ಪುಟ:Keladinrupa Vijayam.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

118 ಕಳದಿನೃಪಜಯ', ಕೈಯಾಡಂಗಿಸಿಕೊಂಡಿರ್ಪ ಕಿರಿಚರಿಯಾಳವನಂಗುಲಿಚ್ಚೇದನಮಂ ಮಾಳ್ಳುದೆಂದು ಬೋಧಿಸಿ ಬಳಿಕ್ಕವರವರ್ಗೆ ಭೇಟಿಯಂ ಮಾಡಿಸಿ ತಾಂ ಮನಸ್ಸಂಕಲ್ಪಂಗೈದಂತು ಭೇಟಿಯ ಮುಖದೊಳವನಂಗುಲಿಚ್ಛೇದನವುಂ ಮಾಡಿಸಿ ಅವನ ಸಮೀಪಸ್ಥರಾದ ವಜೀರ ಉಮರಾವು ಕಾರಕನರಂ ಸ್ವಾಧೀನಕೆಳದು ಅಲ್ಲಿಯೆದುಲಶಾಹಂಗೆ ಪಟ್ಟಮಂ ಕಟ್ಟಿಸಿದಂ, ಮುರಾ ರಿಜಗದೇವಪಂತಂ ಬಡೆಸಾಹೇಬತಿಯಾಡನೆ ನಿಷ್ಣು ರೋಕ್ತಿಯಂ ನುಡಿದು ತನ್ಮೂಲವದಾಜ್ಞೆಗೊಳಗಾಗಿ ಮೃತಿವೆತ್ತಂ, ಆಮೇಲೆ ಜಾನಂತ ರಾಯಂ ಸಿತುಮೆಯಮೇಲೆ ಖವಾಸವಾನನಂ ಕೊಲಿಸಿ ತಾನೇ ಮುಖ್ಯ ನಾಗಿ ಸಾಕುಶಾಹಿಯ ಬದುಕುಗಳಂ ನಡೆಸಿದಂ, ಆಮೇಲೆ ಈ ಅಲ್ಲಿ ಯೇದುಲಶಾಹನ ಮಗ ಸುಲುತಾನಶೀಲೀಂದ್ರಂಗೆ ಪಟ್ಟಿ ಮಾಯ್ತು. ಈ ಸುಲುತಾನಶೀಲೀಂದ್ರನ ಕಾಲದಲ್ಲಿ ಕಿರಿಯ ಖವಾಸಖಾನನ ಪ್ರಾಬ; ಈ ವಿಜಾಪುರದ ಪಾತುಶಾಹಂಗೆ ಹಸುರು ನಿಶಾನಿ ಬಿರುದು; ಇದು ಬಿಜಾಪುರವನಾಳ್ ಮಾತುಶಾಹರ ವಿವರಣಂ || ಇನ್ನು ಮೇಲುಕೋಂಡೆಯಮೆಂಬ ಭಾಗ್ಯನಗರಿಯು (ಪ್ರತಿನಾ ಮಭಾಗಾನಗರವ) ನಾಳ್ ಪಾತುಶಾಹರ ವಿವರಣಮಂ ಪೇಳ್ವನದೆಂತೆಂ ದೊಡೆ:-ಆದಿಯಲ್ಲಿ ಚಾಂದೀನಮಲ್ಲಿಕನ ಮಕ್ಕಳ ಖೋದಾಖಂಡ ಮಲ್ಲಿ ಕವಿಭಾಮ; ಈತಂ ಕಾಮಿಸಿದ ಬ್ರಾಹ್ಮಣಸ್ತಿ )ಯು ಸೆಸರಿ ಭಾಗೀರಟ; ಆಕೆ ತನ್ನ ಹೆಸರಿನಲ್ಲಿ ನಗರಮಂ ಪಿಸ್ತಾರಂಗೈಸಲದೆ ಭಾಗಾನಗರ ಎಂದು ಹೆಸರಾಯ್ತು. ಮಲ್ಲಿಕವಿಭಾವನ ಮಗಂ ಮುದಖುಲ್ಲಿ; ಮತ್ತವನ ಮಗ ಮಹಮುದ್ದ ಖುಲ್ಲಿ; ಅವನ ಮಗಂ ಸುಲ್ತಾನಅಟ್ಟಿ; ಆತನ ಅಳಿಯಂ ಸುಲ್ತಾನ ಅಬ್ದುಲ್ ಹಸನ ಪಾತುಶಾಹಂ ; ಅವನ ಮಗ ಲತೆ ; ಅವನ ಮಗಂ ಸಿರಿಯ ಕುತುಬಶಾಹಂ ; ಅವನ ಮಗ ಮರಿ ಕುತುಬಶಾಹಂ ; ಅವನ ತರುವಾಯ ಖೋದಾಖಂಡನ ಮಗಳ ಮಗು ತಾನಾಶಾಹಂ; ಈ ಭಾಗಾನಗರದ ಪಾತುಶಾರ್ಹ ಹಳದಿಯ ನಿಶಾ ನಿಯು ಬಿರುದು, ದೇವಗಿರಿಯ (ಪ್ರತಿನಾಮ ನವತಾವಾದಿನ )ಸಂಸ್ಥಾನಕ್ಕೆ ಸಲ ಮದಾನಗರವೆಂಬ ಸಂಸಾವನಾ ಘಾತುಶಾಹರ ವಿವರಣಮಂ ಪೇಳ್ವೆ.