ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕವಿಯ ನಿರೂಪಣ ಕ್ರಮವನ್ನನುಸರಿಸಿ ಸಾಧ್ಯವಾದ ಮಟ್ಟಿಗೂ ಅವನ ಮಾತುಗಳನ್ನೇ ಬಳಸಿಕೊಂಡು ಈಗಿನ ರೂಪದಲ್ಲಿ ಈಗಿನವರಿಗೆ ಅರ್ಥ ವಾಗುವಂತೆ ಬರೆಯುವುದು ನನ್ನ ರೀತಿ. ಮುಖ್ಯವಾಗಿ ವಿದ್ಯಾರ್ಥಿಗಳಿಗೂ, ಜೀವನಕ್ಕಾಗಿ ಹಲವು ವೃತ್ತಿಗಳಲ್ಲಿ ತೊಡಗಿ ಸಾಹಿತ್ಯಾಭ್ಯಾಸಕ್ಕೆ ಹೆಚ್ಚು ಬಿಡುವಿಲ್ಲದಿರುವ ಸಾಮಾನ್ಯ ವಿದ್ಯಾನ ನರ್ತ ಈ ಪ್ರಯತ್ನದಿಂದ ಸಹಾಯವಾಗಬಹುದೆಂದು ನಂಬಿದ್ದೇನೆ.
ಸರಳತೆಗಾಗಿ ಇಲ್ಲಿ ಉದಾಹರಿಸಿರುವ ಪದ್ಯಗಳಲ್ಲಿ 'ಅ'ಕಾರ * ಆ ಕಾರಗಳನ್ನು ಉಪಯೋಗಿಸಿಲ್ಲ. ಅದಕ್ಕೆ ಬದಲಾಗಿ 1 ರ 'ಕಾರ - ಛ 'ಕಾರ ಗಳನ್ನೆ ಬಳಸಿದೆ.
ಈ ಕೆಲಸ ಮಾಡಬೇಕೆಂದು ನಾಲೈದು ವರ್ಷಗಳಿಂದಲೂ
ಆಲೋಚಿಸುತ್ತಿದ್ದೆನಾದ ಇಬ್ಬರು ಮಾನ್ಯ ಮಿತ್ರರ ಪ್ರೋತ್ಸಾಹದಿಂದ
ಈಗ ಇದು ಕಾರ್ಯರೂಪಕ್ಕೆ ಬಂತು. ಶ್ರೀ ಎಂ. ವಿ. ಸೀತಾರಾಮಯ್ಯ
ಎಂ.ಎ., ಆವರು ಒಳ್ಳೆಯ ಚಿತ್ರ ಬರೆದುಕೊಟ್ಟು ಪುಸ್ತಕದ ಅಂದವನ್ನು
ಹೆಚ್ಚಿಸಿದ್ದಾರೆ. ಇವರಿಗೆ ವಂದನೆಗಳು.
ಬೆಂಗಳೂರು
೨೪-೩-೧೯೪೫
ಎಲ್. ಗುಂಡಪ್ಪ