ಪುಟ:Chirasmarane-Niranjana.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ಚಿರಸ್ಮರಣೆ ೧೦೧

    ಒಂದು ನಿಮಿಷ ಸುಮ್ನನಿದ್ದು ನಂಬಿಯಾರರು ಆಜ್ನೆ ಇತ್ತರು:
    "ಇವತ್ತು ಪುರುಸೊತ್ತಿಲ್ಲ,ನಾಳೆ ಬರಬೇಕೂಂತ ಹೇಳು."
    "ಹೂಂ ಒಡೆಯ.ಎಷ್ಟೋತ್ತಿಗೆ ಬರೋದಕ್ಕೆ ಹೇಳ್ಣಿ?"
    ಜಮೀನ್ದಾರರು ಸ್ವರವೇರಿಸಿದರು:
    "ನಾಯಿ ಮಗನೆ!ಅದೇನೋ ಹಾಗೆಂದರೆ?ಎಷ್ಟೊತ್ತಿಗೆ---ಅಂತೆ,ಭೇಟಿಗೆ

ಸಮಯ ಗೊತ್ತುಮಾಡೋದಕ್ಕೆ ಅವರು ಮಹಾರಾಜರೇನೋ ಹೋಗು..... ಬೆಳಿಗ್ಗೆನೇ ಬಂದು ಇಲ್ಲಿ ಕಾದಿರ್ಬೇಕೂಂತ ಹೇಳು!"

     ಆಳು ಬಾಗಿಬಾಗಿ ಹೊರಟುಹೋದ.ನಂಬಿಯಾರರು ಠೀವಿಯಿಂದ ಮಾಸ್ತರತ್ತ

ತಿರುಗಿ ಸ್ವರ ಬದಲಾಯಿಸಿ ಹೇಳಿದರು:

    "ಸೊಳೇ ಮಕ್ಕಳು ಜಗಳಾಡ್ತಾರೆ:ಆಮೇಲೆ ರಾಜಿ ಮಾಡಿಸ್ಕೊಡಿಂತ ಇಲ್ಲಿಗೆ

ಬರ್ತಾರೆ."

    ಅಳನ್ನು ಉದ್ದೇಶಿಸಿ ಮಾತನಾಡಿದ ಧ್ವನಿಗಿಂತ ಆತ್ಮಪ್ರಶಂಸೆಯ ಈಸ್ವರ

ಭಿನ್ನವಾಗಿತ್ತು. 'ಒಬ್ಬೊಬ್ಬರಿಗೋಸ್ಕರ ಒಂದೊಂದು ರೀತಿ ಗೋಟಲು' ಎಂದು ಕ್ಂಡರು ಮಾಸ್ತರು.ಮೂಂದಕ್ಕೆ ಇನ್ನೂ ರಾಗವಾಗಿ ನಂಬಿಯಾರರೆಂದರು:

    "ಜಮೀನ್ದಾರ ರೈತರಿಗೆಲ್ಲ ತಂದೆ ಇದ್ದ ಹಾಗೆ,ಜಗಳ ಆಡಿಕೊಂಡು ಇಲ್ಲಿಗೆ

ಅಲ್ಲದೆ ಬೇರೆಲ್ಲಿಗೆ ಬರಬೇಕು ಹೇಳಿ?....."

  ....ಸಂದರ್ಶನವನ್ನು ಇನ್ನೂ ಉದ್ದ ಬೆಳೆಸುವುದರಲ್ಲಿ ಅರ್ಥವಿಲ್ಲವೆಂದು,

ಮಾಸ್ತರು ಹೊರಡಲು ಸನ್ನದ್ದರಾಗಿ ಅತ್ತಿತ್ತ ನೋಡಿದರು.ಮಾಸ್ತರ ಇಂಗಿತವನ್ನು ನಂಬಿಯಾರರು ಊಹಿಸದಿರಲಿಲ್ಲ.ಅವರ ಅಳನ್ನು ಕರೆದರು:

    "ಏ ಇವನೇ,ಬಾ ಇಲ್ಲ!"
    ಆಳು ಬಂದಾಗ ಅವರು ಆದೇಶವಿತ್ತರು:
    "ಎರಡು ದೊಡ್ಡ ಪಪ್ಪಾಯಿಹಣ್ಣು ತಗೋಂಡು ಮಾಸ್ತರ ಜತೇಲಿ ಹೋಗು."
    ಆದರೆ ಮಾಸ್ತರಿಗೆ ಮಾತುಕತೆಯಿಂದಲೇ ಹೊಟ್ಟೆ ತುಂಬಿತ್ತು.ಪಪ್ಪಾಯಿ

ಹಣ್ಣುಗಳು ಅವಶ್ಯವೆನ್ನಿಸಲಿಲ್ಲ. ಉಡುಗೊರೆ ಇಲ್ಲದೆ,ಬಂದ ಹಾಗೆಯೇ ಹಿಂತಿರುಗಲು ಅವರು ಯತ್ನಿಸಿದರು:

     "ಬೆಡಿ.ಸುಮ್ಮನೆ ಯಾಕೆ?ದಯವಿಟ್ಟು ಬೇಡಿ."
     ನಂಬಿಯಾರರು ಎದ್ದುನಿಂತು,'ಸುಮ್ಮನಿರಿ'ಎನ್ನುವಂತೆ ಆತ್ಮೀಯತೆಯಿಂದ

ಕೈಬೀಸಿ"ತಗೊಂಡು ಬಾರೋ. ಚೆನ್ನಗಿರೋದು,ನೋಡಿ ಆರಿಸಿ ತಾ"ಎಂದರು.

     ಹೊರಕ್ಕೆ ಹೊರಟ ಮಾಸ್ತರು ಒಳಬಾಗಿಲಿನತ್ತ ಒಮ್ಮೆ ದ್ರಿಷ್ಟಿಬೀರಿದರು.ಅಲ್ಲಿ