ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕನ್ನಡದಲ್ಲಿ ಅವು ಯಕ್ಷಗಾನದ ಮೂಲಕ ಪ್ರಸಾರವಾದುವು. ಯಕ್ಷಗಾನದ ಆರಾಧನಾ ಭಾವನೆ ಕ್ರಮೇಣ ಕಡಿಮೆಯಾಗಿ ಅದು ಜನಪದ ಆಚರಣೆಗಳಿಗಿ೦ತ ಭಿನ್ನಸ್ತರದಲ್ಲಿ ನಿ೦ತಿದೆ. ಮು೦ದೆ ಈ ಯಕ್ಷಗಾನವೇ ಯಕ್ಷಗಾನ ಬೊ೦ಬೆಯಾಟವಾಗಿ ಪರಿಣಮಿಸಿತು.

ಭೂತಾರಾಧನೆಯಲ್ಲಿ ಹೆಚ್ಚಾಗಿ ಬಳಸುವ ಹಿಮ್ಮೇಳದ ಸಾಧನಗಳು, ವಾದ್ಯದ ರಾಗಗಳು, ಯಕ್ಷಗಾನದ ಬಾನೆಯನ್ನು ಹೋಲುತ್ತದೆ. ವಿಚಿತ್ರವೆ೦ದರೆ ವರ್ಗಭೇಧಗಳಿಲ್ಲದೆ ಪರ೦ಪರೆಯನ್ನು ಅನುಸರಿಸಿ ಎಲ್ಲ ಜನಾಂಗದವರೂ ಭೂತಾರಾಧನೆ, ನಾಗಾರಾಧನೆ ಮತ್ತು ಯಕ್ಷಗಾನ, ಕೋಲ, ಜಾತ್ರೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಭೂತಾರಾಧನೆ ದಕ್ಷಿಣ ಕನ್ನಡದ ಮೂಲನಿವಾಸಿಗಳ ಕೊಡುಗೆಯಾಗಿರಬಹುದು. ಯಾಕೆಂದರೆ ಭೂತಾರಾಧನೆಗೆ ಬಳಸುವ ತೆಂಗು, ಕಂಗು ಬಾಳೆಗಳ ಸರಕುಗಳ ಉಪಯೋಗದಿ೦ದ ಇದು ತಿಳಿದು ಬರುತ್ತದೆ.

ಭೂತದ ಚರಿತ್ರೆಯನ್ನು ಧೀರ್ಘವಾದ ಪಾಡ್ದನಗಳಿ೦ದ ಒಂದೆ ಧಾಟಿಯಲ್ಲಿ ಪ್ರಸ್ತಾಪಿಸಿದರೆ ನಾಗಾರಾಧನೆಯಲ್ಲಿ ಭಾಗವತ ಸ೦ಪ್ರದಾಯದ ಹಾಡುಗಳಿವೆ. ಯಕ್ಷಗಾನದಲ್ಲಿ ಪಾಡ್ದನಗಳ ಆವರ್ತನದಂತೆಯೇ ಪ್ರಸ೦ಗಗಳಿವೆ. ಒಂದರಿಂದ ಒ೦ದು, ಇವು ಜನಪದದಿಂದ ಶಿಷ್ಟ ರೂಪವನ್ನು ತಾಳಿವೆಯೆ೦ಬುದರಲ್ಲಿ ಸ೦ದೇಹವಿಲ್ಲ.

ಭೂತರಾಧನೆಯಲ್ಲಿ ಜಿಲ್ಲೆಯ ಎಲ್ಲ ಕಡೆಯಲ್ಲೂ ಒಂದೇ ರೀತಿಯ ನಿಯಮವಿದೆ. ಭೂತ ಮತ್ತು ನಾಗಾರಾಧನೆಯ ನಡುವೆ ಇನ್ನೂ ಸ್ವಲ್ಪ ವಿಶಿಷ್ಟವೆನಿಸುವ ಕೋಟಿ ಚೆನ್ನಯರ ಆರಾಧನೆಗಳಿವೆ. ಇಲ್ಲಿ ಬಳಸುವ ನರ್ತನಕ್ಕೆ ಯಕ್ಷಗಾನ ಬಾನೆಯ ಮುಖ ವೀಣೆಗಳಿವೆ. ನಾಲ್ಕು ಮತ್ತು ಏಳು ಮಾತ್ರೆಗಳಲ್ಲಿ: ಆವರ್ತನದ ಕುಣಿತಗಳಿವೆ.

ಇವೆಲ್ಲ ದಕ್ಷಿಣ ಕನ್ನಡದ ಮೂಲ ನಿವಾಸಿಗಳಿಗೂ, ಪರಸ್ಥಳದಿಂದ ಬ೦ದ ಆಗ೦ತುಕ ಜನಾ೦ಗಗಳಿಗೂ ಉ೦ಟಾದ ನ೦ಟಿನ ಫಲವೆಂದು ಹೇಳಬಹುದು. ಈ ಕೊಡುಕೊಳುಗೆಯ ಸಂಸ್ಕೃತಿಯಿ೦ದಾಗಿ ದಕ್ಷಿಣ ಕನ್ನಡವು ವೈವಿಧ್ಯಮಯ ಸ೦ಸ್ಕೃತಿಯ ಒ೦ದು ನೆಲೆವೀಡಾಗಿ ಬಿಟ್ಟಿದೆ.

27