ಈ ಪುಟವನ್ನು ಪರಿಶೀಲಿಸಲಾಗಿದೆ
ಮೃತ್ಯುಂಜಯ
"ಕಾವಲುಗಾರರೆಲ್ಲಿ ?” "ರಾತ್ರಿ ಕೈದಿಗಳನ್ನೆಲ್ಲ ಬಿಟ್ರಲ್ಲ? ಯಾರಿಗೂ ಈ ಕಡೆ ಆಸಕ್ತಿ ಇಲ್ಲ.
ಒಬ್ಬ ರೊಟ್ಟಿ ತಿನ್ನೋಕೆ ಹೋಗಿದ್ದಾನೆ. ಇನ್ನೊಬ್ಬ ಓ ಅಲ್ಲಿ ನಿಂತಿದ್ದಾನೆ. ಇಬ್ಬರೂ ನನ್ನ ಗಂಡನ ಸ್ನೇಹಿತರು. ಅರ್ಧ ದಂಡು ಸೆಡ್ ಉತ್ಸವಕ್ಕೇಂತ ಬಂದಿದೆ. ನನ್ನ ಗಂಡನೂ ಬಂದಿದ್ದಾನೆ. ಈಗ ಅವರೆಲ್ಲ ಮಹಾಮಂದಿರದಲ್ಲಿ ದ್ದಾರೆ.”
“ನಮ್ಮ ನಾಯಕರನ್ನು ಎಲ್ಲಿಟ್ಟಿದ್ದಾರೆ, ಗೊತ್ತಾ?” “ಯಾರೂ ಹೇಳಿಲ್ಲವಾ ? ನೆಲಮಾಳಿಗೇಲಿ. ಜಜ್ ಮಂಖ್ ಇದ್ನಲ್ಲ?
ಅಲ್ಲಿ ಬೇರೆ ಕಾವಲುಗಾರರು.”
ಕಿಟಕಿಗೆ ಏನೋ ಅಡ್ಡವಾದಂತೆ ಅನಿಸಿತು ಬೆಕ್ಗೆ. ಶೀಬಾ ಏನನ್ನೋ
ಒಳಕ್ಕೆ ತುರುಕುತ್ತಿದ್ದಳು. ಎರಡು ರೊಟ್ಟಿ.
"ತಗೊಳ್ಳಿ." “ ನಮಗೆ ಬೇಡ, ನಾಯಕರಿಗೆ-” "ಅದಕ್ಕೇನಾದರೂ ಮಾಡೋಣ. ಈಗ ಇದನ್ನು ತಗೊಂಡ್ಬಿಡಿ
ಬೇಗ."
ಬೆಕ್ ರೊಟ್ಟಿಗಲಳನ್ನುಒಳಕ್ಕೆಳೆದುಕೊಂಡ. ಔಟನೆಂದ ! "ಮೆನ್ನ ನಿನಗೆ ಗೊತ್ತಾ? ಅರಮನೆ ಮಂದಿರದ ಕಿರಿಯ ಅರ್ಚಕ.
ಮೆನ್ನ ಹುಚ್ಚಯ್ಯ.”
"ಗೊತ್ತು ಅಣ್ಣ.” "ನಮ್ಮೂರಿನಿಂದ ಬಟಾನೂ ಗೆಳೇರೂ ಬರ್ತಾರೆ” "ಬಟಾ ನನಗೆ ಗುರುತಿಲ್ಲವಾ ? ಕೊಳಲು ಬಾರಿಸ್ತಾರೆ.” "ಅವರೇ. ನಾಯಕರೂ ನಾವೂ ಇಲ್ಲಿರೋದು ಬಟಾಗೆ ಆದಷ್ಟು ಬೇಗ
ಗೊತ್ತಾಗ್ಬೇಕು."
ಮೆನ್ನ ದೋಣಿಕಟ್ಟೇಲೋ ಮೇಲ್ಗಡೇನೋ ಬಟಾನ ದಾರಿ ನೋಡ್ತಾ
ನಿಂತಿದ್ದಾರೆ. ಸ್ವಲ್ಪ ಹುಡುಕಿ ಅವರಿಗೆ ಸಂಗತಿ ತಿಳಿಸ್ತೀಯಾ ?”
“ ಹೂಂ ಅಣ್ಣ. ಈಗ್ಲೇ ಹೋಗ್ತೇನೆ. ಮೆನ್ನಯ್ಯನನ್ನು ಕಂಡು,