ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬೨ ಸಂಸ್ಕೃತಕವಿಚರಿತ ಗಳೂ ಕಧೆಗಳೂ ಆ ತಿವಿರಳ ಅಥವಾ ಇಲ್ಲವೆಂದರೂ ಸಲ್ಲುವುದು. ಈ ದೃಷ್ಟಿಯಲ್ಲಿ ಅಚ್ಯುತರಾಯಾಭ್ಯುದಯವು ಮುಖ್ಯವೆನ್ನಬಹುದು, ರಾಜನಾಥಕವಿಯ ಶೈಲಿಯು ಮಧುರ ಮತ್ತು ಅತಿಸರಳ ಮಾದರಿಗಾಗಿ ಕೆಲವು ಶ್ಲೋಕಗಳನೆ ಬರೆಯುವೆವ. ಅಭಿರಂಕ್ ಪಂಕಜಮನುಷ್ಯ ಮುಸ್ಲಿಂ - ಗರು! ವಿತ, ಗಗನೇ ವಲತಃ ವಿಜಹಾಸ ಹುಸಮಿಧುನಸ್ಯ ವಿರ್ಭು, ವಿದಾತಪತ್ರಯ ತಗಲೀ ನೃಪತೇಃ || ೫-೭ ಅಚ್ಯುತರಾಯನು ನಗರದಿಂದ ಹೊರಟ ಸಮಯಲ್ಲಿ ಅವನಿಗೆ ಇರ್ಕಡೆಗಳಲ್ಲಿ ಹಿಡಿದಿದ್ದ ಶ್ವೇತಚ್ಛತ್ರವನ್ನು ನೋಡಿ ಆಕಾಶದಲ್ಲಿ ಸಂಚರಿಸತಕ್ಕ ಹಂಸಮಿಧುನವು ಅಚ್ಯುತರಾಯನ ಮುಖವನ್ನು ನಂಕಜನೆಂದು ಭಾ೦ತಿಪಟ್ಟು ತಮ್ಮ ರೆಕ್ಕೆಗಳನ್ನು ಹರಡಿಕೊಂಡಿರುವಂತೆ ಕಾಣುತ್ತಿರುವುದು, ಶ್ರವಣೆ ಕಧಸ್ಯ ನವನಂ ಚ ಮನ - ಶರಣೆ ಶಿರಃ ಸ್ವಯಮಲ೦ಕುರು: ಇತಿ ಕುಂಡಲಂ ಪದಕಮೇವ ಹರೇಃ ಕಿವಿಹಾರ್ಪಯುಣಿಕಿರಿ•ಟಮಪಿ || ೫-೪೨ ಹರಿಯ (ವಿಷ್ಣುವಿನ) ಪುಣ್ಯಚರಿತೆಯ ಶ್ರವಣವು ಕರ್ಣಗಳನ್ನೂ, ಧ್ಯಾನವು ವಕ್ಷಸ್ಥಲ (ಹೃದಯ) ವನ್ನೂ, ಚರಣವು ತನ್ನ (ಅಚ್ಯುತರಾಯನ) ಶಿರಸ್ಸನೂ ಅಲಂಕರಿಸುವುದಾಗಿ ತಿಳಿದು ವಿಷ್ಣುವಿಗೆ ಕರ್ಣಾಭರಣವಾದ ಕುಂಡಲವನ್ನೂ, ಕಂಠ ಭೂಷಣವಾದ ಪದಕವನ್ನೂ, ರತ್ನಖಚಿತವಾದ ಕಿರೀಟವನ್ನೂ ಅರ್ಪಿಸಿದನು. ಆಎಸಳು ಲಕದ ಮಹಾಂಬುರಾಶೆ ರಂತರ್ಮುಖಹಯರತ್ನ ಖನಿಃ ಸುಮೇಷಃ ಸಾಮ್ರಾಜ್ಯಭೂರಗರಚಂದನವಾಟಿಕಾಯ ಮಾರ್ಗಜನಿಷ್ಠ ಮಲಯಾದ್ರಿರನುಷ್ಯ ದೃಷ್ಟಯೋಃ || ೬-೩೩ ಅಚ್ಯುತರಾಯನು, ಸಮುದ್ರವನ್ನು ಚುಲಕ (ಬೊಗಸೆಯ) ದಲ್ಲಿ ಪಾನ ಮಾಡಿದ ಅಗಸ್ಯಮುನಿಯ ವಾಸಸ್ಥಾನವಾಗಿಯೂ, ಕರ್ವುವಿಲ್ಲನ (ಕಾಮನ) ಹಯ (ಮಲಯಾನಿಲಕ್ಕೆ ಜನ್ಮಭೂಮಿಯಾಗಿ) ನಿಧಿಪ್ರಾಯವಾಗಿಯೂ, ಅಗರು ಚಂದನ ಮುಂತಾದವುಗಳಿಗೆ ಉತ್ಪತ್ತಿ ಸ್ಥಾನವಾಗಿಯೂ ಇರುವ ಮಲಯಪರ್ವತ ವನ್ನು ನೋಡಿದನು