ಪುಟ:Mrutyunjaya.pdf/೩೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೃತ್ಯುಂಜಯ ಸಾಧನ, ದಂತದ-ಹಾಲುಗಲ್ಲಿನ-ಕಂಚಿನ ಪಾತ್ರೆಗಳಲ್ಲಿ ವಿವಿಧ ಸುಗಂಧ ದ್ರವ್ಯಗಳು-ಅಲ್ಲಿದುವು. ಸ್ವರೂಪದರ್ಶಕದ ಇಕ್ಕೆಲೆಗಳಲ್ಲೂ ತಾಮ್ರದ ತೆರೆದ ಕಪಾಟಗಳಲ್ಲಿ ಝಗಝಗಿಸುತ್ತಿದ್ದುವು. ಕಿರೀಟಗಳು, ಕೊರಳಿನ, ತೋಳು ಮಣಿಕಟ್ಟುಗಳ ಎಣಿಕೆಗೆ ನಿಲುಕದ ಆಭರಣಗಳು

    “ನಿಧಾನಿಸ್ಬೇಡಿ....ನಾನು ಹೋಗ್ತಿರೋದು ದೇವದರ್ಶನಕ್ಕೆ, ಔತಣಕ್ಕల్ల."
  ದಾಸಿಯರು ಒರೆಸುವ-ಹಚ್ಚುವ, ಕಳಚುವ-ತೊಡಿಸುವ ತಮ್ಮ ಕೆಲಸ ವನ್ನು ತೀವ್ರಗೊಳಿಸಿದರು.
  ಅನುಜ್ಞೆಗಳಿಗಾಗಿ ಕಾದಿದ್ದ ಸೇವಕಿಯರನ್ನು ಉದ್ದೇಶಿಸಿ ನೆಫರ್ ಟೀಮ್ ಅಂದಳು :
  “ಹೊವಿನ ತಟ್ಟೆಗಳನ್ನು ಸಿದ್ಧಗೊಳಿಸಿ."
  ಮೇಲುದವನ್ನು ಬಲ ಸ್ತನದ ಕೆಳಗೆ ದಾಸಿ ಬಿಗಿಯುತ್ತಿದ್ದಂತೆ, ರಾಣಿ ಆದೇಶವಿತ್ತಳು:
  “ಹೊರಗಿರೋ ಚಿರತೆ ಚರ್ಮವನ್ನು ಸುರುಳಿ ಸುತ್ತಿ.”
  ಇದು ಯಾಕೆ ಎಂಬುದನ್ನು ಒಬ್ಬಿಬ್ಬರು ಊಹಿಸಿದರು.

ನೆಫರ್ ಟೀಮ್ ಳ ಸರಳ ಅಲೊಕಾರ ಮುಗಿಯಿತು. ಕೊನೆಯದಾಗಿ ತನ್ನ ಪ್ರತಿಬಿಂಬವನ್ನು ಆಕೆ ನೋಡಿಕೊಂಡಳು. ತಲೆಯ ಹಿಂದೆ ದಾಸಿ ಹಿಡಿದ ಸ್ವರೂಪದರ್ಶಕದಲ್ಲಿ ಮೂಡಿಬಂದ ಹಿಂಭಾಗದ ಪ್ರತಿಫಲನವನ್ನೂ ಗಮ ನಿಸಿದಳು.

  ನದೀತಟದ ಬಳಿಗೆ ಓಡಿಹೋಗಿ ಮರಳಿದ ಬೆಂಟ್ ರಷ್ಟ್ ಅಂದಳು :
  “ರಾಜಕುಮಾರ ನದಿಯ ಆಚೆ ದಡದಲ್ಲಿ ಇರೋ ಹಾಗೆ ಕಾಣ್ತಿದೆ, ಮಹಾರಾಣಿ, ಕರಕೊಂಡು ಬರಲು ಅಂಬಿಗರು ಹೋಗಿದ್ದಾರೆ.”
  ಕಾಯುವುದೆಂದರೆ ಕಾಲವ್ಯಯ.
  ತನ್ನ ಮೆಚ್ಚುಗೆಯ ಪರಿಚಾರಿಕೆಯನ್ನು ಕರೆದು ರಾಣಿ ಅಂದಳು :
  “ಹೊರಡೋಣ. ಚಿರತೆ ಚರ್ಮ ಮತ್ತು ಹೂವಿನ ತಟ್ಟೆ ಗಳ ಜತೆ ಇನ್ನೊಂದು ಪಲ್ಲಕೀಲಿ ನೀನು ಬಾ.”
           *           *            *           *