ಪುಟ:ಸುಶೀಲೆ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ } ಆ ೩೬ ವಿನೋದ-ಸಂಕುಚಿತಭಾವದಿಂದ, ನನ್ನ ಪತ್ನಿಯ ವಿಚಾರವಾಗಿ - ತಾವು ಹೇಳಿದುದೆಲ್ಲಾ ನಿಜವೆ ? ಏನಾದರೂ ಸಾಕ್ಷ್ಯವಂದೇ! - ಅವಳು ನಿಜವಾಗಿಯ ಪಾತಿವ್ರತ್ಯವನ್ನು ಕಳೆದುಕೊಂಡಿರುವಳೆ? ಗಿರಿಯಮ್ಮ-ವಗದಿರುಹಿ : ನಿನ್ನ ಹೆಂಡತಿಯ ಗುಣವನ್ನು ನೀನೇ ಹೊಗಳಿಕೊಳ್ಳಬೇಕು, ಅವಳ ಗುಣಗಳಲ್ಲಿ ಒಂದನ್ನೊಂದೇ ವಾರಿಸುತ್ತಿದೆ, ಇರಲಿ : ಹೋಗಪ್ಪ | ಸಾಕು | ಸಾಕು !! ಎನೋದ-ಇದಲ್ಲವೂ ಏಕೆ ? ನೀವೇನಾದರೂ ನಿಜವಾದ ಸಂಗತಿಯ ನ್ನು ಬಲ್ಲಿರೋ ? ಗಿರಿಯಮ್ಮ-ಸುಳ್ಳನ್ನು ಹೇಳಿ ನನ್ನ ಮನೆಗೆ ಚಿನ್ನದ ಕಳಸವನ್ನು ಹಾಕಿ ಸುತ್ತೇನಪ್ಪ , ಅವಳು ನಿನ್ನೆಯ ರಾತ್ರಿ ನಿನ್ನ ಪಡ್ಡ ಕ ತಂತ್ರನಾ ಥನೊಡನೆ ಓಡಿಹೋಗಲು ಸಿದ್ಧಳಾಗಿದ್ದಳು, ನಾನೇ ನೋಡಿದೆ. ಅವನು ಧರ್ಮಕ್ಕೂ ನಿನಗೆ ಹೆದರಿ ಹೇಗೋ ತಪ್ಪಿಸಿಕೊಂಡು ಓಡಿಬಂದನು. ಲಜ್ಜೆಗೆಟ್ಟು ಬೀದಿಯಲ್ಲಿ ನಿಲ್ಲದಿದ್ದರೂ, ಒಳಗೇ ಎಂತೆಂತಹ ಕೆಲಸಗಳನ್ನು ಮಾಡುವಳೆಂದು ಒತ್ತೆ ? ನೀನಂತು, ನಿಮ್ಮ ಅಪ್ಪ ಅಜ್ಜಂದಿರು ಗಳಿಸಿಟ್ಟಿದ್ದ ದ್ರವ್ಯ ವೆಲ್ಲವನ್ನೂ ಕಸಕ್ಕೂ ಕಡೆಯಾಗಿ ಹಾಳುಮಾಡುತ್ತಿರುವೆ | ನಿಮ್ಮಿಬ್ಬರ ದುರ್ವತ್ರನ ದಿಂದ ನಮ್ಮ ಜನಕ್ಕೆ ಅಗೌರವವುಂಟಾಗಿದೆ.' ಹೀಗೆ ಹೇಳು ತಿದ್ದಂತೆಯೇ ಗಿರಿಯಮ್ಮನ ಮುಖವು ಕೆಂಪೇರಿ ಕೋಪದಿಂದ ಮಯಡುಗುವಂತಾಯ್ತು, ಗಂಡನ ಕಡೆಗೆ ತಿರುಗಿ ಕರ್ಕಶಸ್ವ ರದಿಂದ ನಿಮಗೆ ಸ್ವಲ್ಪವೂ ಬುದ್ಧಿಯಿಲ್ಲ ! ಇಂತಹ ಪೋಕರಿ ಹುಡುಗರನ್ನೆಲ್ಲ ಮನೆಗೆ ಸೇರಿಸುವರಿ!ಇಂತವರಿಂದ ನಿಮಗಾಗುವ ಆದಾಯವೇನು ? ಈಗಳೂ ಹೊರಗೆ ಕಳಿಸಬಾರದೆ ? ನಿಮ' ಗೇಕೆ ಈ ಮಂಕುಬುದ್ದೀ?”