ಪುಟ:ಸ್ವಾಮಿ ಅಪರಂಪಾರ.pdf/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ᏀᏬ.3 ಸಾಮಿ ಆಪರಂಪಾರ ಗಳಿಗೂ ಪಾದಗಳಿಗೂ ಮೊಳೆಗಳು. ಸೋರುತ್ತಿದ್ದ ರಕ್ತ, ಅಪರಂಪಾರ ಆ ಘಳಿಗೆಯಲ್ಲಿ ತೋರಿದ ನಿಶ್ಚಲತೆಯ ರಹಸ್ಯವೇನು? ಆ ಅಂತಃಶಕ್ತಿಯ ನೆಲೆ ಯಾವುದು?ಶ್ರಶ್ರದ್ಧೆಯೆ? ಧರ್ಮವೆ ? ದೈವಿಕತೆಯ బెుట్చచేనే్ను తెలటదో ಅತಿಮಾನವತ್ವವೆ 2 ರಾಜಕಾರಣಿಗಳಾದ ಸ್ವದೇಶ ಬಾಂಧವರೊಡನೆ ಚರ್ಚಿಸುವ ವಿಷಯವಲ್ಲ ಅದು. ಆದರೂ ಅಂತರಂಗದಲ್ಲಿ, ನಿತ್ಯದ ಚಿಂತನೆಯಲ್ಲಿ ಆ ವಿಷಯ ಅವನನ್ನು ಕಾಡಿತು. .ಅಪರಂಪಾರ ದೇವರನ್ನು ಕೇಳುತ್ತಿದ್ದ: “ನಾಳೆ ಬಪ್ಪದು ನಮಗಿಂದೇ ಬರಲಿ, ಇಂದು ಬಪ್ಪದು ನಮಗೀಗಲೇ ಬರಲಿ." ಆವರೆಗಿನ ಬದುಕನ್ನು ಅವಲೋಕಿಸುತ್ತ ಆತ ಅಂದುಕೊಳ್ಳುತ್ತಿದ್ದ: "ಕಿಚ್ಚಿಲ್ಲದ ಬೇಗೆಯಲಿ ಬೆಂದೆ, ಏರಿಲ್ಲದ ಗಾಯದಲಿ ನೋಂದೆ..ಹಿಡಿಯಿಲ್ಲದ ಶಸ್ತ್ರ, ಕೀಲಿಲ್ಲದ ಕತ್ತರಿ, ಉಭಯವನೊಡಗೂಡದ ಚಿಮ್ಮಣ, ರೂಹಿಲ್ಲದ ಚಾಣ, ಹಲ್ಲಿಲ್ಲದ ಹಣಿಗೆ ಹಿಡಿದು ಬಂದೆ...ಹೇಡಿ ಬಿರುದ ಕಟ್ಟಿದಂತಾಯಿತೆನ್ನ ವೇಷ..ಹಗರಣ ನಗೆಗೆಡೆ ಯಾಯಿತು." - ತನ್ನನ್ನು ತಾನೇ ಸಂತೈಸುತ್ತಿದ್ದ: "ಮನುಜ, ನಿನಗಾದ ನೋವಿ೦ಗೆ ಚಿಂತಿಸುವರೆ ?" 3% :: 本 'ಸಿಪಾಯಿ ಶಂಭು'ವಾಗಿದ್ದ ಶಂಕರಪ್ಪ, ಆ ರಾತ್ರೆ ಆಂಗ್ಲರ ಕೈಗೆ ಬೀಳಲಿಲ್ಲ, ಅನಂತರವೂ ಅವರಿಗೆ ಸಿಗಲಿಲ್ಲ, ಏನು ನಡೆಯಿತೆಂಬುದರ ಪೂರ್ಣ ವಿವರ ಆತನಿಗೆ ತಿಳಿಯಲು ಒಂದೆರಡು ದಿನ ಬೇಕಾಯಿತು. ತಿಳಿದಾಗ ಅವನು, "ಅಯ್ಯೋ ಶಿವನೇ! ಹೀಗೂ ಆಯಿತೆ?" ಎಂದು ಗೋಳಾಡಿದ. ಮಲ್ಲಪ್ಪ ಇನ್ನಿಲ್ಲ: ಸಾಮಿಯ ಕಣ್ಣುಗಳನ್ನು ಕಿತ್ತರು-ನ್ನಡೆದು ಹೋದ ಆ ಘಟನೆ ಯನ್ನು ನಂಬಲು ಅವನಿಗೆ ಬಹಳ ಹೊತು ಹಿಡಿಯಿತು. ಕರಿಯ ಸಿಪಾಯರು 'ಮಹದೇವ'ನ ಶವವನ್ನು ಮಣ್ಣ ಮಾಡಿದ್ದ ತಾಣವನ್ನು ಶಂಕರಪ್ಪ ಗೊತುಹಚ್ಚಿದ. ಒಂದು ಇರುಳೆಲ್ಲ ಅಲ್ಲಿದ್ದು ಕಣ್ಣೀರಿನಿಂದ ನೆಲ ತೋಯಿಸಿದ. ಶಂಕರಪ್ಪ ಇನ್ನು ತುಕ್ಕಡಿಯಲ್ಲಿ ಸಿಪಾಯಿಯಾಗಿ ಇರುವಂತಿಲ್ಲ. ಸೆರೆಮನೆಯೊಳಗೆ ಚಾಕರನಾಗಿ ಇದ್ದರೆ ಒಂದಲ್ಲ ಒಂದು ರೀತಿಯಲ್ಲಿ ಅಪರಂಪಾರಸ್ವಾಮಿಯ ಸೇವೆ ಮಾಡ ಬಹುದು. ಆದರೆ, ತನ್ನನ್ನು ಹಿಡಿಯಬೇಕೆಂದು ಆಜ್ಞೆಯಾಗಿರುವಾಗ, ಅಂತಹ ಹುಚ್ಚು ಸಾಹಸ ತರವಲ್ಲ, ಮುಂದೇನು ಮಾಡಬೇಕು ತಾನು ? ಮಡಕೇರಿಯಲ್ಲಿ ನೆಲೆಸೋಣವೆಂದರೆ ಅದೂ ಗಂಡಾಂತರದ ಯೋಚನೆಯೇ, ಆತ ಅಪರಂಪಾರನ ಹಿಂಬಾಲಕನಾದುದನ್ನು ಅರಿತ ಕೆಲವರಿದ್ದರು. ಅವರಿಂದ ತನಗೆ ತೊಂದರೆ ಯಾಗಲೂಬಹುದು. - ಮಕ್ಕಳು ದೊಡ್ಡವರಾಗಿದ್ದರು. ಅವರನ್ನು ಸಂಪಾದನೆಯ ದಾರಿಗೆ ಹಚ್ಚಬೇಕು. ಸಂಸಾರವನ್ನು ಬೆಂಗಳೂರಿಗೇ ಕರೆತಂದರೆ? ಇಲ್ಲಿಯೇ ತಾನು ಸ್ಥಿರವಾಗಿ ನೆಲಸಿದರೆ? ನಾಳೆ ಪರಿಸ್ಥಿತಿ ಹೇಗೆ ರೂಪಗೊಳ್ಳುವುದೋ ಯಾರು ಬಲ್ಲ ? ತಾನು ಇಲ್ಲಿಯೇ ಇರುವುದ ರಿಂದ ಸ್ವಾಮಿಯವರಿಗೆ ತನ್ನಿಂದ ಯಾವುದಾದರೊ೦ದು ಬಗೆಯ ಸಹಾಯವಾಗಲೂ ఎరెడేుదోు. . .