ಪುಟ:ಸ್ವಾಮಿ ಅಪರಂಪಾರ.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೦೦ ಸ್ವಾಮಿ ಅಪರ೦ಪಾರ

       “ಮೊದಲ ಸಲ ಎತ್ತಿದಾಗಲೇ ದೂರದಿಂದ ಬರುತ್ತಿದ್ದ ನಿಮ್ಮನ್ನು ಕಂಡೆವು.
ಮತ್ತೆ ಪ್ರತಿ ಸಲವೂ ಕಣ್ಣಿಗೆ ಬಿದ್ದಿರಿ. ಬಾಹುಗಳಿಗೆ ಬಲ ಬಂತು. ಮರದ ದಿಮ್ಮಿ
ಹೋಳಾಯಿತು !" 
     ಸ್ವಾಮಿಯೊಡನೆ ಅಪರಿಚಿತ ಜಂಗಮನ ಸಮಾಗಮನವನ್ನು ನೋಡುತ್ತ ಜನ ನಿಂತಿ
ದ್ದರು. ಅವರನ್ನು ಉದ್ದೇಶಿಸಿ ಅಪರಂಪಾರನೆಂದ:
    “ಅಯ್ಯನವರು ನಂಜರಾಜಪಟ್ಟಣದಿಂದ ಬಂದಿದಾರೆ. ಇವರು ಶಿವಾಚಾರ್ಯಸಾಮಿ
ಗಳ ಶಿಷ್ಯರು."
    ಅಲ್ಲಿದ್ದವರೆಲ್ಲ ಸಿದ್ಧಲಿಂಗನಿಗೆ ಬಾಗಿ ನಮಿಸುತ್ರ "ಶರಣು! ಶರಣು!" ಎಂದರು.
    ಸಿದ್ದಲಿಂಗ ಉತ್ತರಿಸಿದ:
     "ಹ್ಮ, ಶರಣ್ರೇಪಾ."
      ಅಪರ೦ಪಾರನೆ೦ದ :
      "ಒಳಗೆ ಬನ್ನಿ, ಅಯ್ಯನವರೇ."
    ...ಅಪರಂಪಾರನ ಖಾತಿ ಶಿವಾಚಾರ್ಯರನ್ನು ಮುಟ್ಟಿತ್ತು, ಆತ ಅವರ್ತಿಯಲ್ಲಿರುವ

ನೆಂಬ ಸುದ್ದಿಯೂ ಅವರ ಕಿವಿಗೆ ಬಿತ್ತು, ಶಿಷ್ಯ ಸಿದ್ಧಲಿಂಗನಿಗೆ, "ಹೋಗಿ ನೋಡಿಕೊಂಡು

ಬಾ" ಎಂದರು.
    ಅಪರ೦ಪಾರನೆ೦ದ:
    “ಒಂದು ಪ್ರಶ್ನೆ ಕೇಳತೇವೆ. ಲೌಕಿಕ ಎನಬೇಡಿ. ನಂಜರಾಜಪಟ್ಟದಲ್ಲಿ ಸ್ವಾಮಿಗಳು,
ಇನ್ನುಳಿದ ನಮ್ಮ ಕಳುಬಳ್ಳಿ, ಎಲ್ಲಾ ಕ್ಷೇಮ?"                       
    "ಓ ಹೋ."
    ಸ್ವರ ತಗ್ಗಿಸಿ, ಇದು ಬೇರೆ ಅಧಾಯ ಎನ್ನುವಂತೆ ಸಿದ್ದಲಿಂಗ ಆರಂಭಿಸಿದ:
    "ಸ್ವಾಮಿಗಳು ಒಂದು ಮುಖ್ಯ ಸಂಗತಿ ನಿಮಗೆ ತಿಳಿಸಬೇಕೊ೦ತ ನನ್ನನ್ನು ಕಳಿಸಿದ್ದಾರೆ. 
    "ಹೌದೆ?ಏನದು?".
    "ಇಂಗ್ರೇಜಿಯವರು ಕೊಡಗಿನ ಮೇಲೆ ದಂಡೆತ್ತಿ ಬರೋ ಸೂಚನೆಗಳವೆ, ಚನ್ನಬಸಪ್ಪ-

ದೇವಮಾಜಿ ಶ್ರೀರಂಗಪಟ್ಟಣಕ್ಕೆ ಓಡಿಹೋಗಿದಾರೆ. ದೇಶ ಯುದ್ಧಕ್ಕೆ ಅಣಿಯಾಗತಾ ಆದೆ."

   ಅವನತಶಿರನಾಗಿ ಅಪರಂಪಾರ ಕುಳಿತ. ಅವನ ಮನಸು ಚಿಂತಿಸಿತು:
   ಕಾಲಕ್ರಮೇಣ ಈ ಸುದ್ದಿ ತನಗೆ ಗೊತ್ತಾಗಿಯೇ ಆಗುತ್ತಿತ್ತು, ಈಗಲೇ ತಿಳಿಸುವಂತೆ
ಸಿದ್ದಲಿಂಗನನ್ನು ಶಿವಾಚಾರ್ಯ ಸ್ವಾಮಿಗಳು ಅಟ್ಟಿದ ಉದ್ದೇಶವೇನು? ತನ್ನಿಂದ ಅವರೇ
ನನ್ನು ಅಪೇಕ್ಷಿಸುತಾರೆ?
  "ಸ್ವಾಮಿಗಳು ಇನ್ನೇನಾದರೂ ಅಂದರೆ?"
  “ಹ್ಮ, ಇಂಗ್ರೇಜರು ಗೆದ್ದರೆ ಹಾಲೇರಿ ವಂಶದ ಅವಸಾನವಾಗತದೆ; ಸ್ವಾತಂತ್ರ್ಯ
ನಷ್ಟವಾಗತದೆ; ಧರ್ಮಗ್ಲಾನಿಯಾಗತದೆ."
  “ಅದಕ್ಕೆ?”.
  "ಇಂಗ್ರೇಜರ ವಿರುದ್ಧ ಜನರನ್ನು ನಾವು ಹುರಿದುಂಬಿಸಬೇಕು–ಅಂದಿದ್ದಾರೆ."
  "ಇದು ಜಂಗಮರು ಮಾಡುವ ಕೆಲಸವಾ ?"