ಈ ಪುಟವನ್ನು ಪರಿಶೀಲಿಸಲಾಗಿದೆ
ಸ್ವಾಮಿ ಅಪರಂಪಾರ റ೫೧
ಮಾತು ಮಾತಿಗೂ ಅಚ್ಚಣ್ಣ, 'ಅರ್ಥವಾಯಿತು ಅರ್ಥವಾಯಿತು' ಎಂಬಂತೆ ತಲೆಯಾಡಿಸಿದ. ಅಪರಂಪಾರ ತುಸು ಯೋಚಿಸಿ ನುಡಿದ : "ಯೋಜನೆ ದಿವ್ಯವಾಗಿದೆ, ಇಲ್ಲಿ ನಾವು ಕೊಳ್ಳಿ ಇಡತೇವೆ. ಪುಟ್ಟಬಸವನೂ ಅವನ ಸಂಗಡಿಗರೂ ಘಟ್ಟದ ಕೆಳಗೆ ದೀವಟಿಗೆ ಹಿಡಿಯಲಿ. ಮೈಸೂರು ಇಕ್ಕೇರಿಗಳು ಉರಿದೇಳಲಿ. ಆಗ ಮಹಾದೇವನ ಹಣೆಗಣ್ಣು ತೆರೆದ ಹಾಗಾಗುತದೆ. ಆ ಬೆಳಕಿನಲ್ಲಿ ಹಿಂದೂಸ್ಥಾನದ ಬೇರೆ ರಾಜ್ಯಗಳ ಜನ ತಮ್ಮ ದಾರಿ ಕುಡುಕೊಳ್ಳುತಾರೆ. ಸರಿಯೆ ಅಪ್ಪಯ್ಯ ?" ಅಪರಂಪಾರನ ಸಂತೋಷದಲ್ಲಿ ತಾನೂ ಪಾಲುಗೊಳ್ಳುತ್ತ ಅಪ್ಪಯ್ಯನೆಂದ: "ಸರಿ, ಸ್ವಾಮಿಯವರೆ." "ಹಾಗಾದರೆ ಪುಟ್ಟಬಸವನಿಗೆ ಒಂದು ಮಾರೋಲೆ ಬರೆಯೋಣಾಗಲಿ, ಒಕ್ಕಣೆ..." ||ಓಂ|| ಶ್ರೀ ಶ್ರೀ ಶ್ರೀ ಅಪರಂಪಾರಸ್ವಾಮಿಗಳ ಕಾಜಗೋಡು ಮುಕ್ಕಾವಿನಿಂದ ಭಕ್ತಾಗ್ರಣಿ ಪುಟ್ಟಬಸವನಿಗೆ ಬರೆಯುವುದೇನೆಂದರೆ--- ಕ್ಷೇಮ. ಸಾಂಪ್ರತ. ನಿನ್ನ ಓಲೆ ಮುಟ್ಟಿ ಮಹದಾನಂದವಾಯಿತು. ಎಲ್ಲವನ್ನೂ ವಿಚಾರಿಸಿ ನೋಡಿ ನಾವು ಅಭಿಪ್ರಾಯಪಡುವುದೇನೆಂದರೆ...
೫೩ ಉರಿಯ ಶಾಖ ಲೀಹಾರ್ಡಿಗೆ ತಗಲಿತು. ಮೈಸೂರಿನ ಕಾಸ್ಸಾಮೇಜರನಿಗೂ ಆ ಹೊಗೆಯಿಂದ ಉಸಿರು ಕಟ್ಟಿತು. ಮದರಾಸಿನ ಗವರ್ನರನೆಂದ: "ಇದೇನು ಮೋಡ ?" ಕಲಕತ್ತೆಯಿಂದ ಗವರ್ನರ್ ಜನರಲ್ ಕೇಳಿದ: “ಅಲ್ಲಿ ಏನು ನಡೆದಿದೆ?" ಅವರು ರೂಢಿಗೆ ತಂದ ಶಕೆಯ ಅನ್ವಯ : ಒಂದು ಸಾವಿರದ ಎ೦ಟುನೂರು ಮೂವತ್ತಾರನೆಯ ಇಸವಿ, ಕಂಪೆನಿ ಸರಕಾರದಿಂದ ಆಜ್ಞಪ್ತನಾಗಿ ಸ್ಟೋಕ್ಸ್ ಎಂಬಾತ ಮೈಸೂರಿಗೆ ಬಂದು, ರಾಜ್ಯದ ಮುಖ್ಯಾಧಿಕಾರಿಯಾಗಿ ಕಾಸ್ಸಾಮೇಜರನಿಂದ ಅಧಿಕಾರ ವಹಿಸಿಕೊಂಡ. ಸಡಿಲಗೊಂಡಿತ್ತಲ್ಲವೆ ರಾಜ್ಯಯಂತ್ರ ? ಸ್ಟೋಕ್ಸ್ ತಡಮಾಡಲಿಲ್ಲ. ಕೀಲುಗಳನ್ನೆಲ್ಲ ಬಿಗಿಗೊಳಿಸತೊಡಗಿದ. ಗವರ್ನರನಿಗೆ ಅತ ಸಲಹೆ ಮಾಡಿದ: “ಆದಷ್ಟು ಬೇಗನೆ ಆಡಳಿತದ ಕೇಂದ್ರವನ್ನು ಬೆಂಗಳೂರಿಗೆ ವರ್ಗಾಯಿಸುವುದು ಉತ್ತಮ. ಮೈಸೂರಿಗಿರುವ ಮಹತ್ವವನ್ನ ಕಡಿಮೆ ಮಾಡುವುದು ಒಳಿತು, ಆಗ ನಾಗರಹಾವಿನ ವಿಷದ ಹಲ್ಲುಗಳನ್ನೆಲ್ಲ ಕಿತ್ತಹಾಗಾಗುತದೆ." ಕಾಸ್ಸಾಮೇಜರ್ ದುರ್ಬಲನಾಗಿದ್ದ: ತನಗೂ ಆತನಿಗೂ ಹೋಲಿಕೆಯಿಲ್ಲ--–ಎಂದು ಮೇಲಣವರಿಗೆ ತೋರಿಸಿಕೊಡುವ ಆತುರ ಸ್ಟೋಕ್ಸ್ ಗೆ. ಇನ್ನೊಂದು ನಿರ್ಧಾರವನ್ನು ಆತ ಕೈಕೊಂಡ, ರಾಜಕಾರ್ಯದಲ್ಲಿ ಆಸಕ್ತಿ ಇಲ್ಲದವ ನೆಂದೂ ಸಂಶಯಾಸ್ಪದ ಜನರೊಡನೆ ಸಂಪರ್ಕವಿರಿಸಿಕೊಂಡವನೆಂದೂ ಆರೋಪ ಹೊರಿಸಿ, ದಿವಾನ ವೆಂಕಟರಮಣಯ್ಯನನ್ನು ಅವನು ಉದ್ಯೋಗದಿಂದ ಕಿತ್ತುಹಾಕಿದ.