ಪುಟ:Katha sangraha or Canarese selections prose Part VI Proverbs.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

556

CANARESE SELECTIONS.


ರಂಗನ ಮುಂದೆ ಶಿಂಗನೇ?
ರಾಗ ನುಡಿಸುವಾಗ ತಂತಿ ಹರಿಯಿತು.
ರಾಮೇಶ್ವರಕ್ಕೆ ಹೋದರೂ ಶನೀಶ್ವರ ಬಿಡ.
ರಾಯರ ಪಾದದಾಣೆ ಹಾರೇ ನುಂಗು.
ರಾವಣನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯೇ?
ಲಂಗು ಹರಿದ ಮೇಲೆ ಜಂಗಮನ ಹಂಗೇನು?
ಲೆತ್ತಾ ಹಾಕಲಿಕ್ಕೆ ಹೋದರೆ, ಬೋಕಿ ಬಿತ್ತು.
ಲೋಕದವರೆಲ್ಲಾ ಸತ್ತರೆ ಶೋಕಾ ಮಾಡುವವರ್ಯಾರು?
ವಂಚಕನಿಗೆ ಸಂಚು ಕೊಟ್ಟ ಹಾಗೆ.
ವನವಾಸಕ್ಕೆ ಹೋದರೂ ಘನ ಕಷ್ಟ ಬಿಡಲಿಲ್ಲ.
ವಾಶಿ ಆಗದ ರೋಗಕ್ಕೆ ರಾಶಿ ಮದ್ದು ಮಾಡಿದರೂ ವ್ಯರ್ಥ.
ವಿತ್ತಕ್ಕೆ ತಕ್ಕ ವಿಭವ.
ವೀರನ ಶೌರ್ಯ ಹಾರುವನ ಮೇಲೆಯೇ?
ವೈರವಿದ್ದವನಿಂದ ಕ್ಷೌರಾ ಮಾಡಿಸಿ ಕೊಂಡ ಹಾಗೆ.
ವೈರಾಗ್ಯವುಳ್ಳವನಾದರೂ ವೈರತ್ವ ಬಿಡಲಿಲ್ಲ.
ಶಕುನದ ಹಕ್ಕಿಯ ಗೋಣು ಮುರಿದ ಹಾಗೆ.
ಶಕ್ತಿ ಇದ್ದವನಾದರೂ ಯುಕ್ತಿ ಇದ್ದವನ ಕೆಳಗೆ.
ಶಾಂತಿ ಮಾಡಿದರೂ ಭ್ರಾಂತಿ ಹೋಗಲಿಲ್ಲ.
ಶ್ಯಾನಭೋಗನ ಸಂಬಳ ಸಂತೋ? ಎಂದು ಕೇಳ ಬೇಡ, ಹೆಂಡತೀ
ದೆಸೆಯವರು ಉಂಡರೋ? ಎಂದು ಕೇಳ ಬೇಡ.
ಶಾಪ ಕೊಡುವವ ಪಾಪಕ್ಕೆ ಹೆದರ.
ಶಿಟ್ಟಿಗೆ ಕೊಯಿದ ಮೂಗು ಶಾಂತತ್ವದಿಂದ ಹತ್ತೀತೇ?
ಶಿವಾ ಅಂದರೆ ಶೆರಗು ಸುತ್ತಿ ಕೊಂಡ. ಭವಾ ಅಂದರೆ ಭೈರವಾಸು ಹರಿದು ಬಿಟ್ಟು.
ಶೀತರೆ ಬೀಳುವ ಮೂಗು ಕೊಯಿದರೆ ನಿಂತೀತೇ?
ಶೀಸದ ಉಳಿಯಲ್ಲಿ ಶೈಲಾ ಒಡೆಯ ಬಹುದೇ?
ಶೆಕೆ ಹೆಚ್ಚಾಯಿತೆಂದು ಕಂಬಳಿ ಹೊದ್ದು ಕೊಂಡ.
ಶೆಟ್ಟ ಬಿಟ್ಟಲ್ಲೇ ಪಟ್ಟಣ.
ಶೆಟ್ಟಿಯ ಬಾಳು ಸತ್ತಲ್ಲದೆ ತಿಳಿಯದು.
ಶೆಟ್ಟ ಶೃಂಗಾರವಾಗುವಾಗ್ಯೆ ಪಟ್ಟಣವೆಲ್ಲಾ ಸೂರೆ ಹೋಯಿತು.