೩೦
ಸ್ವಾಮಿ ಅಪರಂಪಾರ
ಹೊಸ್ತಿಲ ಹೊರಗೇ, ಶಂಕರಪ್ಪ ಭಕ್ತಿಯಿಂದ ಕೈಜೋಡಿಸಿದ.
ಕಿರೀಟವಿಲ್ಲದ, ನೀಳಕೂದಲನ್ನು ಹಿಂದಕ್ಕೆ ಬಾಚಿದ, ಸಡಿಲವಾದ ನಿಲುವಂಗಿ ತೊಟ್ಟ,
ಗೌರಾಂಗನಾದ ದೊರೆ, ಸದಾ ಚಲಿಸುವ ಜಾಗೃತ ಕಣ್ಣಾಲಿಗಳು, ರಾಜನ ಸನ್ನಿಧಿಗೆ ಬಂದು
ತಾನು ಪುನೀತನಾದೆ, ಎಂದುಕೊಂಡ ಶಂಕರಪ್ಪ.
ಅರಸ ಕೇಳಿದ:
"ಕರಕೊಂಡು ಬಂದೆಯಾ, ಐಯಣ್ಣ?”
"ಹೌದು, ಮಹಾಸ್ವಾಮಿ."
ಶಂಕರಪ್ಪನನ್ನು ಕುರಿತು ರಾಜನೆಂದ:
"ಇಲ್ಲಿ ಬಾ.”
ಒಲವು ಧ್ವನಿಯಲ್ಲಿ. ಆದರೂ ಶಂಕರಪ್ಪನ ಕಂಕುಳು ಬೆವತಿತು. ಪಾದಗಳೋ ಕೆಳಕ್ಕೆ ಬೇರುಬಿಟ್ಟಿದ್ದುವು.
ಬಸವನೆಂದ:
"ಬಾರಪ್ಪ ಒಳಕ್ಕೆ, ಮಹಾಸಾಮಿಯವರು ಕರೀತವರೆ."
ಶಂಕರಪ್ಪ ಕಷ್ಟಪಟ್ಟ ಕಾಲುಗಳನ್ನು ಕಿತು ಮುಂದಕ್ಕೆ ನಡೆದು, ನಡುಬಾಗಿಸಿ ಅರಸನಿಗೆ
ನಮಿಸಿದ.
ರಾಜನೆಂದ:
"ನೀನು ನಂಬಿಗಸ್ಥ ಅಂತ ಕೇಳಿದೆವು, ಸಂತೋಷ."
ತನ್ನ ಕೊರಳಿನಿಂದ ಪಚ್ಚೆಕಲ್ಲಿನ ಪದಕವಿದ್ದ ಬಂಗಾರದ ಸರವನ್ನು ಅರಸ ಬಿಚ್ಚಿ
ಹಿಡಿದು, ಶಂಕರಪ್ಪನ ಕಡೆಗೆ ಕೈ ಚಾಚಿದ.
"ತಗೋ."
ಶಂಕರಪ್ಪ ದಿಕ್ಕು ತೋಚದೆ ನಿಂತ.
ಅಬ್ಬಾಸ್ ಅಲಿಯೆಂದ:
ಮಹಾಸ್ವಾಮೇರು ಬಹುಮಾನ ಕೊಡತಾ ಅವರೆ, ಇಸಕೋ.”
ಎರಡೂ ಅಂಗೈಗಳನ್ನು ಮುಂದಕ್ಕೆ ಚಾಚಿ ಅರಸನಿತ್ತ ಉಡುಗೊರೆಯನ್ನು ಸ್ವೀಕರಿಸಿ
ಶಂಕರಪ್ಪ ಮತ್ತೊಮ್ಮೆ ವಂದಿಸಿದ.
ಚಿಕವೀರರಾಜ ನುಡಿದ:
"ಇನ್ನು ಮುಂದೆ ಬೇಹಿನ ಚಾವಡಿಯಲ್ಲಿ ನಿನಗೆ ಕೆಲಸ, ಅರಮನೆಯ ಖಾಸಾ ಚಾಕರ ನಾಗಿರಬೇಕು, ತಿಳೀತಾ ?"
ಶಂಕರಪ್ಪ ತೊದಲಿದ :
"ತಿಳೀತು ಮಹಾಸ್ವಾಮಿ."
ಅರಸ ಆಪಾದಮಸ್ತಕವಾಗಿ ಶಂಕರಪ್ಪನನ್ನು ದಿಟ್ಟಿಸುತ್ತಿದ್ದಂತೆ ಬಸವನೆಂದ:
"ನಿನ್ನ ಸ್ವಾಮಿಭಕ್ತಿ ನೋಡಿ ಮಹಾಸಾಮೇರು ಉಡುಗೊರೆ ಕೊಟು, ನೆಪ್ಪಿರಲಿ.
ಅರಮನೆಯ ಅನ್ನ ತಿನ್ನತಾ ಇದೀಯೆ. ನಮಕ್ ಹರಾಮಿ ಮಾಡಿದಿ ಅಂದರೆ ನಿನಗೆ ಶಾಸ್ತಿ
ಆದಾತು.ನಿನ್ನೆ ರಾತ್ರಿ ನಡೆದದ್ದನ್ನ ಯಾರಿಗಾದರೂ ಬಾಯಿಬಿಟ್ಟು ಹೇಳಿದಿ ಅಂದರೆ
ನಿನಗೆ ಎಂಥ ಶಿಕ್ಷೆ ಸಿಕ್ಕಾತು ಗೊತ್ತೇನೊ ?"