ಪುಟ:Keladinrupa Vijayam.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

128 ಕೆಳದಿನೃಪವಿಜಯಂ ತತ್ತೋಮಶೇಖರನಾಯಕರ ಪಟ್ಟದರಸಿ ಚನ್ನ ಮ್ಯಾಜೆ ತನ್ನ ಪತಿಗೆ ವಿಘಾತಿಯಂ ನೆನೆದ ಕುಹಕಿಜನರ್ಕಳನೀಪರಿಯಿಂ ಶಿಕ್ಷೆಗೈಸಿ ವರ್ತಿಸುತ್ತು ಮಿರಲ್ಲದನಂತರಂ ರಾಜ್ಯಾಧಿಕಾರವನಪೇಕ್ಷಿಸಿ ಕುಹಕಿಗಳ ದುರ್ಬೋಧೆಗೊಳಗಾದ ಮೈದುನ ಬಸವಲಿಂಗನಾಯಕನಂ ಸ್ಥಳಾಂತ ರಕ್ಕೆ ಕಳುಸಿ ಅಂಗವಿಕಲನಂ ಮಾಡಿಸಿ ರಾಜ್ಯಂಗೆಯ್ಯುತ್ತು ಮಿರಲಿ, ಮತ್ತಂ ಕೃಚಿತ್ಕಾಲದೊಳೆ ಮರೆಬೋವ ಕಂದಾಚಾರದ ಲಕಯ್ಯ, ವೀರಭದ್ರಯ್ಯ ಮುಂತಾದ ಕೆಲಂಬರ್ಕೋಡಿ ಚನ್ನಮ್ಮಾಜಿಯಂ ಮಾಣ್ಣು ರಾಜತ್ರಕ್ಕೆ ಬೇರೊರ್ವರನಧಿಕಾರಿಯಂ ಮಾಡಿ ನಡೆಸಬೇಕೆಂದು ದುರಾ ಲೋಚನೆಯಂ ರಚಿಸಿ ಸಾಕು ಹೊಸಂಗಡಿ ಪರಿಷ್ಕರಣದೊಳಂಕೆಯೊಳಿ ರುತಿರ್ದ ಅಂಧಕವೆಂಕಟಯ್ಯಂಗೆ ಸರಿಚರಮಂ ರಚಿಸುತಿರ್ದ ಹೊರ ಹೆಣಿ ನೊರ್ವ ಪುತ್ರನುದಿಸಿರಲಾತನಂ ಬರಿಸಿ, ಆ ಅಂಧಕವೆಂಕಟ ಯ್ಯನೆಂಬಾತಂಗುದ್ಭವಿಸಿದ ಕುಮಾರಂ ಹಿರಿಯವೆಂಕಟಪ್ಪನಾಯಕ ಮಗಳು ಹಿರಿಯಮ್ಮನ ಮಗ ಸದಾಶಿವಯ್ಯ೦ಗೆ ಮೊಮ್ಮಗನಾದುದರಿಂದ ಮಾಅಂಧಕವೆಂಕಟಯ್ಯನ ಮಗಂಗೆ ಶಿವಪ್ಪನಾಯಕನೆಂದು ನಾಮಾಂ ಕಿತಮಂ ಮಾಡಿ ಆತನ ತಂದೆ ಅಂಧಕವೆಂಕಟಯ್ಯನೆಂಬಾತನುಮಂ ಸಮೀಪದೊಳಿಟ್ಟುಕೊಂಡು ಅವರ ಮುಖದಲ್ಲಿಯೆ ಸೆಂಸ್ಥಾನದ ಆರಭಾ ರಮಂ ನಡೆಸುತ್ತು ಮಿರಲಾ ಕಾಲದೊಳೆ || ೪೧ ಆ ಸೋಮಶೇಖರೋರ್ವೀ ವಾಸವ ! ನಂತರದೆ ಸಾರ್ಧವಾಸ ತ್ರಯಮಾ | ಭಾಸಂ ಶಿವನ್ನಪನೆಂದೆನಿ ಪಾ ಸಮುಚಿತರಹಿತನಾತನರಸೆನಿಸಿರ್ದಂ ಇಂತು ಕುತ್ತಿತ ಶಿವಪ್ಪನಾಯಕನೆಂಬಾತನಂ ಕರ್ತವಂ ಮಾಡಿ ಕೊಂಡು ವರ್ತಿಸುತ್ತುಮಿರುತಿರಲಿ, ಬರವೆಮಾವುತ ಮುಂತಾದ ಕುಹಕಿ ಗಳಿ ರಚಿಸಿದ ಫಿರಿಯಾದಿನಿಂ ನಿತ್ತರಿಸುಮ್ಮದೆ ಸ್ಥಳದಿಂ ಮುನ್ನ ಮೆ 1 ನಂತರ; [[l 1, IX 1 ಪದ್ಯಗಳನ್ನು ನೋಡಿ