ಪುಟ:Keladinrupa Vijayam.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

220 ಕೆಳದಿನೃಪವಿಜಯಂ ಗಳು ಬಳಕ್ಕಂ ಶಾರದಾದೇವಿಯಂ ಕರ್ಣಾಟದೇಶದೆಡೆಯೊಳೊಪ್ಪುವ ತುಂಗಭದ್ರಾನದೀತೀರದೊಳಸೆವ ವಿಭಾಂಡಕರ್ಸಿಶ್ವರನ ಪುತ್ರನಾದ ಋಷ್ಯಶೃಂಗಮುನಿಯಾಶ್ರಮಮಧ್ಯದೊಳೆ ತಾವು ನಿರ್ಮಾಣಂಗೆಯ್ದಿದ ಶೃಂಗಪುರದ ಮಠಕ್ಕೆ ಬಿಜಯಂಗೆಯ್ಲಿ ತಂದು ಶಾರದಾಪೀಠದೊಳೆ ಸ್ಥಿರ ವಾಗಿ ನೆಲೆಗೊಳಿಸಿ ನಿಲಿಸಿ, ಶಾರದಾಪೀಠದಿಂ ಯುಕ್ತವಾದ ಧರ್ಮ ಸಂಸ್ಥಾನವೆಂದು ಸಮಸ್ತ ದಿಗ್ಗೆ ಶದೊಳೆ ಪ್ರಖ್ಯಾತಿಗೆ ತಂದು, ಸಾಂಖ್ಯ ತಯಪ್ರತಿಪಾದಕ, ವಿಶುದ್ದಾದೈತಸಿದ್ಧಾಂತಮತಸ್ಥಾಪಕ, ಪದವಾಕ್ ಏಾರಾವಾರಪಾರೀಣ, ಅಷ್ಟಾಂಗಯೋಗಾನುಸಂಧಾನನಿರತ, ಪ್ರತಾ ಪನಾಚಾರ, ಜಗದ್ದುರು, ಪರಮಹಂಸಪರಿವ್ರಾಜಕಾಚಾರ್ ಶಂಕರಾಚಾ ರರೆಂಬಿವು ಮೊದಲಾದ ಬಿರುವಂ ಪಡೆದು ಪರಮಪ್ರಸಿದ್ದಿ ಎತ್ತು ಮತ್ತೆ ಮಾಕ್ಸಿಂಗಪುರದೊಳೆ ತಮ್ಮ ಶಿಷ್ಯರಾದ ಸುರೇಶ್ವರಾಚಾರೈರಂ ನೆಲೆ ಗೊಳಿಸಿ ತಾವು ಸ್ವತಂತ್ರ ಸಂಚಾರವಿನೋದಶೀಲರಾಗಿರುತಿಂತು ವರ್ತಿಸು ತುಂ, ಕೆಲವು ವತ್ರಮಿರ್ದು ಮುಕ್ತಿಗೆ ಸಂದರಿ. ಇನ್ನಾ ಸುರೇಶ್ವರಾಚರ್ಯಕರಕಮಲಸಂಜಾತರಾರೆಂದೊಡೆ, ಅವರ ನಾಮಂಗಳೆ:- ನಿತ್ಯಬೋಧಘನಾಚಾರ್ಯರೆ, ಅವರ ತರುವಾಯ 'ನೃಸಿಂಹಾಚಾರ್ಯರೆ, ಆ ತರುವಾಯ ಜಾನೋತ್ಸವಶಿವಾಚಾರ್ಯರೆ, ಆ ತರುವಾಯ ಜ್ಞಾನಗಿರ್ಯಾಚಾರಣೆ, ಆ ತರುವಾಯ ನೃಸಿಂಹಗಿ ರ್ಯಾಚಾರ್ರ, ಆ ತರುವಾಯ ಈಶ್ವರತೀರ್ಥಾಚಾರರೆ, ಆ ತರುವಾಯ ನೃಸಿಂಹಾಚಾರೈರೆ, ಆ ತರುವಾಯ ವಿದ್ಯಾತೀರ್ಥಾಚಾರ್ಯರೆ, 2 ಆ ತರು ವಾಯ ಭಾರತೀತೀರ್ಥಕ್ಷಪಾ ಚಾರ್ಯರೆ, ಆ ತರುವಾಯ ವಿದ್ಯಾರಣ್ಯ ಯೋಗೀಂದ್ರರೆ. ಮತ್ತಮಾ ವಿದ್ಯಾರಣ್ಯರೆಂಬವರ ಪಂಪಾಕ್ಷೇತ್ರದೊಳಿರ್ದ ಶ್ರೀಚ ಕೊಪಾಸನೆಯಿಂ ದೇವಿಯಂ ಮೆಚ್ಚಿಸಿ ಬಳಿಕ ಶೃಂಗೇರಿಯ ಮಠ 1 ಜ್ಞಾನಪುನಚಾರ್ (ಕ) 2 ಭಾರತೀಕೃಪಾಚಾರ್ಯರ


-- -