ಪುಟ:Keladinrupa Vijayam.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

78 ೪೧ ಕೆಳದಿನೃಪವಿಜಯಂ ಮೆರೆದಾಭೈರಾದೇವಿಯು ಗರುವಿಕೆಯಂ ಮುರಿದು ಧುರದೆ ಕೈಸೆರೆವಿಡಿದಂ || ಇಂತು ದಳವಾಯಿಲಿಂಗಣನಾಯಕನಂ ಕಳುಹಿ ಕೈಸೆರೆವಿಡಿ ದಾವಿನಹಳ್ಳಿ ಕರುವೂರು ಮೊರಬಡಿ ಸಾಳನಾಡು ಬಟ್ಟಕಳ ಗೆರಸಪ್ಪೆ ಚಂದಾವರ ಗೋವರ್ಧನಗಿರಿ ವಡ್ಡಿ ಮೇದಿನಿ ಮುಂತಾದಾಕೆಯಾಳ ರಾಜಪರಿಸ್ತರಣಮಂ ವಶಮಾಡಿಕೊಂಡು ತದೀಯವಿಚಿತ್ರತರವಸ್ತುವಾ ಹನಾಂಬರಾರ್ಥಾದಿಸರ್ವಸಮಂ ಸ್ವಾಧೀನಂಗೈದನಂತುವಲ್ಲದೆಯುಂ ! ಹೊನ್ನೆ ಯಾಕಂಬಳಿವೆಸರಿನ ಮನ್ನೆ ಯನಾರ್ನಾಡುಮುಂಗಿನಾಡೆಡವೂರಾ | ಚಿನ್ನ ಬಿದರೂರ್ಪೊಸಂಗಡಿ ಗನ್ನಾ ಯಕನೆನೆಸಿ ನೆರೆ ವಿರಾಜಿಸುತಿದro || ಇಂತು ನೆಗಳ್ವೆ, ಹೊನ್ನೆ ಯಕಂಬಳಿಯೆಂಬ ಮನ್ನೆಯಂ ಹೊಸಂಗಡಿಯೆಂಬರೊಳಿರ್ದು ಶಂಕರನಾರಾಯಣಭಟ್ಟನೆಂಬವನಂ ಮಂತ್ರಿಯಂ ಮಾಡಿಕೊಂಡವನ ಮುಖದಿಂ ತನ್ನ ರಾಜೂಭಾರವಿಚಾ ರಲ ಮುಂತಾದೆಲ್ಲ ಕಾರ್ಯ೦ಗಳ೦ ನಡೆಸಿಕೊಳುತ್ತುಮಿರಲೆ, ದಿನದಿನದೊ ೪ಾಶಂಕರನಾರಾಯಣಭಟ್ಟಂ ಕ್ರಮದಿಂ ಪ್ರಖ್ಯಾತನಾಗಿ ಹೊನ್ನೆ ಯಕಂ ಬಳಿಯಂ ಬಗೆಗೊಳದೆ ತಾಂ ಬಿದುರರೊಳ್ಳಲೆಯಾಗಿ ನಿಂದೆಡವಲ ಆರ್ದರುನಾಡು ಕಬ್ಬುನಾಡು ಮುಂಗಿನಾಡು ಮುಂತಾದ ಸೀಮೆಗ್ರಾಮ ಗಲ್ಲಂ ತಾನೆ ಸ್ವತಂತ್ರ ಕರ್ತೃವಾಗಿ ವರ್ತಿಸುತ್ತುಮಿರಲಾಕಾಲದೊಳೆ ವೆಂಕಟಪ್ಪನಾಯಕಂ ದಳವಾಯಿಲಿಂಗಣ ನಾಯಕಂವೆರಸು ಸೈನ್ಯ ಸಮೇತಂ ತೆರಳಾ ದಾಳಿವರಿಯುತ್ತೆದಿ ಬಿದುರೂರ ಪ್ರಾಂತದೊಳಿಳಿದು ಪುಯತ್ನದಿಂದೊಳಸಾರ್ದು ಬಿದುರೂರ ಪರಿಸ್ಕರಣಮಂ ವೇತ್ತೈಸಿ ಜಕೀರಿರಸ್ತುಮು ದೆಗಳ ಪೊಗದಂತು ಕಂಡಿಕಣಿವೆಪಥಂಗಳಂ ಕಟ್ಟಿ ಜೇರುಮುತ್ತಿಗೆಯಂ ರಚಿಸಲಾ ಶಂಕರನಾರಾಯಣಭಟ್ಟಂ ಹೇರಳ ಮುಂದಿನಕ್ಕಳಂ ನೆರಹಿ ಮಾರ್ಮಲೆತು ಕೊಂಟೆಯಂ ಕಲಿಯೇರಿಸಿ