ಪುಟ:ಶ್ರೀ ಮದಾನಂದ ರಾಮಾಯಣ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜನ್ಮಕುಂಡ. ಓಡಿಸಿದನು, ದಾರಿಯಲ್ಲಿ ತಮಾ, ಗೌತಮೀ, ಜಾಹ್ನವೀ, ಯಮುನಾ, ದುಂ ದಾಕಿನೀ ಇವೇ ಮೊದಲಾದ ಪುಣ್ಯ ನದಿಗಳನ್ನು ದಾಟಿ ಚಿತ್ರಕೂಟಪರ್ವತದ ಬ ಳಿಗೆ ರಥವು ಬಂದು ನಿಂತಿತು. ಅಲ್ಲಿ ಸೀತಾದೇವಿಯನ್ನು ಒಂದು ದೃಕ್ಷದ ಕೆಳಗೆ ಇಳಿಸಿ, ಲಕ್ಷಣನು 'ತಾಯ, ಶ್ರೀ ರಾಮನ ಆಜ್ಞೆಯಂತೆ ನಿನ್ನ ನ್ನು ಈ ತಪೋವನ ದ ಬಳಿಯಲ್ಲಿ ಬಿಟ್ಟಿರುವೆನು. ಇನ್ನು ನೀವು ಈ ಆಶ್ರಮಕ್ಕೆ ಪ್ರಯಾಣ ಮಾಡಿರಿ, ಮಾತೃಶ್ರೀಯವರೇ, ಆಜ್ಞಾಧಾರಕನಾದ ನಾನು ಅದಕ್ಕಿಂತಲೂ ಹೆಚ್ಚು ಹೇಳ ಲು ಶಕ್ತನಲ್ಲ' ಎಂದು ವಿಜ್ಞಾಪಿಸಿ, ಅತಿ ದುಃಖದಿಂದ ರಥದ ಮೇಲೆ ಕುಳಿತು ಆಯೋ ಧೈಯ ಕಡೆಗೆ ತೆರಳಿದನು. ಸೀತಾದೇವಿಯು ತಮ್ಮ ಆಶ್ರಮದ ಬಳಿಗೆ ಬಂದಿರು ವ ಪಾರ್ತಯನ್ನು ಶಿಷ್ಯರಿಂದ ತಿಳಿದು, ವಾಲ್ಮೀಕಿಮುನಿಗಳು ಅಲ್ಲಿಗೆ ಬಂದರು. ಅವರು ಜಾನಕಿಯನ್ನು ಸಮಾಧಾನಗೊಳಿಸಿ, ತಮ್ಮ ಆಶ್ರಮಕ್ಕೆ ಕರೆತಂದರು. ಋಷಿಪತ್ನಿಯರು ಸೀತಾದೇವಿಗೆ ಆರತಿ ಮಾಡಿದರು. ಬಹಳ ಸಂತೋಷದಿಂದ ಸೀತಾದೇವಿಯು ಆಶ್ರಮವನ್ನು ಪ್ರವೇಶಿಸಿದಳು. ಋಷಿಗಳ ಮುಖದಿಂದ ಈಕೆ ಯು ಸಾಕ್ಷ ಲಕ್ಷ್ಮಿಯ ಸ್ವರೂಪಳಿರುವಳು' ಎಂದು ಕೇಳಿ ಮುನಿಪತ್ನಿಯರು ಸೀತೆಯನ್ನು ಅಮೋಚಿತವಾದ ಉಪಚಾರಗಳಿಂದ ಸತ್ಕರಿಸಿದರು. ಮೊದಲೇ ಅಲ್ಲಿಗೆ ಬಂದಿದ್ದ ಸುಮೇಧಾಜನಕರು ಸೀತೆಗೆ ರಾಜೋಪಚಾರಗಳನ್ನು ಮ ಡುತ್ತಿದ್ದರು.

  • ಅತ್ತಲಾ ಲಕ್ಷಣನು ಸೀತೆಯನ್ನು ಅರಣ್ಯದಲ್ಲಿ ಬಿಟ್ಟು ಅಯೋಧ್ಯೆಗೆ ತೆರಳಿ ದನ? ಶ್ರೀ ರಾಮನ ಆಜ್ಞೆಯನ್ನು ರ್ಪೂ್ರವಾಗಿ ನಡೆಸಲಿಲ್ಲವಾದ್ದರಿಂದ ಆತ ನು ಅಯೋಧ್ಯೆಗೆ ಹೋಗಲು ಹೆದರಿದನು. ದುತ್ತು ಈ ಯಮುನಾತೀರದಲ್ಲಿ ಅಗ್ನಿಪ್ರವೇಶ ಮಾಡಬೇಕೆಂದು ನಿಶ್ಚಯ ಮಾಡಿದನು. ಕಷ್ಟಗಳನ್ನು ಕೂಡಹಾಕ ಲು ಅಲ್ಲಲ್ಲಿ ಸಂಚರಿಸುತ್ತ, ಬ್ರಹ್ಮನ ಅಪ್ಪಣೆಯಂತೆ ವಿಶ್ವಕರ್ಮನು ಹೆಗಲ ಮೇಲೆ ಕೊಡಲಿಯನ್ನಿಟ್ಟು ಕೊಂಡು ಅರಣ್ಯದಲ್ಲಿ ಬರುವದನ್ನು ಕಂಡರು. ಅವ ನನ್ನು ನೋಡಿ ಮೈತ್ರಿಯು (ಎಲೈ ಸುರುಷನೆ, ನಾನು ಅಗ್ನಿಪ್ರವೇಶ ಮಾಡ ಬೇಕೆಂದಿರುವೆನು. ನನಗೆ ತಕ್ಕಷ್ಟು ಕಷ್ಟಗಳನ್ನು ಒದಗಿಸಿಕೊಡು. ನಿನಗೆ ಬೇಕಾದಷ್ಟು ಮೂಲ್ಯವನ್ನು ಕೊಡು .ಸು, ಒಂದು ವಶನಾಡಿದನು. ಈ ಮಾತು ಗಳನ್ನು ಕೇಳಿ ಆ ಮನುಷ್ಯನು (ಎಲೈ ರಾಜತನಯನೆ, ನೀನು ಇಂಧಾ ಅರಣ್ಯದಲ್ಲಿ ದೇಹತ್ಯಾಗಮಾಡುವದಕ್ಕೆ ಕಾರಣ..?” ಎಂದು ಕೇಳಿದರು. ಆಗ ಲಕ್ಷಣ ನು ತನ್ನ ಪೂರ್ವ ವೃತ್ತಾಂತವನ್ನು ತಿಳುಹಿ, ಮತ್ತೂ ಕಷ್ಟಗಳನ್ನು ಕೂಡಿಸಿಕ