ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಚಿರಸ್ಮರಣೆ ೨೫೭ ಇಲ್ಲಿಂದ. ಇವರು ಪಟ್ಟಣವಾಸಿಗಳು... ಬಡವರ ಸಂಕಟವೇನೆಂದು ಬಲ್ಲವರು.. ಅವರ ನಡುವೆ ಗೂಢಚಾರರೂ ಇರಬವುದು. ಹೂವಿನ ದಂಟಿಗೆ ಅಂಟಿಕೊಂಡೇ ಮುಳ್ಳು....
ಮೊದಲು ನಾಲ್ವರು-ಅಪ್ಪು, ಚಿರಕುಂಡ, ಕುಂಞ್ಂಬು ಮತ್ತು ಅಬೂಬಕರ್. ಬಳಿಕ-ಕುಟ್ಟಿಕೃಷ್ಣ. ಅವನ ಹಿಂದೆ
ಶಿಕ್ಷೆಗೆ ಗುರಿಯಾದ ಮಾಸ್ತರು ಮತ್ತಿತರರು. ಅವರ ಹಿಂದೆಯೇ ಮೋಟಾರನ್ನೇರಿ ಬರಲೆತ್ನಿಸಿದ ಬಂಧಮುಕ್ತರು.
"ನೀವು ಬರಬೇಡಿ! ಬುದ್ದಿ ಇಲ್ಲ ನಿಮಗೆ? ಹಾಕಿ ಬಾಗಿಲು!" ಉದ್ವೇಗ ತುಂಬಿದ್ದ ಧ್ವನಿಯಲ್ಲಿ ಯಾರೋ ಕೂಗಿದರು: "ಇಂಕ್ವಿಲಾಬ್-" ಅದು ಅನಿರೀಕ್ಷಿತವಾಗಿತ್ತು. ಅಂಜುತ್ತ ಉತ್ತರವಿತ್ತುದೊಂದೇ ಸ್ವರ: "ಜಿಂದಾಬಾದ್!" ಮತ್ತೆ ಮೊದಲಿನ ಧ್ವನಿಯೇ ಹೆಚ್ಚು ಗಟ್ಟಿಯಾಗಿ ಕೂಗಿತ್ತು: "ಇಂಕ್ವಿಲಾಬ್-" ಈಗ ಧೄರ್ಯದಿಂದ... ಉತ್ತರಕೊಟ್ಟ ಸ್ವರಗಳು ನೂರು. "ಜಿಂದಾಬಾದ್!"
ಹಳ್ಳಿಯವರೂ ಪಟ್ಟಣದವರೂ ವಾಹನದೊಳಗಿದ್ದವರೂ ಹೊರಗಿದ್ದವರೂ ನೂರಾರು ಜನ ಈಗ ಕೂಗಿದರು:
"ದಬ್ಬಾಳಿಕೆಗೆ-" "ಧಿಕ್ಕಾರ!" "ಸಾಮ್ರಾಜ್ಯಶಾಹಿ-" "ನಾಶವಾಗಲಿ!" "ಕ್ರಾಂತಿಗೆ_" "ಜಯವಾಗಲಿ!"
ನೆರೆದವರನ್ನು ಚೆದರಿಸಲೆಂದು ಪೋಲೀಸರು ದಂಡವೆತ್ತುತ್ತಿದ್ದಂತೆ ವಾಹನ ಹೊರಟಿತು.
ಕೊನೆಯದಾಗಿ ಹಲವು ಕಂಠಗಳಿಂದ ವಂದನೆ:
"ಕಯ್ಯೂರು ಬಾಂಧವರಿಗೆ ರಕ್ತ ನಮಸ್ಕಾರ!" ಅದಕ್ಕೆ, ಧಾವಿಸುತ್ತಿದ್ದ ವಾಹನದೊಳಗಿಂದ ಹಲವು ಧ್ವನಿಗಳ ಮರುವಂದನೆ: "ಸಂಗಾತಿಗಳೇ ರಕ್ತನಮಸ್ಕಾರ!"