ಪುಟ:Mahakhshatriya.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸ್ತ್ರೀಯರಿಗೆ ಪುರುಷ ಸಂಯೋಗದಿಂದ ಲಭಿಸುವ ಸುಖವು ಸಕೃನ್ಮಾತ್ರವಾಗುವುದು ಎಂಬ ಶೋಕವಿದೆ. ದೇವರಾಜನು ಈ ಶೋಕಗಳು ನೀಗುವಂತೆ ವರವನ್ನು ಕೊಡುವುದಾದರೆ ಅವರು ಒಂದೊಂದು ಪಾಲು ಹತ್ಯೆಯನ್ನು ಸ್ವೀಕರಿಸುವರು” ಎಂದನು. ಇಂದ್ರನು ‘ತಥಾಸ್ತು’ ಎಂದು ಒಪ್ಪಿದನು. ಸೋಮನು ವೃಕ್ಷಾಧಿಪತಿಯಾದ ವನದೇವಿಯನ್ನೂ ಸ್ತ್ರೀಕುಲಾಭಿಮಾನಿ ದೇವತೆಯಾದ ಅದಿತಿಯನ್ನೂ ಕರೆದನು.

ಶಚಿಯೂ ಇಂದ್ರನೂ ಅವರಿಬ್ಬರನ್ನು ಗೌರವದಿಂದ ಸ್ವಾಗತಿಸಿ ಅವರನ್ನು ಕರೆಸಿದ ಉದ್ದೇಶವನ್ನು ಹೇಳಿದರು. ಅವರಿಬ್ಬರೂ ಆ ಶೋಕವನ್ನು ನೀಗುವುದಾದರೆ ತಾವು ತಮ್ಮವರ ಪರವಾಗಿ ಹತ್ಯೆಯನ್ನು ಸ್ವೀಕರಿಸುವುದಾಗಿ ಹೇಳಿದರು. ಇಂದ್ರನು ತ್ರಿಲೋಕಾಧಿಪತಿಯಾಗಿ ವನದೇವಿಗೆ ವರವನ್ನು ಕೊಟ್ಟನು. ಕಡಿದಂತೆಲ್ಲಾ ಮರಗಳು ಗಿಡಗಳು, ಔಷಧಿ, ಮೂಲಿಕೆಗಳು, ವನಸ್ಪತಿಗಳೂ, ಅಷ್ಟೇನು ಸಸ್ಯವರ್ಗವೆಲ್ಲಾ ಕಡಿದಂತೆಲ್ಲಾ ಚಿಗುರುತ್ತಿರಲಿ ಎಂದು ವರವನ್ನು ಕೊಟ್ಟು “ಆಯಿತು, ಈ ವರ್ಗವು ತಮ್ಮಲ್ಲಿರುವ ಬ್ರಹ್ಮಹತ್ಯೆಯನ್ನೆಂತು ತೋರಿಸುವುವು ?’ ಎಂದು ಕೇಳಿದನು. ವನದೇವಿಯು ಯೋಚಿಸಿ ಹೇಳಿದಳು : “ಕಡಿದಾಗ ಸಸ್ಯಗಳಿಂದ ಬರುವ ನಿರ್ಯಾಸವು ಆ ಪಾಪದ ಸಂಕೇತವಾಗಿರಲಿ” ಎಂದಳು. ಇಂದ್ರನು ಒಪ್ಪಿದನು.

ಸ್ತ್ರೀಕುಲಾಭಿಮಾನಿಯಾದ ಅದಿತಿಗೆ ನಮಸ್ಕಾರ ಮಡಿ, ಇಂದ್ರನು ತನ್ನ ತ್ರೈಲೋಕ್ಯಾಧಿಪತ್ಯದ ಬಲದಿಂದ ಆಕೆಗೆ ವರವನ್ನು ಕೊಟ್ಟನು. “ಇನ್ನು ಮುಂದೆ ಅತಿರ್ಯಗ್ಯೋನಿಗಳಾದ ಸ್ತ್ರೀವರ್ಗವೆಲ್ಲವೂ ಪ್ರಸವವಾಗುವವರೆಗೂ ಪುರುಷ ಸುಖವನ್ನು ಪಡೆಯಬಲ್ಲವರಾಗಲಿ” ಎಂದನು. ಅದಿತಿಯು ಅದನ್ನು ಸ್ವೀಕರಿಸಿ, “ಸ್ತ್ರೀಯರು ರಜಸ್ವಲೆಯರಾಗುವ ಮೂರು ದಿನ ಅವರಲ್ಲಿ ಕಾಣುವ ರಜಸ್ಸು ಅವರು ಸ್ವೀಕರಿಸಿದ ಹತ್ಯೆಯ ಫಲವಾಗಿರಲಿ” ಎಂದಳು. ಇಂದ್ರನು ಅಂಗೀಕರಿಸಿದನು.

ಪ್ರಾಣನು ಇಂದ್ರನ ಇಂಗಿತದಂತೆ ಆಪೆÇೕದೇವಿಯರನ್ನೂ ಭೂದೇವಿಯನ್ನೂ ಕರೆಸಿದನು. ಆಪೋದೇವಿಯರು “ನಮಗೆ ಬೇಕಾದ ವರವಿದು, ಚರಾಚರ ವಸ್ತುಗಳೆಲ್ಲವೂ ನಮ್ಮನ್ನು ಸೇವಿಸಿ ಬೆಳೆಯಬೇಕು. ನಾನಿಲ್ಲದಿದ್ದರೆ ಕ್ಷಯಿಸಬೇಕು. ಇದು ನಮ್ಮ ಕೋರಿಕೆ’ ಎಂದರು. “ನಮ್ಮಲ್ಲಿ ಮಹಾನದಿಗಳು ಅಲ್ಲದವು, ತಿಂಗಳಿಗೆ ಮೂರು ದಿನ ನೊರೆನೊರೆಯಾಗಿರುವವು. ಅದು ನಾವು ಅಂಗೀಕರಿಸುವ ಪಾಪದ ಗುರುತು” ಎಂದರು. ಇಂದ್ರನು ಒಪ್ಪಿ ಅವರಿಗೆ ವರವನ್ನೂ ಒಂದು ಪಾಲು ಬ್ರಹ್ಮಹತ್ಯೆಯನ್ನೂ ಕೊಟ್ಟನು.

ಭೂದೇವಿಯು, “ನನಗೊಂದು ಶೋಕವಿದೆ. ನನ್ನ ಜಡರೂಪದಲ್ಲಿ