ಪುಟ:ಶ್ರೀ ಮದಾನಂದ ರಾಮಾಯಣ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಮದಾನಂದ ರಾಮಾಯಣ, ಸೀತೆಯು ಮೆಲ್ಲಗೆ ಅನೆಯಿಂದ ಇಳಿದು, ಕೈಯಲ್ಲಿ ಸುವರ್ಣ ಮಾಲಿಕಯನ್ನು ಧ ರಿಸಿ, ಪ್ರಾಣಪ್ರಿಯನಾದ ಶ್ರೀ ರಾಮನ ಕತೆಗೆ ಪಾದಚಾರಿಯಾಗಿ ನಡೆದಳು. ಬಳಿಕ ಸೀತೆಯು ಪತಿಯ ಸನ್ನಿಧಿಯಲ್ಲಿ ನಿಂತು, ನಾಚಿಕೆಯಿಂದ ಶಿರಸ್ಸನ್ನು ಬಗ್ಗಿಸಿ, ಕಡೆಗಣಿನ ನೋಟಗಳಿಂದ ಪತಿಯ ಮುಖಕಮಲಗಳನ್ನು ನೋಡುತ್ತ ಕಂಠ ದಲ್ಲಿ ಮಾಲಿಕೆಯನ್ನು ಹಾಕಿದಳು. ಮತ್ತು, ಪಾದಗಳಲ್ಲಿ ಮಸ್ತಕವನ್ನಿಟ್ಟು ನಮ ಸ್ಕಾರವನ್ನು ಮಾಡಿದಳು. ಆ ಪತಿವ್ರತಾಶಿರೋಮಣಿಯು ನಾಚಿಕೆಯಿಂದ ಮುಖ ಕಮಲವನ್ನು ಬಗ್ಗಿಸಿ ಕೆಲವು ನಿಮಿಷಗಳ ವರೆಗೆ ಪತಿಯ ಎದುರಿಗೆ ನಿಂತಿದ್ದಳು. ಆತ್ಮರೊಳಗೆ ಎಲ್ಲ ಕಡೆಗಳಲ್ಲೂ ಜಯ ಜಯ ಶಬ್ದಗಳು ಭೋರ್ಗರೆದವು ಶ್ರೀ ರಾಮನೂ ಸೀತೆಯನ್ನು ನೋಡಿ, ನನಗೆ ಅನುರೂಪಳಾದ ಸಯು ದೂರು ಇಂದು ಸಂತೋಷಪಟ್ಟನು. ಬಳಿಕ ಶ್ರೀ ರಾಮಚಂದ್ರನನ್ನೂ, ಸೀತಾದೇವಿಯ ನ್ಯೂ ಆಶಿರ್ವದಿಸುವದಕ್ಕಾಗಿ ವಿಶ್ವಾಮಿತ್ರಮುನಿಗಳು ಅವರ ಸಮೀಪಕ್ಕೆ ಬಂ ದರು. ಆ ಮಹರ್ಷಿಗಳನ್ನು ನೋಡಿದ ಕೂಡಲೆ ಶ್ರೀ ರಾಮನು ಅವರ ಪಾದಗ ಳಿಗೆ ವಂದನೆ ಮಡಿದನು. ಆಗ ವಿಶ್ವಾಮಿತ್ರರು ಸೀತಾ-ರಾಮರನ್ನು ಆಶೀರ್ವ ದಿಸಿ, 'ಶ್ರೇಷ್ಠನಾದ ಪತಿಯನ್ನು ಪಡೆದೆ' ಎಂದು ಸೀತಾದೇವಿಯನ್ನು ಅಭಿನಂ ಬಿಸಿದರು, ಆನಂದಕರವಾದ ಪ್ರಸಂಗವನ್ನು ನೋಡಿ ಜನಕನಿಗೆ ಬಹಳ ಸಂ ತೋಷವಾಯಿತು. ಜನಕಭೂಪತಿಯು, ವಿಶ್ವಾಮಿತ್ರರಿಗೆ ನಮಸ್ಕರಿಸಿ, ' ಹರ್ಷಿಗಳೇ ತಮ್ಮ ಕೃಪೆಯಿಂದ ನನ್ನ ವಂಶವು ಧನ್ಯವಾಯಿತು , ನಾನು ಕೃತ ಕೃತನಾದನು. ಇಂಥ ಪರಾಕ್ರಮಿಯಾದ ಅಳಿಯನು ತನ್ನ ಸಹಾಯದಿಂದಲೇ ದೊರೆತನು. ತನ್ನ ದಯವಿಲ್ಲದಿದ್ದರೆ ದಶರಥಮಹಾರಾಜನ ಬಾಂಧವ್ಯವು ನನಗೆ ಯದು' ಎಂದು ಹೇಳಿ ಮತ್ತೆ ನಮಸ್ಕಾರ ಮಾಡಿದನು. ಇತ್ತ ಸಭಾಸದರಾದ ರಾಜರು ಚಂದ್ರಮುಖಿಯಾದ ಸೀತೆಯನ್ನು ನೋಡಿ ಖಿನ್ನರಾಗಿ ತಮ್ಮ ದುರ್ದೈವ ಗಳನ್ನು ನಿಂದಿಸಲಾರಂಭಿಸಿದರು. ಕೆಲವರು-ಇಂಥ ಕನ್ಯಾಮಣಿಯು ನನಗೆ ಒ ದಗಲಿಲ್ಲವೆಂಬ ದುಃಖದಿಂದ ಮರ್ರೀತರಾದರು. ಈ ರಾಜಕುಮಾರರನ್ನು ನೋಡಿ ಜನಕಮಹಾರಾಜನು ಅತಿ ವಿನಯದಿಂದ ಕಛೇ ರಾಜಶಿರೋಮಣಿಗಳಿರಾ, ಈ ಸ್ವಯಂವರದಲ್ಲಿ ಜಯಶಾಲಿಯಾದ ಶ್ರೀರಾಮನಿಗೆ ನನ್ನ ಮಗಳಾದ ಸೀತಾ ದೇವಿಯನ್ನು ಕೊಟ್ಟು ವಿವಾಹ ಮೂಡುವದು ನಿಮಗೆಲ್ಲರಿಗೂ ತಿಳಿದಿರುವದು? ಅವಿವಾಹವ ತುಗಲೇ ನಡೆಸಲು ನಿಶ್ಚಯ ಮಾಡಿರುವವ, ಹಾವುಗಳಾದರೂ ಆ • •