ವಿಷಯಕ್ಕೆ ಹೋಗು

ಪುಟ:AAHVANA.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಆಹ್ವಾನ

ನಿರೂಪಕ:

ಮೂಲಭೂತ ಘನ ಕೈಗಾರಿಕೋದ್ಯಮಗಳ ಜತೆಗೆ ಗ್ರಾಮಿಾಣ ಗುಡಿ ಕೈಗಾರಿಕೆಗಳಿಗೂ ಒಂದು ಸ್ಥಾನ.

ಪುರುಷ ಪತ್ರಿಕೋದ್ಯೋಗಿ :

ಮದರಾಸಿನಲ್ಲಿ ಅಖಂಡ ರೈಲುಡಬ್ಬಿಗಳನ್ನು ತಯಾರಿಸುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಗೆ, ಐದುವರ್ಷಗಳ ಗುರಿಯನ್ನು ಮೂರೇ ವರ್ಷಗಳಲ್ಲಿ ಸಾಧಿಸಿದ ಹಿರಿಮೆಯಿದೆ.

ಸ್ತ್ರೀಕಂಠ :

ಯಾಕಯ್ಯ ಇಷ್ಟೊಂದು ನೀರು ಹಾಕ್ತೀಯಾ ಹಾಲಿಗೆ? ದಿನಾ ಇದೇ ಗೋಳು. ಸಾಕಪ್ಪಾ, ಸಾಕು!

ಸ್ತ್ರೀ ಪತ್ರಿಕೋದ್ಯೋಗಿ :

ಮುಂಬಯಿಯ ಆರೇ ಮಿಲ್ಕ್ ಕಾಲನಿ, ಇಡೀ ನಗರದ ಅರ್ಧ ಜನಸಂಖ್ಯೆಗೆ ಸಾಲುವಷ್ಟು ಒಳ್ಳೆಯ ಹಾಲನ್ನು ಪೂರೈಸುತ್ತಿದೆ.

ಪುರುಷ ಪತ್ರಿಕೋದ್ಯೋಗಿ :

ಚಿತ್ತರಂಜನ ಕಾರಖಾನೆಯ ರೈಲು ಎಂಜಿನುಗಳು,ಯಾವದೇಶವಾದರೂ ಹೆಮ್ಮೆ ಪಡುವಂಥವಾಗಿವೆ.

ಸ್ತ್ರೀ ಪತ್ರಿಕೋದ್ಯೋಗಿ :

ಮುಂಬಯಿಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆ, ಪುಣೆಯ ರಾಸಾಯನಿಕ ಸಂಶೋಧನಾ ಸಂಸ್ಥೆ,ಪಿಂಪ್ರಿಯ ಪೆನಿಸಿಲಿನ್ ಕಾರಖಾನೆ_ ಇವೆಲ್ಲಾ, ಸರಿಯಾದ ದಿಕ್ಕಿನಲ್ಲಿ ಇಡಲಾಗಿರುವ ದೃಢ ಹೆಜ್ಜೆಗಳು.

ಪುರುಷ ಪತ್ರಿಕೋದ್ಯೋಗಿ :

ಬೆಂಗಳೂರಿನ ಹಿಂದೂಸ್ಥಾನ ವಿಮಾನ ಕಾರಖಾನೆ, ಸೂಪರ್ ಸಾನಿಕ್- ಧ್ವನಿವೇಗದ-ವಿಮಾನವನ್ನು ನಿರ್ಮಿಸಿದೆ.

ನಿರೂಪಕ :

ರಾಷ್ಟ್ರರಕ್ಷಣೆಯ ಮಾರ್ಗದಲ್ಲಿ ಈ ಆಕಾಶಹರಿಣಿಯೊಂದು ಹೆಗುರುತು.

————

೬೩