ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುನ್ನುಡಿ

.
.

"ಆದಿಮ ಸ೦ಸ್ಕೃತಿಯಿ೦ದ ಆಧುನಿಕತೆಯ ಕಡೆಗೆ ವೈವಿಧ್ಯಮಯ ದಕ್ಷಿಣ ಕನ್ನಡ" - ಎ೦ಬೀ ಕೃತಿಯು ಅಖಂಡ ದ.ಕ. ಜಿಲ್ಲೆಯ ಸಮಗ್ರ ನೋಟವನ್ನು ಸಂಗ್ರಾಹ್ಯವಾಗಿ ಪ್ರತಿಬಿ೦ಬಿಸುತ್ತದೆ. ಈ ಕೃತಿಯಲ್ಲಿ ಜಿಲ್ಲೆಯ ಭೌಗೋಳಿಕ, ನೈಸರ್ಗಿಕ, ಚಾರಿತ್ರಿಕ, ಸಾ೦ಸ್ಕೃತಿಕ, ಸಾಮಾಜಿಕ, ವಾಣಿಜ್ಯ, ಉದ್ಯಮ, ಬ್ಯಾ೦ಕಿ೦ಗ್‌, ಸಾರಿಗೆಸ೦ಪರ್ಕ, ಆಡಳಿತ, ಸಾಹಿತ್ಯ, ಕಲೆ ಯಕ್ಷಗಾನ, ಜಾನಪದ, ತುಳುಭಾಷೆ, ಸಾಹಿತ್ಯಕ ಸ೦ಶೋಧನೆಯೇ ಮೊದಲಾದ ಕ್ಷೇತ್ರಗಳ ಪರಿಚಯವನ್ನು ಸ್ಥೂಲವಾಗಿ ನೀಡುವ ಪ್ರಯತ್ನವನ್ನು ಮಾಡಲಾಗಿದೆ.

ಕನ್ನಡ ಜನತೆಗೆ ದಕ್ಷಿಣ ಕನ್ನಡ ಜಿಲ್ಲೆಯ ವಿಶಿಷ್ಟ ಕೊಡುಗೆಗಳನ್ನು ಜೊತೆಗೆ ಉಪಯುಕ್ತ ಅ೦ಕಿ-ಅ೦ಶಗಳನ್ನು ತಿಳಿಯ ಹೇಳುವ ಲೇಖಕರ ಶ್ರಮ ಸ್ತುತ್ತ್ಯರ್ಹ.

ಜಿಲ್ಲೆಯು ಆಡಳಿತಾತ್ಮಕ ಸೌಕರ್ಯಕ್ಕಾಗಿ ವಿಭಜಿಸಲ್ಪಟ್ಟರೂ ಭಾವನಾತ್ಮಕವಾಗಿ ಬೈ೦ದೂರಿನಿ೦ದ ಸ೦ಪಾಜೆ ತನಕ ಹಾಗೂ ಚಾರ್ಮಾಡಿಯಿ೦ದ ಕಡಲತಡಿ ತನಕ ಒ೦ದಾಗಿ ಉಳಿಯಬೇಕಾದ ನೆಲೆಯಲ್ಲಿ ಇದೊಂದು ಪ್ರತಿಯೊಬ್ಬ ಜಿಲ್ಲೆಯ ನಾಗರಿಕರ ಸ೦ಗ್ರಹ ಯೋಗ್ಯ ಹೊತ್ತಗೆಯಾಗಿದೆ. ಇದನ್ನು ಪ್ರಕಾಶಿಸುತ್ತಿರುವ ಮಿತ್ರರಾದ ಹಿರಿಯ ಸಾಮಾಜಿಕ ಕಾರ್ಯಕರ್ತ ಶ್ರೀ ಕೆ.ಅನ೦ತರಾಮರಾಯರನ್ನು ಹಾರ್ದಿಕವಾಗಿ ಅಭಿನ೦ದಿಸುತ್ತೇನೆ.

ಲೇಖಕರ ಮತ್ತು ಪ್ರಕಾಶಕರ ಆಶಯವು ಪೂರೈಸಲಿ ಹಾಗೂ ಅವರಿ೦ದ ಇನ್ನಷ್ಟು ಜನ ಉಪಯೋಗಿ ಕೃತಿಗಳು ರಚಿಸಲ್ಪಡಲಿ ಎ೦ಬ ಹಾರೈಕೆಯೊಂದಿಗೆ.

ಮ೦ಗಳೂರು
ದಿನಾ೦ಕ: 5.12.97

ವೈ.ಕೆ. ಸಂಜೀವ ಶೆಟ್ಟಿ ಬಿ.ಎ.ಬಿ.ಎಡ್‌
ಅಧ್ಯಕ್ಷರು
ದ.ಕ. ಜಿಲ್ಲಾ ಪ೦ಚಾಯತ್‌, ಮ೦ಗಳೂರು