ಪುಟ:ಶ್ರೀ ಮದಾನಂದ ರಾಮಾಯಣ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒರ ಶ್ರೀ ಮದಾನಂದ ರಾಮಾಯಣ -.. , ಮಹರ್ಷಿಗಳು ದಶರಥನೇ, ಸಮಾಧಾನ ಚಿತ್ರದಿಂದ ಕೇಳು, ಪೂರ್ವದಲ್ಲಿ ಸ ಹ್ಯಾದ್ರಿಯ ಪ್ರಾಂತದಲ್ಲಿರುವ ಕರವೀರಪುರದಲ್ಲಿ ಶ್ರೇಷ್ಠವಾದ ಒಬ್ಬ ಬ್ರಾಹ್ಮಣ ನಿದ್ದನು, ಆತನಿಗೆ ಧರ್ಮದನಂದು ಹೆಸರು ಆತನು ಬಹಳ ಪಂಡಿತನಾಗಿ ಈನು, ಯಾವಾಗಲೂ ಆತನು ದ್ವಾದಶಾಕೃಮಂತ್ರವನ್ನು ಜಪ ಮಾಡುವ ಸು, ಹೀಗಿರಲು, ಕಾರ್ತಿಕ ಮಾಸದಲ್ಲಿ ಹರಿಭಜನ ಮಾಡಬೇಕೆಂದು ಆತನು ಯೋಚಿಸಿ, ರಾತ್ರಿಯ ಸಮಯದಲ್ಲಿ ಭಜನಮಂದಿರಕ್ಕೆ ಹೊರಟನು. ಆಗ ಆತನ ಕೈಯಲ್ಲಿ ಹರಿಪೂಜೆಯ ಸಮಸ್ತ ದ್ರವ್ಯಗಳೂ ಇದ್ದವು. ಹೋಗ ಹೋಗು ಆ ಶನ ಯೆದುರಿಗೆ ಒಂದು ಹೆಣ್ಣು ಪಿಶಾಚವು ಭಯಂಕರವಾದ ವೇಷವನ್ನು ಧರಿಸಿ ಬಂದು ನಿಂತಿತು. ಅದನ್ನು ನೋಡಿ ಬ್ರಾಹ್ಮಣನಿಗೆ ಬಹಳಕೋಪ ಬಂತು ಬ ಆಕೆ ಆತನು ನಾರಾಯಣ ಮಂತ್ರವನ್ನು ಜಪಿಸುತ್ತ ತುಲಸೀಪಕ್ರದಿಂದ ಕೂಡಿದ ಉದಕವನ್ನು ಅದರ ಮೈ ಮೇಲೆ ಯಸದಸು,ಅದರಿಂದ ಆ ಪಿಶಾಚಕ್ಕೆ ಪೂರ್ವಜನ್ಮದ ಸತಿಯುಂಟಾಯಿತು. ಅದು ಪರಮ ಭಕ್ತಿಯಿಂದ ಆ ಬ್ರಾಹ್ಮಣನ ಪಾದಗಳ ಮೇಲೆ ಬಿದ್ದು ಹೊರಳಾಡುತ್ತ ಬ್ರಾಹಣನನ್ನು ಕುರಿತು, ಯಿ, ಬ್ರಾಹ್ಮಣ ಶ್ರೇಷನೇ, ನನಗೆ ಪೂರ್ವಜನ್ಮದ ಪಾಪಕರ್ಮಗಳಿಂದ ಇಂಥ ದುರ್ದಶx ಪ್ರಾಪ್ತವಾಗಿದೆ. ಮುಂದೆ ನಾನು ಹೇಗೆ ಉದ್ಧಾರವಾಗಬೇಕು” ಯಂದು ಪ್ರಶ್ನೆ ಮಡಿದಳು, ಆಗ ಆ ಬ್ರಾಹ್ಮಣ ಮನು (ಯ'ತರುಣಿಯ, ನೀನು ಯಾವ ಇರ್ದುದ ಸಂಬಂಧದಿಂದ ಇಂಥ ಹೀನ ವಶಯನ್ನು ಬಂದಿದೆ. ಇಂದು ಕೇಳಿ ದನು. ಅದಕ್ಕೆ ಆ ಕಲಹಾ ಎಂಬ ಸ್ತ್ರೀಯು ಬ್ರಾಹ್ಮಣನನ್ನು ಕುರಿತದ್ವಿಜ ಏನೇ, ಕೇಳು ಪೂರ್ವದಲ್ಲಿ ಸೌಂಪ್ರದೇಶದಲ್ಲಿ ಭಿಕುವೆಂಬ ಒಬ್ಬ ಬ್ರಾಹ್ಮಣ ನಿದ್ದನು, ಆತನಿಗೆ ನಾನು ಹೆಂಡತಿಯಾಗಿದ್ದನು. ನನಗೆ ಆಗ 4ಕಲಾ” ಯಂಬ ಹಸರು ಇತ್ತು. ನಾನು ಬಹಳ ಧೂರ್ತಳಾಗಿದ್ದಳು. ನಾನು ನನ್ನ ಪತಿಗೆ ಒಂದು ಮಾತಿನಿಂದಾದರೂ ಸುಖವನ್ನು ಅದು ಮರಿದವಳಲ್ಲ. ಆತನಿಗೆ ಒಂದುದಿವಸವಃ ದರೂ ಮಿಪ್ಯಾನವನ್ನು ಹಾಕಲಿಲ್ಲ. ಒಂದು ಕ್ಷಣವಾದರೂ ಆತನೊಡನೆ ನಗು ೩ರಲಿಲ್ಲ. ನಾನು ಯವಾಗಲೂ ವಿಜ್ಞಾನವನ್ನ ಛAಜನ ನೂರು ನು. ಆತನಿಗೆ ಹಳಸಿದ ಮತ್ತು ಹೊತ್ತಿದ ಅನ್ನವನ್ನು ನಾನೇ ಭೋಜನಕ್ಕೆ ಹಾಳು ತಿದ್ದನು. ಸತಿಯ ತೂತಿಗೆ ಯವಾಗಲೂ ವಿರುದ್ಧವಾಗಿಯೇ ನಡೆಯುತ್ತಿದ್ದನು ಒಂದು ದಿವಸ ಆ ನನ್ನ ಪತಿಯು, ನನ್ನ ದುರ್ನಡತೆಗಳನ್ನು ತನ್ನ ಒಬ್ಬ ಧನಿ