ಪುಟ:ಹನುಮದ್ದ್ರಾಮಾಯಣಂ.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

264 ಹನುಮದ್ರಾಮಾಯಣ. ಪರಿಶೋಭಿಸುವಾರತಿಯಂ | ಕರದೊಳ್ ಪಿಡಿದಿಪ್ಪಣರವದಿರೀಕ್ಷಿಸ ರಮಣಾ || ೧೧೨ || ಎಂದುಂ ನಾನಾವಿಧದಿಂ | ಮಂಡೋದರಿಮುಖ್ಯ ನಾರಿಯರ್ ತಂತಮಗಂ | ಸಂದಣಿಸಿ ನೋಡಿ ಮೂರ್ಚೆಗೆ | ಸಂದರ್ ಬಹುದುಃಖದಿಂದಮದನೇವೇಳೆ೦ | ೫೧೩ || ನಿಲಿಸವರ ದುಃಖಮಂ ನೀಂ || ತಿಳಿಸೆನುತಂ ರಾಮನನುಜಗಂ ನೇಮಿಸಲುಂ || ಸಲೆ ನಡೆತಂದು ವಿಭೀಷಣ | ಗೊಲವಿಂ ಕೌಶೋಪಶಾಂತಿಯಂ ಗೆಯ್ಯನವಂ | ೧೧೪ || ಆರಿಂಗಳಿ ಸುಮ್ಮನೆ | ಶಾರೀರ್ಯ೦ ಸ್ಥಿರಮೆ ದೇವದಾನವನರರೊಳ್ | ವೀರಸ್ವರ್ಗಂಬಡೆದಂ || ಧಾರಿಣಿಯೊಳ್ ಸೆಣಸಿ ಮಡಿದು ದನುಜಾಧೀಶಂ || ೧೫ || ದಂದುಗಳೊಳಗಾಗದೆ ಭರ | ದಿಂದೆಸಗಿ ಪರೇತಕೃತ್ಯಮಂ ವಿನಯದೊಳಂ || ಮಂಡೋದರಿಯಂ ಮನ್ನಿಸಿ | ಬಂದಪುದವನಿಪನ ನಿಕಟಕೆಂದುಂ ಮರಳಂ | || ೫೬ | ನಿಲದ ವಿಭೀಷಣನಬಲಾ | ಕುಲಮಂ ಸಂತಯ್ಯ ವಿಧಿತವೇದಕ್ರಮದಿಂ || ಕಲಿತಾಹಿತಾಗ್ನಿಯಂ ಪ್ರ | ಜ್ವಲಿಸುತೆ ತನುವನೈದೆ ಚಿತೆಯೊಳಗಿಟ್ಟಂ | m೭ | ಮಿಸುಗುವ ತಚ್ಚಿಖಿಯಂ ಯೋ | ಜಿಸಿ ದಹನಂಗೆಯ್ದು ಮಗುಳೆ ವಿಧ್ಯುಕ್ತಿಯೋಳಂ || ಲಸಿತಮಹಾಸಂಸ್ಕಾರಮ | ನೆಸಗಿ ಶುಚಿರ್ಭೂತನಾದನಾ ಸರಮೇಶಂ ||೮|| ವನಿತೆಯರು ಬೀಳ್ಕೊಟ್ಟುಂ || ಮನೆಗಳ್ ವಿಭೀಷಣಾಸುರೇಂದ್ರಂ ಬಳಿಕಂ || ಮನುಜಾಧಿಪನೆಡೆಗೆಳಂ | ದನುವಿಂ ಪದಕೆರಗೆ ಮನ್ನಿಸಿದನಾ ರಾಮಂ 1 ೧೯ |