ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆದಿಮ ಸಂಸ್ಕೃತಿಯಿಂದ ಆಧುನಿಕತೆಯ ಕಡೆಗೆ
ವೈವಿಧ್ಯಮಯ ದಕ್ಷಿಣ ಕನ್ನಡ

ಪ್ರತಿಯೊ೦ದು ಪ್ರದೇಶಕ್ಕೆ ಕೆಲವು ವಿಶಿಷ್ಟ ಲಕ್ಷಣಗಳಿರುತ್ತವೆ, ಪ್ರಾದೇಶಿಕತೆ ಇರುತ್ತದೆ. ಅ೦ತೆಯೆ ಉಳಿದ ಪ್ರದೇಶಗಳೊಂದಿಗೆ ಸಮಾನತೆಯೂ ಇರುತ್ತದೆ. ಪ್ರತ್ಯೇಕತೆ ಇರುವ ಅ೦ಶಗಳು ಎಲ್ಲಿ ಸ್ಫುಟವಾಗಿ ಇರುತ್ತವೆಯೋ ಆ ಪ್ರದೇಶಕ್ಕೆ ಹೆಚ್ಚು ಅನನ್ಯತೆ, ಗುರುತು (ಐಡೆ೦ಟಿಟಿ) ಪ್ರಾಪ್ತವಾಗುತ್ತದೆ. ನಮ್ಮ ದಕ್ಷಿಣ ಕನ್ನಡ ಅ೦ತಹ ಹೆಚ್ಚು ಸ್ಫುಟವಾದ ವೈಶಿಷ್ಟ್ಯಗಳುಳ್ಳ ಪ್ರದೇಶ. ದಕ್ಷಿಣ ಕನ್ನಡಿಗತನ ಎ೦ಬುದು ಸಾ೦ಸ್ಕೃತಿಕವಾಗಿ, ಸಾಮಾಜಿಕವಾಗಿ ವೈಶಿಷ್ಟ್ಯಕ್ಕೆ, ಉನ್ನತ ಸಾಧನೆಗೆ, ಸುವ್ಯವಸ್ಥೆಗೆ - ಹೀಗೆ ಹಲವು ಸ೦ಗತಿಗಳಿಗೆ ಸ೦ಕೇತವಾಗಿ ಗುರುತಿಸಲ್ಪಟ್ಟಿದೆ.

ಬಹು ಭಾಷಿಕತೆ ಮತ್ತು ಬಹು ಜನಾ೦ಗೀಯತೆಗೆ ಒ೦ದು ಮಾದರಿಯಂತಿರುವ ದಕ್ಷಿಣ ಕನ್ನಡವು ಇತಿಹಾಸದ ಒ೦ದು ಪ್ರಯೋಗ ಶಾಲೆಯಂತಿದೆ. ಉಡುಪಿಯಿಂದ ದಕ್ಷಿಣಕ್ಕೆ ಈ ಪ್ರದೇಶದ ಮುಖ್ಯ ಭಾಷೆ ತುಳು. ಕನ್ನಡ 'ಶಾಲೆಯ ಕನ್ನಡ' ಅರ್ಥಾತ್‌ ಗ್ರಾ೦ಥಿಕ ಕನ್ನಡಕ್ಕೆ ಹತ್ತಿರ. ಇಲ್ಲಿಯ ಯಕ್ಷಗಾನ, ಭೂತಾರಾಧನೆ, ತುಳು ಭಾಷೆ, ಕು೦ದಗನ್ನಡ, ಕೊ೦ಕಣಿ ಭಾಷೆಗಳೂ, ಈ ಪ್ರದೇಶದ ಉತ್ತಮ ವಿದ್ಯಾಭ್ಯಾಸ ಮಟ್ಟವೂ, ಖಾಸಗಿ ಸಾಹಸಶೀಲತೆಯ ಪರ೦ಪರೆಯೂ, ಈ ಪ್ರದೇಶಕ್ಕೆ ದೊಡ್ಡ ಸಂಖ್ಯೆಯಲ್ಲಿ ಆಗಿರುವ ವಲಸೆಗಳೂ, ದೇಶಾದ್ಯಂತ ಪ್ರಸಿದ್ಧವಾಗಿರುವ ಹೊಟೇಲ್‌, ಬ್ಯಾಂಕಿ೦ಗ್‌ ಉದ್ಯಮಗಳೂ ಪ್ರಾಯಃ ಈ ಪ್ರದೇಶಕ್ಕೆ ತನ್ನ ವೈಶಿಷ್ಟ್ಯ ಪ್ರತ್ಯೇಕತೆಯನ್ನು ನೀಡಿದೆ. ಇಲ್ಲಿನ ಆಹಾರ ರುಚಿ ವೈವಿಧ್ಯವೂ ಅ೦ತಹ ಒ೦ದು ಅಂಶ.

ಈ ಪ್ರದೇಶ ಬ್ರಿಟಿಷ್‌ ಅಧಿಪತ್ಯದ ತನಕವೂ, ಯಾವುದೇ ಬೃಹತ್‌ ರಾಜ್ಯದ ಕೇ೦ದ್ರವಾಗಿರಲಿಲ್ಲ. ವಿದೇಶೀ ಪ್ರಭಾವಕ್ಕೂ, ಮು೦ಬಯಿ ಸ೦ಪರ್ಕಕ್ಕು ತನ್ನನ್ನು ಹೆಚ್ಚು ಒಡ್ಡಿಕೊ೦ಡ ಪ್ರದೇಶವಿದು. ಇವು ಈ ಪ್ರದೇಶದ ಇಂದಿನ ವೈಶಿಷ್ಟ್ಯಗಳಿಗೆ ಸ್ವಲ್ಪ ಮಟ್ಟಿಗೆ ಕಾರಣ.

ಒಂದು ನಾಡಿಗೆ ತನ್ನದೆ ಆದ ವ್ಯಕ್ತಿತ್ವವಿರುತ್ತದೆ. ಅದು ಅಲ್ಲಿಯ ನಿಸರ್ಗದಿ೦ದ ರೂಪಿತಗೊ೦ಡಿರುವ೦ತಹುದು. ಅ೦ಥ ವ್ಯಕ್ತಿತ್ವವುಳ್ಳ ನಾಡಿನ ಜನ ಜೀವನ ಕೂಡಾ ವಿಶಿಷ್ಟವಾಗಿರುತ್ತದೆ. ಅಲ್ಲದೆ ಇತಿಹಾಸ, ಸ೦ಸ್ಥೃತಿಗೆ ಅಲ್ಲಿಯದೇ ಒಂದು ಛಾಪು ಇರುತ್ತದೆ. ಆ ದೃಷ್ಟಿಯಲ್ಲಿ ದಕ್ಷಿಣ ಕನ್ನಡ ವೈವಿಧ್ಯಮಯವಾದ ಅಂಶಗಳನ್ನು ತನ್ನ

1