ಪುಟ:Keladinrupa Vijayam.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

72 ಕೆಳದಿನೃಪವಿಜಯಂ ಕಡೆಗಾಲದಗ್ರದೊಳ್ಳಿಗೆ ಕಡಲ೪ವ್ರದೊಳೆ ಮೇರೆವರಿವಂತಿರೆ ಸೆ | ರ್ವಡೆವೆರಸೈದುನಿಬ ಜrಡೆಯದ ಕೌಂಟೆಯ ಸಮೀಪಮಂ ಸಾರುತ್ಯುಂ | ಮುತ್ತಿಗೆಯನಿಕ್ಕೆ ಕೇಳ್ಳು ಸು ವೃತ್ತಂ ವೆಂಕಟಪಾಲನರಿಕುಲಕಾಲಂ | ಪತ್ರಿಚಯವೆರಸು ತದ್ದು ರ್ವೃತರ ಸೇನಾಸಮೂಹಕಂದಿದಿರಾಂತಂ || ೧೦ ಇಂತಾ ವೆಂಕಟಪ್ಪನಾಯಕಂ ಜಡೆಯದ ಕೊಂಬೆಯಂ ವೇಷ್ಟೆ ನಿದ ತುರರ ಸೈನ್ಯಕ್ಕಿದಿರ್ಚಿ ನಿಂದು ಕೈಗೆಯಾ ಸಮರಾಂಗಣದಾಳಂ ಬರಖಾನನಂ ಕುಂಬಿಡಿಸಿ, ಅಂಕುಶಖಾನನ ಬಿಂಕವಂ ಮುರಿದು, ಸಲಾ ಬತಖಾನನಂ ನಿಲವಿಕೆಗೆಡಿಸಿ, ಬಹಿಲಿಮಖಾನನಂ ಬಹಿರ್ಮುಖನೆನಿಸಿ, ಮಂಜಳ ಖಾನನಂ ರಂಜನೆಗೆಡಿಸಿ, ಶಾಲೆಯಖಾನನ ಲೂಟಿಯಂ ನಿಲಿಸಿ, ಮಹಮುದಖಾನನಹಮಿಕೆಯಂ ತೀರ್ಚೆ, ಅಂಮದಖಾನನ ಹೆಮ್ಮೆ ಯಂ ಮುರಿದು, ಸಂಜರಖಾನನಂ ಭಂಜನೆಗೈದು, ಸರ್ಜಾಖಾನನ ಗರ್ಜ ನೆಯಂ ನಿಲಿಸಿ, ಹೈದರಮಲ್ಲಿನಾಯಕನಂ ಕೈದುವನಿಕ್ಕಿಸಿ, ಬರಿಗಿಯ ದೇವೀನಾಯಕನಂಪರಾಭವಂಗೈದು, ಇಂತುರುಬಿ ತರುಬಿದ ತುರುಪ್ಪ, ಸೈನಸಾಗರಮಂಕಲಂಕಲವರ್ನಿಂದು ನಿತ್ತರಿಸಲದೆ ಮುರಿದು ಮುತ್ತಿ ಗೆದೆಗೆದನಂತರಂ || ೧೧ ಮತ್ತಂ ಹನುಮನರೇಂದ್ರನ ಪತ್ತಿಚಯಂವೆರಸು ತುಡುರ್ಗುಣೆಯ ಕೊಂಟಿಯುಮಂ | ಮುತ್ತಿದ ಯವನರ ಸೈನ್ಯದ ಮೊತ್ತವನಂಕದಳ ಸದೆದು ಮುರಿದೋಡಿಸಿದಂ ||