ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ] ರತ್ನಾಕರ ಎಂದು ಒಕ್ಕಣಿಸಿರುವನು, ಹರವಿಜಯದ ಅನೇಕ ಶ್ಲೋಕಗಳು ಮಮ್ಮಟನ ಕಾವ್ಯ ಪ್ರಕಾಶದಲ್ಲಿ ಕಂಡುಬರುವುವು. ತನ್ನ ಕವಿತಾವಿಚಾರವಾಗಿ ಗ್ರಂಥಕಾರನು ಹೀಗೆ ಬರೆದುಕೊಂಡಿರುವನು. ಲಲಿತಮಧುರಾಃ ಸಾಲಂಕಾರಃ ಪ್ರಸಾದಮನೋರಮಾ ವಿಕಟಯಮಕಶ್ಲೇಶೋದ್ಧಾರಪ್ರಬಂಧನಿರರ್ಗಲಃ | ಅಸದೃಶಗತಿ ಮಾರ್ಗೇ ಮಮೋದ್ದಿ ರತೋ ಗಿರೋ ನ ಖಲು ನೃಪತೇ ಚೇತೋ ವಾಚಸ್ಪತ್ರಪಿ ಶಂಕರೇ || (ಹರವಿಜಯ ಗ್ರಂಥಕರ್ತು ಪ್ರಶಸ್ತಿ, ಶ್ಲೋಕ ೨) ಎಂದೂ ಹರವಿಜಯಮಹಾಕಾವ್ಯವನ್ನು ಓದುವುದರಿಂದ ಕಾಲಕ್ರಮದಲ್ಲಿ ದೊಡ್ಡ ಕವಿಯಾಗಬಹುದೆಂದೂ ಹರವಿಜಯಮಹಾಕವೇಃ ಪ್ರತಿಜ್ಞಾಂ ಶೃಣುತ ಕೃತಪ್ರಣಯೋ ಮಮ ಪ್ರಬಂಧೇ | ಅಸಿ ಶಿಶುರಕವಿಃ ಕವಿಃಪ್ರಭಾವಾತ್ ಭವತಿ ಕವಿಶ್ಚ ಮಹಾಕವಿ: ಕ್ರಮೇಣ|| ಗ್ರಂಥಕರ್ತುಃ ಪ್ರಶಸ್ತಿ ಶ್ಲೋಕ೬ ಎಂದು ಹೇಳಿಕೊಂಡಿರುವನು. ಹರವಿಜಯದಲ್ಲಿ ಹೇಳಿರುವ ನಂದೀಶನಿರ್ದಯಕರಾಹತಪುಷ್ಯರೇಷು ಮಂದ್ರಂ ಧ್ವನತ್ತು ಮುರಜೇಷು ವಿಭಜ್ಯ ತಂಡು: ಆಸಾವಿತೇಷು ಪರಿಕಲ್ಪಿತಸಪ್ಪ ಭೇದ ಪರ್ಯಾಪ್ತ ಶೋಭಮಥ ತಾಂಡವಮಧ್ಯಗಾಯತ್ || ಎಂಬ ಶಿವತಾಂಡವವರ್ಣನವು ಮಹಾಕವಿಭವಭೂತಿಯ ಸಾನಂದಂ ನಂದಿಹಸ್ವಾಹತಮುರಜರವಹೂತಕೌಮಾರಬಹಿಳೆ ತೆನುನ), ನಾಗ್ರರಂಧ್ರಂ ವಿಶತಿ ಫಣಿಪತ್ ಭೋಗಸಂಕೋಚಭಾಜಿ | ಗಂಗೋಡ್ತೀನಾಳಿಮಾಲಾಮುಖರಿತಕಕುಭಸ್ಮಾಂಡವೇ ಶೂಲಪಾಣೇ ವೈ ನಾಯಕ್ಯರಂ ವೋ ವದನ ನಿಧುತಯಃ ಪಾಂತು ಛತ್ಕಾರವತ್ಯ: | ಎಂಬ ಈ ಶ್ಲೋಕವನ್ನು ನೆನಪುಕೊಡುವುದು, ವಕ್ರೋಕ್ತಿ ಪಂಚಾಶಿಕೆಯ ಮಾದರಿಯ ಶ್ಲೋಕವು ಹೀಗಿರುವುದು- ತ್ವಂ ಹಾಲಾಹಲಭೂತ ರೋಷಿ ಮನಸೋ ಮೂರ್ಛಾ೦ಮಮಾಲಿಂಗಿತೋ ಹಾಲಾಂ ನೈವ ಬಿಭರ್ಮಿ ದೈವ ಚ ಹಲಂ ಮುಗ್ದ ಕಥಂ ಹಾಲಿಕಃ | (4)