ಈ ಪುಟವನ್ನು ಪರಿಶೀಲಿಸಲಾಗಿದೆ
೭೦ ಸ್ವಾಮಿ ಅಪರಂಪಾರ ಎಂಟು ಸುತ್ತಿನ ಕೋಟೆಯನ್ನು ಅನುಭವಿಗಳ ಮತವಿಡಿದು ಹೋಗು: ಲಿಂಗಾಚಾರ, ಸದಾಚಾರ, ಭೃತ್ಯಾಚಾರ, ಶಿವಾಚಾರ, ಗಣಾಚಾರ ಎಂಬ ನೀತಿಯ ಐದು ದಾರಿಗಳಲ್ಲಿ ನಡೆ; ಭಕ್ತ, ಮಾಹೇಶ, ಪ್ರಸಾದಿ, ಪಾಣಲಿಂಗಿ, ಶರಣ, ಐಕ್ಕ ಎಂಬ ಅರಿವಿನ ಆರು ಮೆಟ್ಟಲುಗಳನ್ನೇರು; ಲಿಂಗಾಂಗ ಸಾಮರಸ್ಯ ಎಂಬ ದಾರವನ್ನು ಹೊಗು...ನೀನಿನ್ನು ಅಪರಂಪಾರ."
ವೀರಪ್ಪಾಜಿ ತೊದಲಿದ್ದ: “ದೀಕ್ಷೇ?" “ಇನ್ಯಾತರ ದೀಕ್ಷೇ?!" ಕ್ಷಣಕಾಲ ಸುಮ್ಮನಿದ್ದು ವೀರಪ್ಪಾಜಿ ಮತ್ತೊಂದು ಪ್ರಶ್ನೆ ಕೇಳಿದ್ದ: “ದೇಶಕ್ಕೆ ಆಪತ್ತೊದಗಿದಾಗ?" "ಅಂಥಾ ಗಳಿಗೆಯಲ್ಲಿ ನಿನ್ನಿಂದೇನಾಗಬೇಕೋ ಅದನ್ನು ಮಾಡಿಸಿಕೊಳ್ಳುವೆ. ಈಗ
ಯಾಕೆ ಆ ಚಿಂತೆ? ಹೋಗು."
ಆನಂದ ಉಕ್ಕೇರಿ ದೇವರ ಪಾದಗಳನ್ನು ಹಿಡಿಯಲೆತ್ನಿಸಿದ್ದ ವೀರಪ್ಪಾಜಿ... ಅತ್ತ ಬಂದ ಸ್ವಾಮಿಗಳು ಬಾಗಿ ನೋಡಿ ಕೇಳಿದರು : "ಏನಾಯಿತು ? ಯಾರು ?" ಶಿವರಾತ್ರೆಗೇಂತ ಬಂದವನಿರಬೇಕು. ಯಾರೋ ತಿಳೀದು." ಅಷ್ಟರಲ್ಲಿ ಪ್ರಜ್ಞೆ ಮರಳಿದ ಜಂಗಮ, ತನ್ನ ಸುತ್ತಲೂ ಬಿರುನೋಟ ಬೀರುತ್ತ ಎದ್ದು ಕುಳಿತು,ಅಂದ: "ನಾ ಇನ್ನು ಹೊರಡತೀನಿ. ಹೋಗು-ಅಂದ ಮಲ್ಲಿಕಾರ್ಜುನ." ಸ್ವಾಮಿಗಳೆಂದರು : "ಹೌದು? ಎಲ್ಲಿಗೆ?" ಯಾರು ಪ್ರಶ್ನಿಸಿದರೆಂಬುದನ್ನು ಗಮನಿಸದೆ ಜಂಗಮನೆದ್ದುನಿಂತು, ತಾರಕ ಸ್ವರದಲ್ಲಿ
ನುಡಿದ :
"ದಾರಿ ಬಿಡಿ! ದಾರಿ ಬಿಡಿ! ಬಸವಕಲಾಣಕ್ಕೆ ಹೋಗುವೆ !, ಉಡುತಡಿಗೆ ! ತೀರ್ಥಾ
ಟನೆಗೆ !"
“ನಿನ್ನ ಹೆಸರೇನು ?” ಎಂದು ಕೇಳಿದರು, ಸ್ವಾಮಿಗಳು. ಈಗಲೂ ಅವರನ್ನು ನೇರವಾಗಿ ದಿಟ್ಟಿಸದೆ ಜಂಗಮನೆಂದ: "ನಾನು ಅಪರಂಪಾರ !" ನೆರೆದಿದ್ದವರಲ್ಲೊಬ್ಬ, ಈತ ಅರೆಮರುಳನಂತಿದಾನೆ-ಎಂದು ಸನ್ನೆ ಮಾಡಿ ತೋರಿ
ಸಿದ. ಉಳಿದವರು ನಕ್ಕರು.
ಆ ಕಡೆಗೆ ಲಕ್ಷ್ಯವನ್ನೇ ಕೊಡದೆ ಅಪರಂಪಾರ ಬೆಟ್ಟದಿಂದ ಇಳಿಯತೊಡಗಿದ. ೨೨ ಚಿಕವೀರರಾಜೇಂದ್ರ ಪಟ್ಟಾಭಿಶಿಕ್ತನಾದ ವಿಕ್ರಮ ಸಂವತ್ಸರದಿಂದ ವಿರೋಧಿ ಸಂವತ್ಸರ ದವರೆಗೆ, ಹತ್ತು ವರ್ಷಗಳ ಕಾಲ, ಕೊಡಗಿನ ಪ್ರಜೆಗಳು ನೆಮ್ಮದಿಯಿಂದ ಜೀವಿಸಿದರು.