ಈ ಪುಟವನ್ನು ಪರಿಶೀಲಿಸಲಾಗಿದೆ
೧೦೨ ಸಾಮಿ ಆಪರ೦ಪಾರ
"ಹೀಗೆ ಮಾತಾಡಬಾರದು ಮಹಾರಾಜರೆ, ನಾವು ಸಂಧಾನಕ್ಕೆ ಬಂದಿದೇವೆ." "ಸಂಧಾನ ನಿನ್ನ ತಲೆ, ಪರದೇಶಿಗಳ ಎಂಜಲು ತಿಂದು ಬದುಕೋ ಕ್ಷುದ್ರ ಜಂತು!
ನಮಗೆ ಸರಿಸಮನಾಗಿ ಮಾತಾಡತೀಯ? ಏ ಸೇಟ್ ನಿನ್ನದೇನು ಕಾರಭಾರ?"
ತನ್ನ ವರ್ತನೆ ಹೇಗಿರಬೇಕೆಂದು ಆಗಲೇ ನಿರ್ಧರಿಸಿದ್ದ ದಾರಾ ಸೇಟ್ ವಿನಮ್ರನಾಗಿ
ಅ೦ದ :
"ನಾನೊಬ್ಬ ಬಡ ವರ್ತಕ ವ್ಯಾಪಾರಕ್ಕೆ ಬಂದೆ." “ಎಲ್ಲರೂ ವ್ಯಾಪಾರಕ್ಕೆಂತಲೇ ಬರತಾರೆ! ಕಾರಕಾರ ಐಯಣ್ಣ! ಈ ಬೇಪಾರಿಯನ್ನು
ಗಡಿಯಾಚೆಗೆ ಮೈಸೂರಿಗೋ ಮಲೆಯಾಳಕ್ಕೋ ದಾಟಿಸು. ತನ್ನ ಯಜಮಾನರ ಹತ್ತಿರ ದೂರು ಕೊಡಲಿ, ಈ ಮೆನೊನ್, ಶಿರಸ್ತೇದಾರನಂತೆ-ಶಿರಸ್ತೇದಾರ, ಇವನ ಶಿರಸ್ಸನ್ನು ಚೆ೦ಡಾಡೋಣ ಅನ್ನಿಸತದೆ.ಆದರೂ ಬಿಟ್ಟಿರತೀವಿ.ಒಯ್ದು ಬ೦ದೀಖಾನೆಯಲ್ಲಿಡಿ. ಚನ್ನಬಸಪ್ಪನನ್ನು ಫರಂಗಿಯವರು ನಮಗೊಪ್ಪಿಸಿದ ಮೇಲೆ ಈತನನ್ನು ಹೊರಗೆ ಬಿಡೋಣ."
ಮೆನೊನ್ ಕೂಗಾಡಿದ : "ನಾನು ರಾಯಭಾರಕ್ಕೆ ಬಂದವನು. ನನ್ನ ಮೇಲೆ ಕೈಮಾಡಿದರೆ ನಿಮಗೆ ಶಾಸ್ತಿ
ಯಾಗತದೆ."
ರಾಜ ಗರ್ಜಿಸಿದ: "ಕಂಡಿದೀನಿ, ಕಂಡಿದೀನಿ. ಇವನ ಕೆಟ್ಟ ಮುಸುಡು ನೋಡಲಾರೆ ಎಳಕೊಂಡು
ಹೋಗರೋ ಈ ಮುಂಡೇದನ್ನ ಆಚೆಗೆ."
...ಇದಾದ ಸ್ವಲ್ಪ ಹೊತ್ತಿನಲ್ಲೇ ಬೋಪು ದಿವಾನ ಅರಸನ ಭೇಟಿಗೆ ಬಂದ. ಪಡೆವಳ ಆ ಸುದ್ದಿಯನ್ನು ತಿಳಿಸಿದಾಗ ಚಿಕವೀರರಾಜನ ಹುಬ್ಬು ಗಂಟಿಕ್ಕಿತು. ಬಿಡು
ವಿಲ್ಲ. ಸಂಜೆ ಬರಲಿ–ಎಂದು ಹೇಳೋಣವೆನ್ನಿಸಿತು ಮೊದಲು.
ಬೋಪಣ್ಣ ಹೊರಗೆ ಕಾಯುತ್ತಿದ್ದುದನ್ನು ಅರಿತ ರಾಣಿ ಗೌರಮ್ಮ, ರಾಜನ ಬಳಿಗೆ
ಬ೦ದು. “ಏನು ತೊ೦ದರೆಯೋ ಏನೋ, ಮಾತಾಡಿ ಕಳಿಸಬಾರದು ? " ಎ೦ದಳು.
"ಸ್ವಂತದ ತೊಂದರೆ ಅವನಿಗೆ ಯಾವುದೂ ಇಲ್ಲ, ಇನ್ನೊಬ್ಬರಿಗೆ ತೊಂದರೆ ಕೊಡೋ
ದೊಂದೇ ಆತನಿಗೆ ಗೊತ್ತಿರೋದು. ಹುಂ. ಬರಲಿ" ಎಂದ ಚಿಕವೀರರಾಜೇಂದ್ರ,
ರಾಣಿ ಒಳಕ್ಕೆ ಹೊರಟುಹೋದಳು. ಬೋಪಣ್ಣ ಬಂದು ಯಾಂತ್ರಿಕವಾಗಿ ನಮಿಸಿದ. ಅರಸನೆ೦ದ : "ನಮಗೆ ತಲೆನೋವು, ಈ ಬಿಸಿಲಲ್ಲಿ ಬಂದಿದೀರಲ್ಲ ? ಚುಟುಕಾಗಿ ಹೇಳಿಬಿಡಿ, ಏನು
ಸಮಾಚಾರ ?"
"ಕುಂಪನಿಯ ಇಬ್ಬರು ದೂತರು ಬಂದದು ತಿಳೇತು." "ಅವರಿಗೆ ಶಿಕ್ಷೆಯಾದದ್ದೂ ತಿಳಿತೊ ? "ಅದೂ ತಿಳೀತು." "ಪರವಾಗಿಲ್ಲ! ದಿವಾನರು ಸುದ್ದಿ ತರಿಸೋಕೆ ಸಮರ್ಪಕ ವ್ಯವಸ್ಥೆ ಮಡಗಿದೀರಿ." "ನನ್ನನ್ನು ಕರೆಸಿದ್ದರೆ ಚೆನಾಗಿತು. ತಾವು ಹಾಗೆ ಮಾಡಿದು ಸರಿಯಲ್ಲ. ಇದರಿಂದ ಇಂಗ್ರೇಜಿಯವರು ಸಿಟಾಗತಾರೆ."