ಈ ಪುಟವನ್ನು ಪರಿಶೀಲಿಸಲಾಗಿದೆ
ಸ್ವಾಮಿ ಅಪರಂಪಾರ ೧೩೭ ದುಭಾಷಿ ನಿವೇದಿಸಿದ : "ನಿಮಗೆ ಜ್ವರ ಬಂದಿದೆ : ಹಾಲು ಕೊಟ್ಟರೆ ಬೇಡ ಅನ್ನುತೀರಿ ಅಂತಾನೆ." "'ಹುಚ್ಚಚ್ಚಾರ ! ನನಗೆಲ್ಲಿಯ ಜ್ವರ ? ಇಂಗ್ರೇಜಿ ಸರಕಾರದ ದೌಲತ್ತಿನ ಮುಂದೆ ಈ ಪಿಟಿಪಿಟಿ ?" ಸಿದ್ದಲಿಂಗನೆಂದ : "'ದೌಲತ್ತು ? ಅಯ್ಯಾ , ನಿಮ್ಮ ಕರಸ್ಥಲದ ಘನ ನಿಮ್ಮಲ್ಲಿರಲಿ, ಅಯ್ಯಾ ನಿಮ್ಮ ಪರ ಸ್ಥಲದ ಘನ ನಿಮ್ಮಲ್ಲಿರಲಿ !" "ಏನೆನ್ನುತಿದಾನೆ ಈತ ?" ದುಭಾಷಿ ಅರಿಕೆ ಮಾಡಿದ : "ಅದೊಂದು ಶಿವಶರಣರ ವಚನ , ಖಾವಂದರೇ, ತಾವು ಪರಸ್ಥಲದವರು ಎನ್ನುತ್ತಾನೆ." ಸಿದ್ದಲಿಂಗ ಕೇಳಿದ: ಸ್ವಾಮಿಗಳ ಪತ್ರಕ್ಕೆ ಉತ್ತರವಿಲ್ಲವೇನು ?" "'ಉತ್ತರ ನಮ್ಮ ಸೈನಿಕರು ಕೊಡುತಾರೆ" ಎಂದ ಕಾಸ್ಸಾಮೇಜರ್. "'ಹಾವಿನ ಬಾಯಕಪ್ಪೆ, ಹಸಿದು, ಹಾರುವ ನೊಣಕ್ಕೆ ಆಸೆ ಮಾಡುವಂತೆ ಶೂಲವ ನೇರುವ ಕಳ್ಳನು ಹಾಲು ತುಪ್ಪವ ಕುಡಿದು ಮೇಲೇಸು ಕಾಲ ಬದುಕುವನೊ ? ಕೆಡೆ ಒಡಲ ನೆಚ್ಚಿ ಕಡು ಹುಸಿಯನೆ ಹುಸಿದು ಒಡಲ ಹೊರೆವವರ ಕೂಡಲ ಸಂಗಮದೇವಯ್ಯ ನರನೊಲ್ಲ ಕಾಣಿರಣ್ಣ." ದುಭಾಷಿಯೆ೦ದ : "ಇದೂ ಒಂದು ವಚನ, ಸಾಹೇಬರೇ, ತಮ್ಮನ್ನು ಅದು ಟೀಕಿಸತದೆ." "'ನಮ್ಮನ್ನು ಟೀಕಿಸುತದೆ ! ಹುಂ ! ಕಂಪನಿಯ ರಾಯಭಾರಿ ಕುಲಪಟ್ಟಿ ಕರುಣಾಕರ ಮೆನೊನನ್ನು ಕೊಡಗಿನ ಅರಸ ಚಿಕವೀರರಾಜೇಂದ್ರ ಬಂಧಿಸಿಟ್ಟಿದ್ದ. ಈಗ ನಿನ್ನನ್ನು ನಾವು ಬಂಧನದಲ್ಲಿಡುತೇವೆ." "'ನನಗೆ ಗೊತ್ತಿರುವ ಹಾಗೆ ಮೆನೊನ್ ಗೂಢಚರ್ಯೆ ಮಾಡಿದ. ನಾನಾದರೋ ಓಲೆ ಹೊತ್ತ ದೂತನಾಗಿ ಬಂದಿದೇನೆ." "ಓಲೆಯಾ ? ಅಲ್ಲ ? ಇದು ಬಂಡಾಯ ಪ್ರದರ್ಶನ. ಯಾರಲ್ಲಿ ? ಈ ಫಕೀರನನ್ನು ಬಂಧಿಸಿ ಸೆರೆಯಲ್ಲಿಡಿ !" "ಶಿವ, ಶಿವ, ಶಿವ ! ಎಂದ, ಸಿದ್ಧಲಿಂಗ. ಒಂದು ಕ್ಷಣ ಅವನ ಪಾದಗಳು ತಣ್ಣ ಗಾದುವು. ಆದರೂ ಅಧೀರನಾಗದೆ ಆತ ನಿ೦ತ. ಸಶಸ್ತ್ರ ಕಾವಲುಗಾರರು ಒಳಬಂದು, ಸಿದ್ದಲಿಂಗನ ಎರಡೂ ರಟ್ಟೆಗಳನ್ನು ಹಿಡಿದು ಹಿಂದಕ್ಕೆ ಜಗ್ಗತೊಡಗಿದರು. ಸಿದ್ದಲಿಂಗ ಕೂಗಿ ನುಡಿದ: "ದರ್ಪಿಷ್ಟನಾದ ಕುಂಪಣಿ ಚಾಕರ ! ಇದರ ಫಲ ನೀನು ಉಣ್ಣತೀಯೆ ! ಜೋಕೆ !" ಕಾಸ್ಸಾಮೇಜರ್ ಕರ್ಕಶವಾಗಿ ಅಂದ: "ತೊಲಗಾಚೆ !" ಹೊರಗೆ ಸೆರೆಮನೆಯ ಕಡೆಗೆ ನಡೆಯುತ್ತ, ಕೈಗಳಿಗೆ ತೊಡಿಸಿದ ಸಂಕೋಲೆಗಳ