ಪುಟ:ಶ್ರೀ ಮದಾನಂದ ರಾಮಾಯಣ.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿವಾಹಕಾಂಡ. ೨೨೧ - - - - - - - - - ... • - - .. .. ..... .. ದನು. ನಾರದರು ಶ್ರೀ ರಾಮನ ಆ ಮಾತುಗಳಿಗೆ ಸಮ್ಮತಿಸಿದರು. ಬಳಿಕ ಶ್ರೀ ರಾಮಾದಿಗಳು ಭೋಜನಕ್ಕೆ ತೆರಳಿದರು. ಆಗ ಯಪಕೇತುವು ಎಲ್ಲೂ ಕುಣ ಅಲ್ಲ, ಶ್ರೀ ರಾಮನು ಅವನಲ್ಲಿ ರುವನೆಂದು ವಿಚಾರಿಸುವಂತೆ ಲಕ್ಷ್ಮಣನಿಗೆ ಅಜ್ಞ ಪಿಸಿದನು. ಮಿತಿಯು ವಿಜಾರಿಸುವಲ್ಲಿ ಆತನು ಸೇನಾಸಮೇತನಾಗಿ ವನಕ್ಕೆ ಹೋಗಿರುವಂತೆ ತಿಳಿಯಬಂತು. ಅನಂತರ ಸರ್ವರೂ ಭೋಜನ ಮಾಡಿದರು. ಯೂಪಕೇತುವು 83ಿಗೂ ಬರದಿರಲು ಶ್ರೀ ರಾಮಾದಿಗಳಿಗೆ ಬಹಳ ಯೋಚನೆ ಯಾಯಿತು, ಸೀತಯ ಮೊದಲಾದವರು ಊಟಮಾಡದೆ ಕುಳಿತರು. ಈ ವಾರ್ತೆ ಯನ್ನು ಕೇಳಿ ನಾರದರು ಶ್ರೀ ರಾಮಾದಿಗಳಿಗೆ ಯಪಕೇತುವಿನ ಸಮಾಚಾರ ಬನ್ನು ತಿಳುಹಿದರು. ಆಗ ರಾಮಾದಿಗಳಿಗೆ ಸ್ವಲ್ಪ ಸಮಾಧಾನವಾಯಿತು. ದುತ್ತು ಶ್ರೀ ರಾಮನ ಆಜ್ಞೆಯಂತೆ ಶತ್ರಜ್ಞ, ಲವ, ಕು; ಇವರೆಲ್ಲರೂ ಆತನ ಸಹಾಯ ಕಾಗಿ ಸೇನಾಸಮೇತ ಹೊರಟರು.

  • ಅತ್ತಲಾ ಯೂಪಕೇತುವು ಸ್ವಯಂವರ ಮುಹೂರ್ತಕ್ಕೆ ಸರಿಯಾಗಿ ಕಂಬು ಕಂಠನ ನಗರಿಯನ್ನು ಹೊಂದಿದನು, ಈಗಲೇ ಸ್ವಯಂವರವು ನಡೆಯುವದೆಂಬ ವರ್ತಮಾನವನ್ನು ಕೇಳಿ ಆ ರಾಜಕುಮಾರಸು ಕಂಬುಕಂಠನ ಸಭೆಯ ಬಳಿಗೆ ಹೋ ದನು. ಆ ಸಮಯದಲ್ಲಿ ಮದನಸುಂದರಿಯು ತನ್ನ ದಾಸಿಯ ಜೊತೆಗೆ ಹಸ್ತದಲ್ಲಿ ಪುಷ್ಪಮಾಲಿಕೆಯನ್ನು ಧರಿಸಿ ಸಭೆಯೊಳಗೆ ಪ್ರಯಾಣ ಮಾಡುತ್ತಿದ್ದಳು. ಆ ರಾಜ ಪ್ರಿಯಮನಸ್ಸಿನಲ್ಲಿ ನಾನು ಶ್ರೀ ರಾಮನ ಸೊಸೆಯಾಗಲಿಲ್ಲ' ಎಂದು ಬಹಳ ಕೊರತೆಯುಂಟಾಗಿತ್ತು. ಆದರೂ ತಂದೆಯ ಭಯದಿಂದ ಆಕೆಯು ಯಾರಿಗಾದ ಈ ಸ್ವಯಂವರಮಾಲಿಕೆಯನ್ನು ಹಾಕಬೇಕೆಂದು ಹೊರಟಿದ್ದು, ಯೂಪಕೇತು ವು ಈ ಸಂದರ್ಭವನ್ನು ನೋಡಿ ಮೋಹನಾಸ್ತ್ರಪ್ರಯೋಗದಿಂದ ಸಭಾಸದರನ್ನು ಗೊಂಬೆಗಳಂತೆ ಮಾಡಿ, ಮದನ ಸುಂದರಿಯ ಬಳಿಗೆ ಬಂದು ತನ್ನ ನಾಮಗೋತ್ರ ಗಳನ್ನು ತಿಳುಹಿ ರಥದಲ್ಲಿ ಕುಳ್ಳಿರಿಸಿಕೊಂಡು ಆ ನಗರಿಯ ಹೊರಭಾಗದಲ್ಲಿ ಬಂದು ನಿಂತನು. ಮದನಸುಂದರಿಯ ಪರ ಮಹರ್ಷದಿಂದ ಯಪಕೇತ.ವಿನ ಕೊರಳಿಗೆ ಶಮಲಿಕೆಯನ್ನು ಹಾಕಿದಳು. ಮತ್ತು ಯುದ್ಧಕ್ಕೆ ಸಿದ್ಧನಾಗಿರುವ ಪ್ರತಿಯನ್ನು ನೋಡಿ 'ಪ್ರಿಯರೇ, ನೀವು ಒಬ್ಬರೇ ಇರುವಿರಿ, ಈ ರಾಜರೊಡನೆ ಯುದ್ಧ ಮಾ

ಡುವದು ಅಸಾಧ್ಯವಾದೀತ? ಆದಕಾರಣ ನನ್ನ ನ್ನು ಅಯೋಧ್ಯೆಯಲ್ಲಿ ಬಿಟ್ಟು, ಶ್ರೀ ಕಾವಾದಿಗಳೊಡನೆ ಇಲ್ಲಿಗೆ ಬಂದು ಯುದ್ಧ ಮಾಡುವದು ಯುಕ್ತವಾಗಿ ತೋ ರುವದು' ಎಂದು ಪ್ರಾರ್ಥಿಸಿದಳು ೨೭