ಪುಟ:ಸುಶೀಲೆ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸJ b 4 ಸುಶೀಲೆ-ಇದಕ್ಕಾಗಿಯೇ ನೀಎಲ್ಲಿಗೆ ಬಂದರೇನು ? ನನ್ನ ಸ್ವಾಮಿಯ ಕ್ಷೇಮಲಾಭವು, ನನ್ನ ಹಿತಚಿಂತೆಗೊಳಪಟ್ಟುರಲ್ಲದೆ ನಿಮ್ಮ ನಿಷ್ಟುರಕ್ಕೆ ಒಳಗಾಗತಕ್ಕು ರಲ್ಲ, ಈ ವಿಷಯವನ್ನು ಚೆನ್ನಾಗಿ ತಿಳಿದಿರಿ | ಸತಿಯ ದೋಷಗಳನ್ನು ಕೇಳಿ, ದೂಷಕರನ್ನು ಪುರ ಸ್ಕರಿಸುವ ಮಾತುಗಳನ್ನಾಡಿ, ಅವರಿಗೆ ವಸತಿಯನ್ನು ಅಣಿಮಾ ಡಿಕೊಡುವವಳು ನಾನೆಂದು ತಿಳಿಯಬೇರಿ 7 ಇನ್ನು ಮುಂದೆ ಇಂತಹ ಮಾತುಗಳನ್ನು ಹೇಳಲಾಗದು. ಗಿರಿ-ಸಾಕು; ಸಾಕು ! ನಿನ್ನ ಪುರಾಣವನ್ನು ಕಟ್ಟಿತು! ಉಪಯೋ ಗವಿಲ್ಲದ ಮಾತು 1 ರಾತ್ರಿ ಏಳು ಗಂಟೆಯಾಗುತ್ತಿದ್ದರೂ ಇನ್ನು ನಿನ್ನ ಗಂಡನು ಮನೆಗೆ ಎಂದಿಲ್ಲ, ನೀನು ಹಸಿದು ಸಾಯುತ್ತಿರುವೆ ! ಅವನು ಅಲ್ಲಿ ಒಬ್ಬ ಬಿರಿವಂತ ತಿಂದು, ಕುಡಿದು, ಬಿದ್ದು ಒದ್ದಾಡುತ್ತಿರುವನು, ಅವನು ಬರದಿದರೆ ನೀನೇಕೆ ಹಸಿದಿರಬೇಕು ? ಸುಶೀಲೆ- (ಜಿಗುಪ್ಪೆಯಿಂದ) ಅಮ್ಮ | ಅವೆಲ್ಲವೂ ಹೆಚ್ಚು ಮಾತುಗಳು ನಾನು ಊಟಮುರಿದರೇನು ? ಬಿಟ್ಟರೇನು ? ನಿಮಗದರಿಂದಾ ಗುವ ಲಾಭ ನಷ್ಟಗಳಾದರೂ ಯಾವುವು? ವೃಥಾ ಕಾಲಹ cm | ನನ್ನ ಮನಸ್ಸಮಾಧಾನ-ಅಭ್ಯುದಯಗಳಿಗೆ ಕಾರಣವಾ ಗಿದ್ದ ಪುಸ್ತಕಾವಲೋಕನವನ್ನೂ ತಪ್ಪಿಸಿ, ಮನಸ್ಸನ್ನು ಅತಿ ಯಾಗಿ ನೂಯಿಸಿದಿರಿ ? ಇದು... .... ಗಿರಿ-ಎಲೆ ! ನೀನು ಸ್ವಲ್ಪ ' ಕಾ ಕ' ಕಲ್ಲಿರುವುದರಿಂದಲೇ ಹೀಗೆ ಮಲೆತುಹೋಗಿರುವೆ ; ದುರಹಂಕಾರದಿಂದ ಮತ್ಯಾರೆ ಮಾರಿ ಮಾತನಾಡುತ್ತಿವೆ. ಇನ್ನೂ ಬ್ಬರಿಗೆ ಉಪದೇಶಮಾಡುವು ಬಕ್ಕೆ ಮಾತ್ರ ನಾಲ್ಕು ಬಾಯಾಗುವುವು, ಸಾಕು ; ಬಿಡು !