ಪುಟ:ಹನುಮದ್ದ್ರಾಮಾಯಣಂ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಪ್ತಮಾಶ್ವಾಸ. 137 ಆಸುರಪತಿಯಂ ಸಲೆ ಕೊಂ | ದೀಶತ್ವಮನೀವೆನೆದೆ ನಿನಗೀ ಧರೆಯೊಳ್ | ೮೨ || ಈ ರವಿತಾರಾಧೀಶರ್ | ಧಾರಿಣಿರಾಮಾಯಣಂಗಳುಳನ್ನೆಬರಂ || ವೀರಾಗ್ರಣಿ ಲಂಕೆಯೋಳಂ | ಭೂರಿಮಹಾಸುಖದಿನಿರ್ಪ್ಪುದೆಂದಂ ರಾಮಂ || || ಬಾರಯ್ ಲಕ್ಷ್ಮಣ ವಾನರ | ವೀರರ್ ನೋಡಲ್ ವಿಭೀಷಣಂಗಭಿಷೇಕಂ | ಭೋರೆನೆ ನೆರವೇರುಗುಮನೆ | ವಾರಿಧಿಯಿಂ ತಂದದೆ ನಿರ್ಮಲಜಲಮಂ || ೮೪ || ಸಚಿವರ್ಬೆರಸುಂ ಮಿಗೆ ರಾ || ತ್ರಿಚರಾಧಿಪತಿತ್ವಕ್ಕೆದೆ ಲಕ್ಷ್ಮಣನಾಗಳ್ || ರಚಯಿಸಿದಂ ಸಂತೋಷದೊ | ಕುಚಿತಂ ಪಟ್ಟಾಭಿಷೇಕಮಂ ದನುಜಂಗಂ | ೮೫ | ವಾನರರುಬ್ಬಿಣದರಾಗಳ್ || ಭಾನುಸುತಂ ತುಪಿತನಾದನಮರಾವಳಿ ಸು || ಮ್ಯಾನದೆ ಪೂವಳೆಗರೆದುದು | ಮಾನವರಧಿನಾಥನಿರ್ದ್ದನತಿಸಂಭ್ರಮದೊಳ್ || ೮೬ || ಅನುಜಂ ತಾನೇನಾದಂ | ಮನುಜರದೆಂತಿಪ್ಪಣರವರ ಬಲಮೆನಿತಿರ್ಕ್ಕುಂ || ಎನುವುದನರಿವೊಡೆ ರಾವಣ | ದನುಜಾಧಿಪನೈದೆ ಶುಕನನುಂ ಕರೆದಂದಂ 11 ೮೭ || ನೀನವರೆಡೆಗಂ ಪೋಗಿ ನಿ | ದಾನದ ತದ್ಭಲಮನೀಕ್ಷಿಸುತ್ತುಂ ಬಳಿಯಂ || ಭಾನುಜನಂತಸ್ಸ ಮನರಿ | ದಾ ನುಡಿಯಂ ಪೇಳ್ವುದೆಂದು ನಿಯಮಿಸಿದನವಂ || ೮೮ | ಶುಕನತಿಭರದಿಂ ರವಿಜನ | ನಿಕಟಕ್ಕೆಳರ್ಪ ಸಮಯದೊಳೆ ವಾನರಸ್ಯೆ | ನಿಕಮಿಾಕ್ಷಿಸಿ ಕೋಪದೆ ಗರ | ನಕೆ ಪಾದ್ದು ೯೦ ಪಿಡಿದು ಗುದ್ದು-ತಿರ್ದ್ದುದು ಖಳನಂ || ೮೯ |