆಯ ಮೊದಲು ನಾಗಾಜಿನ ಇತ್ರಿಯಾಗಿದ್ದಳು, ಅಹಿರಾವಣನ ಮನೆಯಲ್ಲಿ ರುವಾಗ ಈ ತರಣೆಗೆ ಶ್ರೀ ರಾಮ ನ ದರ್ಶನವಾಗಿತ್ತು. ಆ ಬ್ರಾಹ್ಮಣವಿಯು ಶ್ರೀ ರಾಮನನ್ನು ನೋಡಿ “ಎಳ್ಳೆ ರಾಮಭದ್ರನೇ, ನಾನು ಬಹಳ ದಿವಸಗಳಿಂದಲೂ ಪ್ರತಸ್ಥಳಗಿರುವೆನು. ನನ್ನ ತಂದೆಯು ನನ್ನನ್ನು ಸುರೇಂದ್ರನಿಗೆ ಲಭೂಡಿಕೊಡಲು ನಿಶ್ಚಯಿಸಿ ಆತನನ್ನು ತನ್ನ ಗ್ರಾಮಕ್ಕೆ ಕರೆತಂದಿರುವನು. ಆದರೆ ನೀನು ತೀರ್ಥಯೂತ್ರೆಗೆ ಬಂದ ವರ್ತಮನ ವನ್ನು ಕೇಳಿ, ನಿನ್ನನ್ನೇ ಪಾಣಿಗ್ರಹಣ ಮಡುವೆನೆಂದು ಹಟಹಿಡಿದು ನಾನು ಇಲ್ಲಿಗೆ ಬಂದಿರುವೆನು. ನನ್ನ ವಿಷಯದಲ್ಲಿ ತಂದೆಗೆ ಬಹಳ ಕೋಪಉoಟಾಗಿರುವದು ನನ್ನ ವಿವಾಹಕ್ಕಾಗಿ ಏನೇನು ಸಾಹಿತ್ಯಗಳನ್ನು ನನ್ನ ತಾಯಿಯು ಮೂಡಿಟ್ಟಿದ್ದಳೋ, ಆ ವೆಲ್ಲವನ್ನೂ ನನ್ನ ತಂದೆಯು ಕೋಪದಿಂದ ಸಮುದ್ರಕ್ಕೆ ಸೆದಿರುವನು. ಎಲೈ ದ ಯುನಿಧಿಯೇ, ನೋಡು, ತರಂಗಗಳಲ್ಲಿ ಆ ಸಾಮಗ್ರಿಗಳು ತೇಲಿ ಬರುತ್ತಲಿವೆ. ನೀನು ದೀನಳಾದ ನನಗೆ ದರ್ಶನ ಕೊಟ್ಟೆ. ಇನ್ನು ತಡ ಮೇಕೆ? ದಾಸಿಯಾದ ನನ್ನನ್ನು ಉದ್ದಾರವೂಡ,' ಎಂದು ಪ್ರಾರ್ಥಿಸಿದಳು. ಈ ಮೂತುಗಳನ್ನು ಕೇಳಿ ಶ್ರೀರಾಮನು “ಎಲ್ಲೆ” ತರುಣಿಯೆ, ನಾನು ಈ ರಾವತಾರದಲ್ಲಿ ಏಕಪವ್ರತವನ್ನು ಹೊಂದಿ ರುವೆನು ಮುಂದೆ ಕೃಷ್ಣಾವತಾರದಲ್ಲಿ ನಿನ್ನ ಪಾಣಿಗ್ರಹಣ ಮಡುವೆನು' ಎಂ ದು ಮಧುರವಾಣಿಗಳಿಂದ ಸಮಧಾನ ಪಡಿಸಿದನು, ಆ ಬ್ರಾಹ್ಮಣ ಪುತ್ರಿಯೂ ಕೂಡ ಸತ್ಯಸಂಧನಾದ ಶ್ರೀರಂಮನ ತೂತುಗಳನ್ನು ಶಿರಸಾವಹಿಸಿ, ತಪಸ್ಸು ಮ ಡಲು ಹೊರಟು ಹೋದಳು. ಮುಂದೆ ಈ ಕನ್ಯಾಮಣಿಯೇ ತನ್ನ ತಪೋಬಲ ದಿಂದ ಜಾಂಬವಂತನಮಗಳಾಗಿ ಹುಟ್ಟಿ,ಶ್ರೀಕೃಷ್ಣನ ಪಾಣಿಗ್ರಹಣವೂಡುವಳು,