ಪುಟ:ಶ್ರೀ ಮದಾನಂದ ರಾಮಾಯಣ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೨ ೧೯೨ ಶ್ರೀಮದಾನಂದ ಕಾಮಾಯಣ, - - - - - - - - - - - - - - - - - www- - >• • ಗಳೆಲ್ಲ ಹತರಾಗುವರಲ್ಲ” ಎಂದು ಚಿಂತಿಸಿ, ಆತನು ಈ ಎರಡು ಅನರ್ಧಗಳ ತನಗೆ ಬರದಂತೆ ಮೋಹನಾಸ್ತ್ರವನ್ನು ಪ್ರಯೋಗಿಸಿದನು. ಆಗ ಭರತನೇ ಮೊದಲಾದ ಸಮಸ್ತರೂ ಮೂರ್ಛಿತರಾದರು. ಅನಂತರ ಲವನು ಸುಗ್ರೀವ, ಅಂಗದ, ಭರತ, ಮಾರುತಿ ಅವರನ್ನು ತಾಯಿಗೆ ತೋರಿಸಲು ಕರೆತಂದನು. ಆಗ ಅವರಿಗೆ ದೇಹ ಭಾಸವಿರಲಿಲ್ಲ. ಅವರನ್ನು ನೋಡಿ ಸೀತಾದೇವಿಯು ಅತ್ಯಾಶ್ಚರ್ಯಪಟ್ಟು, ಪರ್ಣ ಶಾಲೆಯಲ್ಲಿ ಅವರನ್ನು ಕಾಪಾಡಿದಳು. ಈ ವರ್ತಮಾನವನ್ನು ಕೇಳಿ ಶ್ರೀ ರಾಮ ನು ವಿಸ್ಮಿತನಾಗಿ ಲಕ್ಷ್ಮಣನನ್ನು ಕುರಿತು-ತಮ್ಮಾ ಲಕ್ಷಣಾ, ಇಂಧ ಪರಾಕ್ರಮ ವನ್ನು ಯಾರಲ್ಲ ನೋಡಿರಲಿಲ್ಲ, ಈಗ ಏನು ಮಾಡತಕ್ಕದ್ದು?' ಎಂದು ಮಾ ತನಾಡಿದನು. ಅಣ್ಣನ ಈ ಮಾತುಗಳನ್ನು ಕೇಳಿ, ಲಕ್ಷ್ಮಣನು ಮಹಾಸ್ವಾಮಿ, ಯೋಚನೆ ಮಾಡಬಾರದು. ನಾವು ಈಗಲೇ ಹೋಗಿ ಆ ಬಾಲಕನನ್ನು ತಮ್ಮ ಸನ್ನಿಧಿಗೆ ಕರೆ ತರುವೆನು' ಎಂದು ನುಡಿದು, ರಥವನ್ನೇರಿ ಪರ್ಣಶಾಲೆಯ ಬಳಿಗೆ ಬಂದನು. ಲವ ನು ಈ ಸಂಗತಿಯನ್ನು ಕೇಳಿ, ಧನುರ್ಧಾರಿಯಾಗಿ ಲಕ್ಷ್ಮಣನ ಎದುರಿಗೆ ನಿಂತರು. ಈ ಸುಕುಮರದೇಹಗಳ ಬಾಲಕನನ್ನು ನೋಡಿ ಲಕ್ಷಣನು ಎಲ್ಲಿ ಬ್ರಹ್ಮಚಾರಿ ಯೋ, ನನ್ನ ಮೇಲೆ ಇಟ್ಟು ಮರೆತು ಬರಬೇಡ, ಜಾಲಕನೊಡನೆ ಯುದ್ಧ ಮಾಡುವದು ವೀರನಾದ ನನಗೆ ಯೋಗ್ಯವಾದದ್ದಲ್ಲ, ನಿನ್ನ ಮುಂದಿಂದ ರಾಮಾ ಯಣವನ್ನು ಕೇಳಬೇಕೆಂದು ಶ್ರೀ ರಾಮನ ಬಯಕೆ ಇರುತ್ತದೆ. ಆದ್ದರಿಂದ ಸಿಕ್ಕ * ನಾನು ಕೊಲ್ಲ.ವವಿಲ್ಲ ನಮ್ಮ ವೀರರಾದ ಸೇನಾಪತಿಗಳನ್ನು ನಮಗೊಪ್ಪಿಸಿ, ಯಜ್ಞಯಾಶ್ವವನ್ನು ತೆಗೆದುಕೊಂಡು ಬಂದು ಶ್ರೀ ರಾಮನಿಗೆ ಶರಣಾಗತನಾಗು. ಇಲ್ಲವಾದರೆ ನಿನ್ನ ಪ್ರಾಣಗಳು ಉಳಿಯಲಿಕ್ಕಿಲ್ಲ” ಎಂದು ಮಾತನಾಡಿದರು. ಈ ಮಾತುಗಳನ್ನು ಕೇಳಿ ಅವನು 'ಎಕ್ಕೆ ಮಿತಿಯೇ, ನಾನು ರಾಮನ ನ್ಯೂ, ನಿನ್ನನ್ನೂ ಬಲ್ಲೆನು. ಸೀತಾದೇವಿಯಂಧ ಅಬಲೆಯರನ್ನು ವಂಚಿಸುವದಕ್ಕೆ ಇವ ನಿಮ್ಮ ರ್ಣ? ನನ್ನ ಮೇಲೆ ಅದು ತಿಲಮಾತ್ರವಾದರೂ ನಡೆಯಲಾರದು. ಸೀತೆಯು ದುಃಖವನ್ನು ಪರಿಹಾರಮಾಡುವದಕ್ಕಾಗಿಯೇ ಋಷಿಗಳು ನನ್ನನ್ನು ಸೃಷ್ಟಿ ಸಿರುವರು. ನಿಮ್ಮಿಬ್ಬರನ್ನೂ ಸೋಲಿಸಿ, ಈ ದಿವಸ ಸೀತೆಯ ದುಃಖವನ್ನು ಪರಿಹ ರಿಸುವೆನು. ಅಹಹ ಆ ಪತಿವ್ರತೆಯನ್ನು ನೀವು ವ್ಯರ್ಥವಾಗಿ ಮೋಸಗೊಳಿಸಿದಿರ ಲ್ಲ? ಆ ಮಹಾತ್ಮಳ ಉಷ್ಣವಾದ ನಿಃಶಾಸಗಳಿಂದ ನಿಮ್ಮ ಸಾಮರ್ಥ್ಯವು ದಗ್ಗ ವಾಗಿದೆಯೆಂದು ತಿಳಿಯತಕ್ಕದ್ದು.' ಎಂದು ಮಾತನಾಡಿದನು. ಈ ಮರ್ಮ