ವಿಷಯಕ್ಕೆ ಹೋಗು

ಪುಟ:Mrutyunjaya.pdf/೫೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮೃತ್ಯುಂಜಯ
೫೫೭

ಆತಂಕ.ಆದರೆ ಕೆಲವೇ ಕ್ಷಣಗಳಲ್ಲಿ ಅವರು ಮರಳಿದರು. ಬಟಾನ, ಮೆನ್ನನ ವಿವರ್ಣ ಮುಖಗಳನ್ನು ಕಂಡು ಆ ಜನರಿಗೆ ಗಾಬರಿ. ಆಹೂರಾ ಕೇಳಿದಳು : " ತೀರ್ಪು ಆಯ್ತಾ ? ಅಣ್ಣನನ್ನು ಬಿಟ್ಟರಾ ?” (ಮೆನ್ನನೆಂದ : " ನೀವು ಅಧೀರರಾಗಬಾರದು.ಅಧೀರರಾಗಬಾರದು. ಬಯಲಿಗೆ ಹೋಗೋಣ.ಏನಾದರೂ ಮಾಡೋಣ.') ಬಟಾ ರಾಮೆರಿಪ್ಟಾನತ್ತ ಹೋಗಿ, ತನ್ನ ತೋಳಿನಿಂದ ಅವನನ್ನು ಬಳಸಿ, ಹೊರಹರಿಯಲೆತ್ನಿಸಿದ ದುಗುಡವನ್ನು ಬಲವಾಗಿ ತಡೆಹಿಡಿದು, ಮೆಲ್ಲ ಮೆಲ್ಲನೆ ಅಂದ : " ಮೆನೆಪ್ಟಾ ಅಣ್ಣನನ್ನು ಅರಮನೆಯ ಆಟದ ಬಯಲಿಗೆ ಕರಕೊಂಡು ಹೋಗ್ತಾರೆ.ಅಲ್ಲಿ ಜನರ ಎದುರಲ್ಲಿ ಬಹಿರಂಗವಾಗಿ__" (ರಾಮೆರಿಪ್ಟಾ ಕಣ್ಣರಳಿಸಿದ.ತನ್ನ ತಂದೆಯನ್ನು ಕಂಬಕ್ಕೆ ಬಿಗಿದು ಚಾಟಯಿಂದ ?....ಇತರ ಹಲವರಿಗೂ ನೀರಾನೆ ಪ್ರಾಂತದ ರಾಜಗೃಹದ ಘಟನೆಯ ನೆನಪು...) ಬಟಾ ಅಂದ : " ಮೆನ್ನಯ್ಯ ಹೇಳ್ತಾರೆ, ನಾವು ಅಧೀರರಾಗಬಾರದು. ಬಯಲಿಗೆ ಹೋಗೋಣ.ಏನಾದರೂ ಮಾಡೋಣ_ಅಂತ." ಹಲವು ಸ್ವರಗಳು: “ನಡೀರಿ ಮತ್ತೆ. ಯಾಕೆ ತಡ ?” ಮೆನ್ನ ತಿಳಿಯಹೇಳಿದ : " ಜನರ ಜತೆ ಸೇರ್ಕೊಂಡು ಅರಮನೆಯ ಮಹಾದ್ವಾರದ ಮೂಲಕವೇ ಒಳಗೆ ಹೋಗ್ಬೇಕು.ನೂಕು ನುಗ್ಗುಲಿನಲ್ಲಿ ಅದು ಸುರಕ್ಷಿತ.ಅಲ್ಲದೆ,ಇವತ್ತು ದೀಪಾಲಂಕಾರವಿಲ್ಲ. ಬಯಲಲ್ಲಿ ಕತ್ತಲು.ನಾವೆಲ್ಲ ಹಿಂದೆ ನಿಂತ್ಕೊಂಡು,ಯೋಚಿಸಿ ಏನಾದರೂ ತೀರ್ಮಾನಕ್ಕೆ ಬರೋಣ.ಏನಾದರೂ ಮಾಡೋಣ. ಬನ್ನಿ,ಬನ್ನಿ..."

* * * *