ಪುಟ:KELAVU SANNA KATHEGALU.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

60

ನಿರಂಜನ: ಕೆಲವು ಸಣ್ಣ ಕಥೆಗಳು

ರಾಮನೆಂದ:

“ಹಾಫೀಸರ್‌ಗಳಲ್ಲಿ ಬಿರಾಮರು, ಲಿಂಗವಂತರು, ಒಕ್ಸಲಿಗರು, ಸಾಬರು, ಕೆರಸ್ತಾನರು-ಎಲ್ಲ ಜಾತಿಯವರೂ ಅವರೆ."

ಕಟ್ಟುನಿಟ್ಟಾಗಿ ನಾನೆಂದೆ:

“ಅವರ ಜತೆ ನೀನು ಸೇರ್‍ಕೊಬ್ಯಾಡ."

ದಿನ ಕಳೆದ ಹಾಗೆ ಜನರೆಲ್ಲ ಅವರ ಜತೆ ಸೇರಿದರು. ಕೆಲಸದ ಜಾಗಕ್ಕೆ ಅಂಟಿಕೊಂಡೇ ಊರು ಹುಟ್ಟಿತು. ಎಲ್ಲೆಲ್ಲಿಂದಲೋ ಜನರು ಬಂದರು. ಸಾವಿರ ಹತ್ತು ಸಾವಿರ-ಇಪ್ಪತ್ತು ಸಾವಿರ ಜನ. ಹೆಣ್ಣಾಳು, ಗಂಡಾಳು. ಹಟ್ಟಗಳನ್ನು ಕಟ್ಟಿದರು. ಜತೆಯಲ್ಲಿ "ಹೋಟಿಲು ಬಂತು... ದಿನಸಿನಂಗಡಿ, ಹೆಂಡದಂಗಡಿ...ಮಣ್ಣು ಅಗೆಯುವವರು, ಕಲ್ಲು ಕಡಿಯುವವರು....ಮನುಷ್ಯರು, ಯಂತ್ರಗಳು. ಕೆವಿ ಕಿವುಡಾಗುವ ಹಾಗೆ ಹಗಲೆಲ್ಲ ಸದ್ದು. ಮಣ್ಣು ತೋಡಿ ಕಲ್ಲಿರಿಸಿದರು. ಕಲ್ಲು, ಗಾರೆ; ಕಲ್ಲು ಗಾರೆ.

"ಮಳೆ ಬರಲಿ, ಆಗ ತಿಳೀತದೈೆ ಎಂದುಕೊಂಡೆ.

ಮಳೆ ಬಂತು. ಕಟ್ಟಿದ್ದು ಮಿಸುಕಲಿಲ್ಲ.

ನವರಾತ್ರಿಯ ರಜೆಯಲ್ಲಿ ಮನೆಗೆ ಬಂದ ಕೃಷ್ಣನೆಂದ:

“ಅಣೆಕಟ್ಟು ಕಟ್ಟಿದ್ಮೇಲೆ ಮಹಾಪೂರ ಬರೋದಿಲ್ಲ. ಕಾಲಿವೆ ಕಡಿದು ಊರೂರಿಗೆ ನೀರು ತಗೊಂಡು ಹೋಗ್ತಾರೆ. ಎಲ್ಲೆಲ್ಲೂ ಬೆಳೆ ಬೆಳೀತದೆ. ವಿದ್ಯುಚ್ಛಕ್ತಿ ಉತ್ಪಾದಿಸ್ತಾರೆ. ಮನೆಮನೆಗೆ ದೀಪ ಬರ್‍ತದೆ. ಕಾರ್ಖಾನೆಗಳು ಹುಟ್ಕೋತವೆ. ನದೀಲಿ ದೊಡ್ಡ ದೊಡ್ಡ ದೋಣಿಗಳು ಸಂಚಃರಮಾಡ್ತವೆ.?"

ರೇಗುತ್ತ ನಾನೆಂದೆ;

“ನಮ್ಮ ಅಳ್ಳಿ ಏನಾಗ್ತೇತೆ?”
“ಹಳ್ಳಿ ಮುಳುಗೋಗ್ತದೆ."
"ಅಂಗಂತೀಯಾ ನೀನೂ?”
"ಈ ಪುಸ್ತಕದಲ್ಲಿ ಬರೆದವರೆ."
“ಉಚ್ಮುಂಡೆ! ನಿನ್ನ ಪುಸ್ತಕನ ಸುಡ್ತು!"

ಹುಡುಗರು ಮೊದಲು ಕೆಟ್ಟರು. ವಯಸ್ಸಾದವರು ಆಮೇಲೆ. ಲೋಕ ತಲೆಕೆಳಗಾಗಿ ಹಾಳಾಗುತ್ತಿದ್ದುದನ್ನು ನೋಡಲು ನಾನೊಬ್ಬನೆ ಉಳಿದೆನೆಠಿಸಿತು.

ಭೂಮಿತಾಯಿ ಮುನಿಸಳು ಅರೆ ಹೊಟ್ಟಿ ನೆಡವಿದಳು.

...ವರ್ಷ ಒಂದಾಯಿತು. ಅನಂತರವೂ ಒಂದು. ನದಿಗೆ ಅಡ್ಡವಾಗಿ ಮರಳಿನ ಗೋಡೆ ಕಟ್ಟ, ಅದರ ಹಾದಿಯನ್ನೆ ಬದಲು ಮಾಡಿದರು. ಎರಡೂ