ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೨ ಸಂಸ್ಕೃತಕವಿಚರಿತೆ [ಕ್ರಿಸ್ತ ಕೊಂಡು ಗಂಗಾಯಾತ್ರೆಯನ್ನು ಮಾಡಬೇಕೆಂದು ಬಂದು ತಪ್ಪಿಲ್ಪಿಳ್ಳೆಯನ್ನು ಕಂಡು ಸಲಾ ಸಾದಿಗಳನ್ನು ಮಾಡಿಕೊಂಡಿರಲು, ಸವಿಾಸನಗರದ jರಾಜನು ತನ್ನ ಮಗಳಿಗೆ ಬ್ರಹ್ಮರಾಕ್ಷಸನು ಹಿಡಿದಿರುವನೆಂದೂ, ಯಾರಿಂದಲೂ ಬಿಡಿಸಲು ಸಾಧ್ಯವಾಗದೆ ಚಿಂತಾಕ್ರಾಂತನಾಗಿರುತ್ತಿದ್ದು ಯಾರೋ ಮಹಾತ್ಮರಿರ್ವರು ಬಂದಿ ರುವುದಾಗಿ ಕೇಳಿ ಅಲ್ಲಿಗೆ ಬಂದು ನಮಸ್ಕರಿಸಿ ಸ್ವಾರ್ಮಿ! ತಾವು ಹೇಗಾದರೂ ಮಾಡಿ ನನ್ನ ಮಗಳಿಗೆ ಹಿಡಿದಿರುವ ಬ್ರಹ್ಮರಕಸ್ಸನ್ನೋಡಿಸಿ ಕಾಪಾಡಿಕೊಡಬೇಕೆಂದು ಪ್ರಾರ್ಥಿಸುತ್ತಿರುವುದನ್ನು ಕೇಳಿ ವಿದ್ಯಾರಣ್ಯರು ರಾಜನ ಕೋರಿಕೆಯನ್ನು ನಡೆಯಿಸಿ ಕೊಡಬೇಕೆಂದು ತಪ್ಪಿಲ್ ಸಿಳ್ಳೆಯನ್ನು ಪ್ರಾರ್ಥಿಸಿಕೊಂಡುದಕ್ಕೆ ತಪ್ಪಿಲ್ ಪಿಳ್ಳೆಯು ಅನಭಿಮುಖರಾಗಿರುತಿರ್ದು ಬೃಂದಾವನವೇ ಮೊದಲಾದ ದಿವ್ಯದೇಶಗ ಇನ್ನು ಕುರಿತು ಪ್ರಯಾಣಮಾಡಿದರು, (ಗುರುಪರಂಪರಾಪುಭಾವ ಪುಟ. ೧೧) (ಆ) ಅನಂತರ ವಿದ್ಯಾರಣ್ಯರು ಆ ರಾಜಪುತ್ರಿಗೆ ಹಿಡಿದಿದ್ದ ಬ್ರಹ್ಮರಾಕ್ಷಸನ ನ್ಯೂ ಡಿಸಿ, ವಿಜಯನಗರವನ್ನುಂಟುಮಾಡಿ, ತಾವು ರಾಜವಲ್ಲಭರಾಗಿರುತಿರ್ದು ತಮ್ಮ ಮಿತ್ರರಾದ ತೂಲ್ಸಿಳ್ಳೆಯು ಉcಛವೃತ್ತಿಯಲ್ಲಿರುವರೆಂಬುದನ್ನು ತಿಳಿದು ಕಡುನೊಂದು ತಪ್ಪಿಲ್ ಸಿಳ್ಳೆಗೆ ಅಯ್ಯಾ ! ನೀವು ಇಷ್ಟಪಟ್ಟರೆ ರಾಜನ ಬಳಿಗೆ ಕರೆಯಿಸಿಕೊಂಡು ತಮ್ಮ ವಿಚಾರದಲ್ಲಿ ರಾಜನು ತನ್ನ ಇಷ್ಟಾನುವರ್ತಿಯಾ ಗಿರುವಂತೆ ಮಾಡುವೆನು. ಈ ರೀತಿ ಶ್ರಮಪಡುವದು ಅವಶ್ಯಕವಿಲ್ಲವೆಂದು ಕಾಗ ದವನ್ನು ಬರೆದು ಕಳುಹಿದುದಕ್ಕೆ ದೇಶಿಕರು ಅದನ್ನೋದಿನೋಡಿ ಅದಕ್ಕೆ ಪ್ರತ್ಯು ತರವಾಗಿ:- • ಶಿಶಂಕಿಮನಲಾಭವೇದನಲದರಬಾಧಿತು ಪಯ.ಪ್ರತಿಪೂರಕಂ ಕಿಮುನಧಾರಕಂಸಾರಸಂ ಅಯತ್ನ ಮಲಮಲ್ಲಕಂ ಪಧಪಟಚ್ಚರಂಕಚರಂ ಭಜಂತಿವಿಬುಧ. ಮುಧಿಷ್ಯ ಹತ! ಕುಕ್ಷಿತಃಕುಕ್ಷಿ: || ಎಂಬ ಶ್ಲೋಕವನ್ನು ಬರೆದು ಕಳುಹಿದಂತೆಯೂ ಅದನ್ನು ನೋಡಿ ವಿದ್ಯಾ ರಣ್ಯರು ದೆ?ಶಿಕರ ವೈರಾಗ್ಯಸಂಪತ್ತಿಗೆ ತಲೆದೂಗಿ ಕೆಲವು ಕಾಲವನ್ನು ಕಳೆದು ಅನಂತರ ಹಿಂದೆ ಬರೆದಂತೆ ಮತ್ತೊಂದು ಪತ್ರಿಕೆಯನ್ನು ಬರೆದು ಕಳುಹಿಸಲು ದೆ'ಕರು ಅದಕ್ಕೆ ಪ್ರತ್ಯುತ್ತರವಾಗಿ ಕೆಲವು ಶ್ಲೋಕಗಳನ್ನು ಬರೆದು ಕಳುಹಿಸಿ ದಂತೆಯೂ ಅವುಗಳೇ ವೈರಾಗ್ಯ ಸಂಚಕಗಳೆಂದೂ ಗುರುಪರಂಪರಾ ಪ್ರಭಾವವು ಹೇಳುತ್ತದೆ. (ಪುಟ ೧೩೩) ಮೊದಲನೆಯಹೇಳಿಕೆಯಲ್ಲಿ:-ಇರ್ವರೂ ಬಾಲಸ್ನೇಹಿತರಾಗಿದ್ದು ಕಾಲ ಕ್ರಮದಲ್ಲಿ ಇರ್ವರೂ ಪರಸ್ಪರ ಅಗಲಿದ್ದು ಒಬ್ಬರೊಬ್ಬರ ವಿಚಾರವು ಪರಸ್ಪರ ತಿಳಿ