ಈ ಪುಟವನ್ನು ಪರಿಶೀಲಿಸಲಾಗಿದೆ
೯೬ ಸ್ವಾಮಿ ఆಪರoಪಾರ
ಗಂಡನೂ ಕೊಡಗನ್ನು ಬಿಟ್ಟು ಬಂದರಾದೀತೆಂದು ಗುಟ್ಟಾಗಿ ಮೊದಲು ಸೂಚಿಸಿದ್ದವರೇ ಆಂಗ್ಲರು. ರೆಸಿಡೆಂಟನಿಗೆ ಪರಮಾನಂದವಾಯಿತು. ಅತಿಥಿಗಳ ಬಿಡಾರಕ್ಕಾಗಿ ಎಲ್ಲ ಅನುಕೂಲತೆಗಳೂ ಇದ್ದ ಮನೆಯೊಂದನ್ನು ಆತ ಒದಗಿಸಿಕೊಟ್ಟ. ಜತೆಗೆ ಭರವಸೆಯನ್ನೂ ಇತ್ರ : "ನೀವೇನೂ ಚಿಂತಿಸಬೇಡಿ. ಚಿಕವೀರರಾಜನು ದುಷ್ಟನೂ ಅನರ್ಹನೂ ಅಂಬೋದಕ್ಯೆ ಒಳ್ಳೆಯವರಾದ ನೀವು ಓಡಿಬಂದಿರುವುದೇ ಸಾಕ್ಷಿ ಬೇಗನೆ ಅವನನ್ನು ಗಾದಿಯಿಂದ ಇಳಿಸುತ್ತೇವೆ." ಚನ್ನಬಸಪ್ಪ ಯಾಚಿಸಿದ : "ಕೊಡಗಿನ ಸಿಂಹಾಸನಕ್ಕೆ ನಮ್ಮ ಹೆಂಡತಿ ಹಕ್ಕುದಾರಳು ಅಂಬುವದನ್ನು ಖಾವಂದರು ಒಪ್ಪಬೇಕು." "ಹ್ಞು -ಹ್ಞು. ಸಕಾಲದಲ್ಲಿ ಯೋಗ್ಯವಾದ್ದನ್ನೇ ಮಾಡುತ್ತೇವೆ. ಮದರಾಸ್ ಗವರ್ನರಿಗೆ ಬರೆಯುತ್ತೇವೆ." ಚಿಕವೀರರಾಜನ ಪತ್ರ ಕಾಸ್ಸಾಮೇಜರನ ಕೈಸೇರಿತು. ಅದನ್ನು ಆತ ಮದರಾಸಿಗೆ ಕಳುಹಿದ. ಆಗ ಸರ್ ಫ್ರೆಡರಿಕ್ ಆದಮ್ ಮದರಾಸಿನ ಗವರ್ನರ್. ಆತ ಚಿಕವೀರ ರಾಜನಿಗೆ ಉತ್ತರ ಬರೆದ. ಭಾವೀ ಘಟನೆಗಳಿಗೆ ಮುನ್ಸೂಚಿಯಾಗಿತು ಆ ದೀರ್ಘ ಓಲೆ. ದಕ್ಷ ರಾಜ್ಯಾಡಳಿತದ ಸೂತ್ರಗಳನ್ನು ವಿವರಿಸಿ, ಅವುಗಳಿಗೆ ಅನುಗುಣವಾಗಿ ಚಿಕವೀರ ರಾಜ ವರ್ತಿಸಬೇಕೆಂದು ಅದರಲ್ಲಿ ಕೇಳಲಾಗಿತು, ಈಸ್ಟ್ ಇಂಡಿಯಾ ಕಂಪೆನಿ ಸರಕಾರ ಹಿಂದೆಯೇ ಆಜ್ಞಾಪಿಸಿದ್ದಂತೆ ಕೊಡಗಿನಲ್ಲಾಗುವ ಪ್ರತಿಯೊಂದು ಮರಣದಂಡನೆಯ ಬಗೆಗೂ ಅರಸ ಕಂಪನಿ ಸರಕಾರಕ್ಕೆ ವರದಿ ಕೊಡಬೇಕು: ಕಂಪನಿ ಸರಕಾರದ ಅಪೇಕ್ಷೆಗೆ ವಿರುದ್ಧವಾಗಿ ರಾಜ ವರ್ತಿಸಬಾರದು__ಎಂದು ಆ ಓಲೆಯಲ್ಲಿ ತಿಳಿಸಲಾಗಿತು. ಗವರ್ನರನ ಆದೇಶದಂತೆ ಕಾಸ್ಸಾಮೇಜರ್ ರಾಜನೊಡನೆ ಮುಖತಃ ಮಾತನಾಡುವುದಕ್ಕಾಗಿ ಮಡಕೇರಿಗೆ ಬರುವುದಾಗಿ ಅದರಲ್ಲಿ ಸೂಚಿಸಲಾಗಿತ್ತು. ಆ ಓಲೆಯ ದಿನಾಂಕ : ಸಾವಿರದ ಎ೦ಟುನೂರ ಮೂವತ್ತಮೂರನೆಯ ಇಸವಿ ಜನವರಿ ಹದಿನೆಂಟನೆಯ ತಾರೀಖು. ಆ ತಿಂಗಳ ಕೊನೆಯ ವಾರದಲ್ಲಿ ಕಾಸ್ಸಾಯೇಜರ್ ಮಡಕೇರಿಗೆ ಆಗಮಿಸಿದ. ಆಂಗ್ಲ ಮಿತ್ರರ ಆತಿಥ್ಯಕ್ಕೆಂದೇ ದೊಡ್ಡವೀರರಾಜೇಂದ್ರ ಕಟ್ಟಿಸಿದ್ದ ಭವ್ಯ ಅತಿಥಿಗೃಹದಲ್ಲಿ ಆತನ ಬಿಡಾರಕ್ಕೆ ಚಿಕವೀರರಾಜೇಂದ್ರ ಏರ್ಪಾಟು ಮಾಡಿದ. ಆ ವೇಳೆಯಲ್ಲಿ ಹಲವು ಚಟುವಟಿಕೆಗದ ಬೀಡಾಗಿತು ಮಡಕೇರಿ. ಮುಮ್ಮಡಿ ಕೃಷ್ಣರಾಜನ ಆಂತರಂಗದ ಬಂಟನೊಬ್ಬ__ವೆಂಕೋಜಿ-ರಹಸ್ಯ ರಾಜ ಕಾರ್ಯದ ಮೇಲೆ ಚಿಕವೀರರಾಜನನ್ನು ಕಾಣಲು ಬಂದಿದ್ದ. ಮೈಸೂರು ರಾಜ್ಯವನ್ನು ಮರಳಿ ಪಡೆಯುವ ಯತ್ನದಲ್ಲಿ ಕೊಡಗಿನ ದೊರೆಯ ನೆರವನ್ನು ಒಡೆಯ ಯಾಚಿಸಿದ್ದ. ಚಿಕವೀರರಾಜ ಕೇಳಿದ : “ಇಂಗ್ರೇಜಿಯವರ ಹತ್ತಿರ ನಮ್ಮ ಮಾತು ನಡೀತದೇನು ? ಅವರಿಗರ್ಥವಾಗೋದು. ಮದ್ದುಗುಂಡಿನ ಭಾಷೆ ಮಾತ್ರ. ನಾಳೆ ನಮಗೂ ಅವರಿಗೂ ಯುದ್ಧವಾದರೆ ಕೃಷ್ಣರಾಜರ ಬೆಂಬಲ ನಮಗೆ ಸಿಕ್ಕಾತೇನು?"