ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೮ ಸಂಸ್ಕೃತಕವಿಚರಿತೆ ತಾವcತಿಕಾದ್ದೂರತರಂ ಪ್ರಯಾಂತಿ ನ ಕೇವಲಂ ದಷ್ಟಿರನು ಪ್ರಯಾತಾ ೨ ಸೋಷಣಾ ಮ್ಯಾನಮುಖಪ್ರಭಾಣಾಂ ನೈಸರ್ಗಿಕಿ ಶ್ರೀರಪಿ ಸಾರ್ಥನಾನಾ || ೫-೫೩

  • ಶ ವ +

ಇವನು ಚೋಳದೇಶದವನು, ಬ್ರಾಹ್ಮಣನು, ಚೋಳರಾಜನಾದ ಕುಲೋ ತುಂಗನ ಮಗ ರಾಜರಾಜನ ಆಶ್ರಯದಲ್ಲಿದ್ದವನು, ಕುಲೋತ್ತುಂಗನ ಮಗ ರಾಜ ರಾಜನೆಂದು ಕ್ರಿ. ಶ. ೧೨ ಮತ್ತು ೧೩ನೆಯ ಶತಮಾನಗಳೆರಡರಲ್ಲಿಯೂ ಒಬ್ಬೊ ಬ್ಬರು ದೊರೆಯುವರು. ವ್ಯಾಖ್ಯಾನಕಾರರಾದ ಮಲ್ಲಿನಾಥನೂ, ಇವನ ಹಿ೦ದಲವ ನಾದ ಅರುಣಾಚಲನಾಥನೂ, ಮಹಾಕಾವ್ಯಗಳಿಗೆ ವ್ಯಾಖ್ಯಾನವನ್ನು ಬರೆದಿರುವುದ ರಲ್ಲಿ ಮಲ್ಲಿನಾಥನು, ರಘುವಂಶದ ಮೊದಲನೆಯ ಸರ್ಗದ ನಾಲ್ಕನೆಯ ಶ್ಲೋಕಕ್ಕೆ ವ್ಯಾಖ್ಯಾನವನ್ನು ಬರೆಯುವಾಗ ವಜಿಂತ್ಪಸ್ತ್ರೀಕುಲಿಶಶಸ್ತ್ರಯೋಃ || ಮಣಿಭೇದೇ ರತ್ನ ಭೇದೇ ಇತಿಕೇಶವಃ ಎಂದೂ, ಅರುಣಾಚಲನಾಥನು ಕುಮಾರ ಸಂಭವಕ್ಕೆ ಬರೆ ದಿರುವ (ಪ್ರಕಾಶಿಕಾ'ಎಂಬ ವ್ಯಾಖ್ಯಾನದಲ್ಲಿ 'ತ್ರಿಷ್ಟತೊಪಯುಕ್ತತಃ ಇತಿಕೇಶವ ಸ್ವಾಮಿವಚನದುಪಯುದನ್ನ ದಭಿದಾನಸ್ಯಶೇಷಶಬ್ದ ಸ್ಯ ವಿಶೇಷಲಿಂಗತ್ವವನ ಸೇಯಂ ಎಂದು ಹೇಳರುವರು. ಇವರು ಕ್ರಿಸ್ತಶಕ ಹದಿಮೂರನೆಯ ಶತಮಾನಾ ನಂತರದಲ್ಲಿದ್ದವರು. ಇವರಿಗಿಂತ ಕೇಶವನು ಪ್ರಾಚೀನನಾಗಿರಬೇಕು ಎಂದರೆ ಕೇಶವನು ಕ್ರಿ. ಶ. ೧ನೆಯ ಶತಮಾನಕ್ಕೆ ಸೇರಿದವನೆಂದು ಊಹಿಸಬಹುದಾಗಿದೆ ಇವನು “ನಾನಾರ್ಥಾರ್ಣವಸಂಕ್ಷೇಪ” ಎಂಬ ಕೋಶಗ್ರಂಥವನ್ನು ಬರೆದಿರುವನು. ಗ್ರಂಥಾಂತ್ಯದಲ್ಲಿ ರಾರಾಜಿ?ಯಾಪರನಾಮಾ ನಾನಾರ್ಥಾರ್ಣವ ಸಂಕ್ಷೇಪಃ?? ಎಂದು ಹೇಳಿರುವುದರಿಂದ ನಾನಾರ್ಥಾಣವಸಂಕ್ಷೇಪಗ್ರಂಥಕ್ಕೆ ರಾಜರಾಜೀಯ ವೆಂಬ ಬೇರೊಂದು ಹೆಸರೆಂದೂ ರಾಜರಾಜನ ಆಶ್ರಯದಲ್ಲಿದ್ದು ಬರೆದುದರಿಂದ ಅದಕ್ಕೆ ರಾಜರಾಜೀಯವೆಂದು ಕರೆದಿರಬಹುದಾಗಿ ಭಾಸವಾಗುತ್ತದೆ, ಇದು ಆರು ಖಂಡಗ) ವಿಭಾಗಿಸಲ್ಪಟ್ಟು ಶಬ್ದ ಗಳ ಲಿಂಗ ವಿವೇಚನೆಯು ಮಾಡಲ್ಪಟ್ಟರು ವುದು. ಗ್ರಂಥವು ಏಕಾಕ್ಷರ, ದ್ವಕ್ಷರ, ತಕ್ಷರ, ಕಾಂಡಗಳೆಂದು ವಿಭಾಗಿಸಲ್ಪಟ್ಟರು ವುದಲ್ಲದೆ ಪ್ರತಿಯೊಂದುಕಾಂಡವೂ ಪುಂ : ನಪುಂಸಕ ವಾಚ್ಯ ನಾನಾಲಿಂಗಾಧಾ | (ಕಲ ದುಃ!' ಎಂಬ ಕೋಶವನ್ನು ಬರೆದ ಕೇಶವನು ಇವನಲ್ಲ. 5 History of Cholas written in ta:ril by Mi. T. A. Gopi- Datha Ra Sup.rintendent of Archaology Travancore