ಪುಟ:ಶ್ರೀ ಮದಾನಂದ ರಾಮಾಯಣ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ue ಶ್ರೀಮದಾನಂದ ಕಳೂಯಣ ದನು. ವ್ಯಾಸರು ಹಾಗೆಯೆ ಆಗಲಿ' ಎಂದು ಆಶೀರ್ವದಿಸಿ-loಾಮಚಂದನ, ಏಕಪತ್ನಿ ವ್ರತವನ್ನು ಕಾಪಾಡುವದು ಬಹಳ ಕಠಿಣ! ಇogಿ ಐಶ್ವರ್ಯ, ಚ ಕ್ರವರ್ತಿಯ ಪದವಿ, ಪೂರ್ಣಯವನ, ಇಷ್ಟು ಅನರ್ಥ ಸಾಧನಗಳಿದ್ದೂ ನೀನು ಇವೃತವನ್ನು ನಿಯಮದಿಂದ ನಡೆಸುವೆಯಲ್ಲಅಹಹ 111 ನೀನೇ ಧನ್ಯನು. ಈ ವೃತದ ಫಲವು ನಿನಗೆ ಮುಂದಿನ ಜನ್ಮದಲ್ಲಿ ಅಂದರೆ ಕೃಷ್ಣಾವತಾರದಲ್ಲಿ ದೊ ರೆಯುವದು, ಆಗ ನಿನಗೆ ಅನೇಕ ಪತ್ತಿಯಾಗುವರು' ಎಂದು ಮಾತನಾಡಿದ ರು. ಈ ಮಾತುಗಳನ್ನು ಕೇಳಿ ಶ್ರೀ ರಾಮನು (ಮೀ, ಈ ಫಲವನ್ನು ಹೊಂ ದಲು ವ್ರತವ್ಯಾವದಾದರೂ ಇರುವದೆ? ಇದ್ದರೆ ಅದನ್ನು ನನಗೆ ದಯವಿಟ್ಟು ಹೇ ಇರಿ, ನಾನು ಅದನ್ನು ಮಾಡುವೆನು' ಎಂದನು. ಆಗ ಮಹರ್ಷಿಗಳು ಶ್ರೀ ರಾಮ ನೇ, ಕೇಳು, ಸೀತೆಯ ಭಾರದಷ್ಟು ಸುವರ್ಣದಿಂದ ಒಂದೊಂದರಂತ ಹದಿನಾರು ಪ್ರತಿಮೆಗಳನ್ನು ಸಿದ್ದ ಮಾಡಿಸಿ, ಅವುಗಳನ್ನು ಸರಯೂತೀರದಲ್ಲಿ ಬ್ರಾಹ್ಮಣರಿಗೆ ದಾನ ಮಾಡು. ಈ ಇತದ ಫಲವನ್ನು ಖಂಡಿತವಾಗಿ ಮುಂದಿನ ಜನ್ಮದಲ್ಲಿ ಹೊಂದುವೆ ಎಂದು ಹೇಳಿದರು ಶ್ರೀ ರಾಮನು ಆವೃತವನ್ನು ಯಥಾಸಾಂಗವಾಗಿ ನೆರವೇರಿಸಲು ನೀರಿನ ಮೇತನಾಗಿ ಸರಯೂ ತೀರಕ್ಕೆ ಪ್ರಯಾಣಮಾಡಿದನು. ಅಲ್ಲಿ ವಸ್ತ್ರಾಭರಣಗಳಿಂದ ಪ್ರಕಾಶಮನಗಳಾದ ಅ ಹದಿನಾರು ಪ್ರತಿಮೆಗಳನ್ನು ಬ್ರಾಹ್ಮಣರಿಗೆ ದಾನಮಾಡಿದ ನು, ಆ ದಾನದಿಂದ ಬ್ರಾಹ್ಮಣರು ಬಹಳ ಹರ್ಷಗೊಂಡು, 'ಈ ವೃತದಿಂದ ಶ್ರೀ ಕಮುನಿಗೆ ಒಂದಕ್ಕೆ ಸಾವಿರದಷ್ಟು ಫಲವಾಗಲಿ? ಎಂದು ಹರಿಸಿದರು. ಸೀnda ಮರು ಕೆಲವು ದಿವಸಗಳವರೆಗೆ ನಿರಯ ತೀರದಲ್ಲಿ ವಾಸವಾಗಿದ್ದರು. ಆಗ ಚೆ ತ್ರ ಸ್ನಾನಕ್ಕಾಗಿ ದೇವತೆಗಳು, ಗಂಧರ್ವರು, ಮುನಿಗಳು ಇವರೆಲ್ಲರೂ ಬರುತ್ತಿದ್ದೆ ರು. ಒಂದು ದಿವಸ ದೇವಶಾಸ್ತ್ರೀಯರು ಶ್ರೀ ರಾಮನ ಸೌಂದರ್ಯವನ್ನು ನೋಡಿ ಮೋಹಿತರಾಗಿ, ಸೀತೆಯು ನಿದ್ರೆ ಮಾಡುವ ಸಮಯವನ್ನು ನೋಡಿ, ಸುಂದರ ದ ವೇಷಗಳನ್ನು ಧರಿಸಿ ಶ್ರೀ ರಾಮನ ಬಳಿಗೆ ಬಂದರು. ರಪಾಲಕರು ಆತ ರುಣಿಯರನ್ನು ಒಳಗೆ ಬಿಡದೆ ತಡೆವರು ಆ ತರುಣಿಯರು, ಈಗ ಶ್ರೀ ರಾಮನ ದ wಸವಾಗದೆ ಹೋದರೆ, ನಾವೆಲ್ಲರೂ ಸರಯೂ ನದಿಯನ್ನು ಪ್ರವೇಶಿಸಿ ಪ್ರಾಣ ಆಗ ಮೂಡುವೆವೆಂದು ಪ್ರತಿಜ್ಞೆ ಮಾಡಿದರು. ದೂತರು ಈ ಕರ ಕೃತ್ಯವನ್ನು ಶ್ರೀಮನಿಗೆ ವಿಜ್ಞಾಪಿಸಿದರು. ಆಗ ಶ್ರೀ ರಾಮನು ಆ ತರುಣಿಯರನ್ನು ಒಳಕ್ಕೆ ಬಿಡುವಂತೆ ಆಜ್ಞಾಪಿಸಿದನು. ಬಳಿಕ ಆ ದೇವತಾಸ್ತ್ರೀಯರು ಒಳಗೆ ಬಂದು ಶ್ರೀ