ಪುಟ:ಶ್ರೀ ಮದಾನಂದ ರಾಮಾಯಣ.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Jasmod M ಮಂಗಳ ಧ್ವನಿಯನ್ನು ಕೇಳಿ ಸಮಸ್ತ ಜನರೂ ಇಬ್ಬರಾದರು. ವಿವಾಹ ವಿಧಿ ಯು ಯಂಗವಾಗಿ ನೆರವೇರಿತು. ತನ್ನ ಇಬ್ಬರು ಮಕ್ಕಳ ವಿವಾಹವು ಒಂ ದೇ ಕಾಲದಲ್ಲಿ ನೆರವೇರಿದ್ದಕ್ಕಾಗಿ ಸೀತೆಯು ಒಹಳ ಅನಂದ ಪಟ್ಟಳು, ಭೂರಿ ಕೀರ್ತಿಯ ಪ್ರಾರ್ಥನೆಯಂತೆ ಶ್ರೀ ರಾಮನು ಒಂದು ತಿಂಗಳವರೆಗೆ ಆ ನಗರದಲಿ ವಾಸಮಾಡಿ, ಸೊಸೆಯರನ್ನು ಜೊತೆಗೆ ಕರೆದುಕೊಂಡು ಪರಿವಾರ ಸಮೇತನಾಗಿ ಆಯೋಧ್ಯೆಗೆ ತರಳಿದನು ಮುಂದೆ ಕಲಕಾಲದ ಮೇಲೆ ಶ್ರೀ ರಾಮನ ಜೇಷ್ಠ ಪುತ್ರನಾದ ಕುಶನು ತನ್ನ ಪ್ರಿಯದ ಚಂಪಕದೊಡನೆ ಸರಯೂ ನದಿಯಲ್ಲಿ ಜಲಕ್ರೀಡೆಗಾಗಿ ಹೋಗುವ ನು. ಆ ಕಾಲದಲ್ಲಿ ಚಂಪಕೆಯ ಹಸ್ತಗತವಾದ ಕಂಕಣವು ನದಿಯಲ್ಲಿ ಜಾರಿ ಬೀಳದದು. ಅದನ್ನು ಕುವದನೆಂಬ ನಾಗೇಂದ್ರನ ತಂಗಿಯಾದ ಕುಮುದ್ವತಿ ಯು ಅಪಹರಿಸುವಳು, ಕುಶನು ಆ ಕಂಕಣವನ್ನು ಹುಡುಕಲು ಬಹಳ ಯತ್ತಮಾ ಡವನು. ಅಷ್ಟಾದರೂ ಆ ಕಂಕಣವು ಸಿಗದಿರಲು, ಅತಿಕೋಪದಿಂದ ಸರಯೂ ನದಿಯನ್ನು ತನ್ನ ಬಾಣಗಳಿಂದ ಶೋಷಿಸಲುದ್ಯುಕ್ತನಾಗುವನು. ಈ ಭಯಂಕರ ಕೃತ್ಯವನ್ನು ನೋಡಿ ಸರಯೂ ನದಿಯ ಪ್ರಾರ್ಥನೆಯಿಂದ ಕುಮುದನು ಕುಶನಿಗೆ ಆ ಕಂಕಣವನ್ನೂ ತನ್ನ ತಂಗಿಯಾದ ಕುಮದ್ವತಿ ಎಂಬಕ ನ್ಯಾರತ್ನವನ್ನೂ ಸಮರ್ಪಿ ಸಿ ಶರಣಾಗತನಾಗುವನು. ಈ ರೀತಿ ಈಶನಿಗೆ ಇಬ್ಬರು ಪತ್ನಿಯರಾಗುವರು. ಆ ಕುಮುದ್ವತಿಯ ಉದರದಲ್ಲಿ ಅತಿಥಿ ಎಂಬ ಒಬ್ಬ ಮಗನು ಜನಿಸುವನು. ಅವ ನಿಂದ ಸೂರ್ಯವಂಶವು ಮುಂದೆ ಶಾಖೋಪಶಾಖೆಗಳಿಂದ ಬೆಳೆಯುವದು ಚಂಪ ಕೆಯು ಒಂದು ಹೆಣ್ಣು ಮಗುವನ್ನು ಪಡೆಯುವಳು, ಅಕೆಗೆ ಪಾತ್ರರಾಗುವದಿ ಲ್ಲ. ಈ ರೀತಿ ಕುಶನು ವರನು ವೈಭವದಿಂದ ರಾಜ್ಯ ರಕ್ಷಣವನ್ನು ಮಾಡಿಕೊ೦ ತಿರುವನು ಅವನೇ ಮೊದಲಾದ ಏಳುಮಂದಿ ಮಕ್ಕಳ ವಿವಾಹ ಒಂದಾನೊಂದು ಕಾಲದಲ್ಲಿ ಶ್ರೀ ರಾಮನು ಸತ್ಪುತ್ರರೊಡನೆ ವಿಮಾನದ ಲ್ಲಿ ಕುಳಿತು ವನವಿಹಾರಕ್ಕೋಸ್ಕರ ದಂಡಕಾರಣ್ಯಕ್ಕೆ ತೆರಳಿದನು. ಆಗ ಮಹರ್ಷಿಗಳ ಆಶ್ರಮವನ್ನು ಕಂಡೊಡನೆ ಆತನು ಪುಷ್ಪಕವನ್ನು ಅಲ್ಲೇ ನಿಲ್ಲಿಸಿ ನು ಒಪತ್ರರೊಡನೆ ಆಶ್ರಮವನ್ನು ಪ್ರವೇಶಿಸಿದನು. ಅಗರು ಶ್ರೀರಾಮನ ನ್ನು ನೋಡಿ ಪರಮಾನಂದವನ್ನು ಹೊಂದಿದರು. ಅವರು ಅನ್ನಪೂರ್ಣೆಯನ್ನು ಧ್ಯಾನಮಾಡಲು ಅರುಹಾದೇವಿಯು ಪ್ರಸನ್ನಳಾಗಿ ಅಗರಿಗೆ ಒಂದು ಸುತ