ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಚಿರಸ್ಮರಣೆ ೧೦೧
ಒಂದು ನಿಮಿಷ ಸುಮ್ನನಿದ್ದು ನಂಬಿಯಾರರು ಆಜ್ನೆ ಇತ್ತರು: "ಇವತ್ತು ಪುರುಸೊತ್ತಿಲ್ಲ,ನಾಳೆ ಬರಬೇಕೂಂತ ಹೇಳು." "ಹೂಂ ಒಡೆಯ.ಎಷ್ಟೋತ್ತಿಗೆ ಬರೋದಕ್ಕೆ ಹೇಳ್ಣಿ?" ಜಮೀನ್ದಾರರು ಸ್ವರವೇರಿಸಿದರು: "ನಾಯಿ ಮಗನೆ!ಅದೇನೋ ಹಾಗೆಂದರೆ?ಎಷ್ಟೊತ್ತಿಗೆ---ಅಂತೆ,ಭೇಟಿಗೆ
ಸಮಯ ಗೊತ್ತುಮಾಡೋದಕ್ಕೆ ಅವರು ಮಹಾರಾಜರೇನೋ ಹೋಗು..... ಬೆಳಿಗ್ಗೆನೇ ಬಂದು ಇಲ್ಲಿ ಕಾದಿರ್ಬೇಕೂಂತ ಹೇಳು!"
ಆಳು ಬಾಗಿಬಾಗಿ ಹೊರಟುಹೋದ.ನಂಬಿಯಾರರು ಠೀವಿಯಿಂದ ಮಾಸ್ತರತ್ತ
ತಿರುಗಿ ಸ್ವರ ಬದಲಾಯಿಸಿ ಹೇಳಿದರು:
"ಸೊಳೇ ಮಕ್ಕಳು ಜಗಳಾಡ್ತಾರೆ:ಆಮೇಲೆ ರಾಜಿ ಮಾಡಿಸ್ಕೊಡಿಂತ ಇಲ್ಲಿಗೆ
ಬರ್ತಾರೆ."
ಅಳನ್ನು ಉದ್ದೇಶಿಸಿ ಮಾತನಾಡಿದ ಧ್ವನಿಗಿಂತ ಆತ್ಮಪ್ರಶಂಸೆಯ ಈಸ್ವರ
ಭಿನ್ನವಾಗಿತ್ತು. 'ಒಬ್ಬೊಬ್ಬರಿಗೋಸ್ಕರ ಒಂದೊಂದು ರೀತಿ ಗೋಟಲು' ಎಂದು ಕ್ಂಡರು ಮಾಸ್ತರು.ಮೂಂದಕ್ಕೆ ಇನ್ನೂ ರಾಗವಾಗಿ ನಂಬಿಯಾರರೆಂದರು:
"ಜಮೀನ್ದಾರ ರೈತರಿಗೆಲ್ಲ ತಂದೆ ಇದ್ದ ಹಾಗೆ,ಜಗಳ ಆಡಿಕೊಂಡು ಇಲ್ಲಿಗೆ
ಅಲ್ಲದೆ ಬೇರೆಲ್ಲಿಗೆ ಬರಬೇಕು ಹೇಳಿ?....."
....ಸಂದರ್ಶನವನ್ನು ಇನ್ನೂ ಉದ್ದ ಬೆಳೆಸುವುದರಲ್ಲಿ ಅರ್ಥವಿಲ್ಲವೆಂದು,
ಮಾಸ್ತರು ಹೊರಡಲು ಸನ್ನದ್ದರಾಗಿ ಅತ್ತಿತ್ತ ನೋಡಿದರು.ಮಾಸ್ತರ ಇಂಗಿತವನ್ನು ನಂಬಿಯಾರರು ಊಹಿಸದಿರಲಿಲ್ಲ.ಅವರ ಅಳನ್ನು ಕರೆದರು:
"ಏ ಇವನೇ,ಬಾ ಇಲ್ಲ!" ಆಳು ಬಂದಾಗ ಅವರು ಆದೇಶವಿತ್ತರು: "ಎರಡು ದೊಡ್ಡ ಪಪ್ಪಾಯಿಹಣ್ಣು ತಗೋಂಡು ಮಾಸ್ತರ ಜತೇಲಿ ಹೋಗು." ಆದರೆ ಮಾಸ್ತರಿಗೆ ಮಾತುಕತೆಯಿಂದಲೇ ಹೊಟ್ಟೆ ತುಂಬಿತ್ತು.ಪಪ್ಪಾಯಿ
ಹಣ್ಣುಗಳು ಅವಶ್ಯವೆನ್ನಿಸಲಿಲ್ಲ. ಉಡುಗೊರೆ ಇಲ್ಲದೆ,ಬಂದ ಹಾಗೆಯೇ ಹಿಂತಿರುಗಲು ಅವರು ಯತ್ನಿಸಿದರು:
"ಬೆಡಿ.ಸುಮ್ಮನೆ ಯಾಕೆ?ದಯವಿಟ್ಟು ಬೇಡಿ." ನಂಬಿಯಾರರು ಎದ್ದುನಿಂತು,'ಸುಮ್ಮನಿರಿ'ಎನ್ನುವಂತೆ ಆತ್ಮೀಯತೆಯಿಂದ
ಕೈಬೀಸಿ"ತಗೊಂಡು ಬಾರೋ. ಚೆನ್ನಗಿರೋದು,ನೋಡಿ ಆರಿಸಿ ತಾ"ಎಂದರು.
ಹೊರಕ್ಕೆ ಹೊರಟ ಮಾಸ್ತರು ಒಳಬಾಗಿಲಿನತ್ತ ಒಮ್ಮೆ ದ್ರಿಷ್ಟಿಬೀರಿದರು.ಅಲ್ಲಿ