ಪುಟ:Katha sangraha or Canarese selections prose Part VI Proverbs.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಥಾ ಸಂಗ್ರಹ

555

ಮಾತು ಬಂದಾಗ, ಸೋತು ಹೋದವನೇ ಜಾಣ.
ಮಾನದಲ್ಲಿ ಆನೆ ಹಿಡಿದೀತೇ?
ಮಾನ ಹೋದ ಮೇಲೆ ಮರಣವಾದ ಹಾಗೆ.
ಮಾರಿಯ ಕಣ್ಣು ಹೋತನ ಮೇಲೆ.
ಮಾರಿಯ ಮನೆಗೆ ಹೋತ ಕನ್ನಾ ಕೊರೆದ ಹಾಗೆ.
ಮಾರ್‍ಯಮ್ಮ ಅರಿಯದ ಕೋಣೆಯೋ?
ಮೀನು ನೀರಿನಲ್ಲಿ ಮುಣಿಗಿದರೆ, ಸ್ನಾನದ ಫಲ ಬಂದೀತೇ?
ಮುತ್ತಿನ ಚಲುವು ಕತ್ತಿಗೆ ತಿಳಿದೀತೇ?
ಮುತ್ತು ಕೆಟ್ಟರೆ ಭತ್ತಕ್ಕಿಂತ ಕಡೆಯೇ?
ಮೂಕನಿದುರಿಗೆ ಮೂಗು ತುರಿಸಿ ಕೊಂಡ ಹಾಗೆ.
ಮೂಗಿಗಿಂತ ಮೂಗುತಿ ಭಾರ.
ಮೂಗು ಕೊಯಿದು ಮೊಗ್ಗಿನ ತುರಾಯಿ ಕೊಟ್ಟ ಹಾಗೆ.
ಮೂರ್ಖಗೆ ಹೇಳಿದ ಬುದ್ಧಿ ಗೋರ್ಕಲ್ಲಿನ ಮೇಲೆ ಮಳೆ ಹೊಯಿದ ಹಾಗೆ.
ಮೂರ್ತಿ ಸಣ್ಣದಾದರೂ ಕೀರ್ತಿ ದೊಡ್ಡದು.
ಮೂವರ ಕಿವಿಗೆ ಮುಟ್ಟಿದ್ದು ಮೂರು ಲೋಕಕ್ಕೆ ಮುಟ್ಟುವದು.
ಮೂರೆತ್ತಿನ ಬಂಡಿ ಹೊಲಕ್ಕೂ ಹೋಗದು, ಮನೆಗೂ ಬಾರದು.
ಮೆಚ್ಚಿದವನಿಗೆ ಮಸಣವೇ ಸುಖ.
ಮೆಟ್ಟಿದಲ್ಲದೆ ಹಾವು ಕಡಿಯದು.
ಮೆಟ್ಟಿದಾಕ್ಷಣ ಘಟ್ಟ ತಗ್ಗೀತೇ?
ಮೈಯಲ್ಲಿ ಹುಟ್ಟಿದ ರೋಗಕ್ಕಿಂತ ಕಾಡಲ್ಲಿ ಹುಟ್ಟಿದ ಔಷಧ ಮೇಲು.
ಮೊಗೇ ಮಾಡದ ಕುಂಬಾರ ಗುಡಾಣಾ ಮಾಡ್ಯಾನೇ?
ಮೊಳಕೈ ಆಡಿದರೆ ಮುಂಗೈ ಆಡುತ್ತದೆ.
ಯಾತ ತಲೇ ತೂಗಿದರೆ, ಪಾತಾಳದ ನೀರು ಹರಿಯುತ್ತದೆ. ತಾತ
ತಲೇ ತೂಗಿದರೆ, ಪಾಗು ಬೀಳುತ್ತದೆ.
ಯಾರೂ ಇಲ್ಲದ ಊರಿಗೆ ಅಗಸರ ಮಾಳಿಯೇ ಮುತ್ತೈದೆ.
ಯಾರೂ ಇಲ್ಲದ ಊರಿಗೆ ಹೋಗಿ ನೀರ ಮಜ್ಜಿಗೇ ಬಯಸಿದ ಹಾಗೆ
ಯಾವ ರಾಯನಿಗೆ ರಾಜ್ಯವಾದರೂ ರಾಗಿ ಬೀಸೋದು ತಪ್ಪದು.
ಯೋಗಿಯಾದರೂ ಭೋಗಾ ಬಿಡ.
ಯೋಗ್ಯತೆ ಅರಿಯದ ಧೊರೆಯೂ ರೋಗವರಿಯದ ವೈದ್ಯನೂ ಒಂದೇ.