ವಿಷಯಕ್ಕೆ ಹೋಗು

ಪುಟ:Mrutyunjaya.pdf/೫೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೫೭೨
ಮೃತ್ಯುಂಜಯ

ಮೆನ್ನ ಮರಳಿನ ಮೇಲೆ ಕುಳಿತು. ನ್ಯಾಯಸ್ಥಾನದಲ್ಲಿ ನಡೆದುದನ್ನು ಚುಟುಕಾಗಿ ತಿಳಿಸಿದ. ಅಂಬಿಗರ ದುಗುಡ ಕಪೋಲಗಳ ಮೇಲೆ ಹರಿಯುವ ಉಷ್ಣ ಪ್ರವಾಹ ವಾಯಿತು. ಮೆಲ್ಲನೆ ಅಳುತಳುತ ಒಬ್ಬನೆಂದ : "ಮೆನೆಪ್ಟಾ ಅಣ್ಣ ಏನು ಹೇಳಿದ್ರು ?” “ ಮೆನೆಪ್ಟಾ ಅಣ್ಣ ಅಂದ್ರು: ಮಹಾಪ್ರಭುಗಳೇ, ಮಹಾ ಅರ್ಚಕರೇ, ಅಮಾತ್ಯರೇ, ಪ್ರತಿಷ್ಠಿತರೇ ! ಕಿವಿಗೊಟ್ಟು ಕೇಳಿ ! ನಮಗೆ ಜನರಿಗೆ ಸಿಟ್ಟು ಬಂದಾಗ, ಅದು ಮಹಾಪೂರವಾಗ್ತದೆ. ಅದರಲ್ಲಿ ನೀವೆಲ್ಲ ಕೊಚ್ಚಿಹೋಗೀರಿ! ಮಹಾಪೂರ ಇಳಿದಾಗ ಕಂಡುಬರೊ ಜಗತ್ತು ಹೊಸದು, ಆ ನೂತನ ಸೃಷ್ಟಿ ನಿರಾತಂಕವಾಗಿ ಆಗಲಿ ಅಂತ-ಇಗೋ-ರಾನನ್ನು ! ಪ್ಟಾನನ್ನು, ಅಮನ್ ನನ್ನು ಅನನ್ಯ ಭಾವದಿಂದ ನಾನು ಪ್ರಾರ್ಥಿಸೇನೆ.... ಅರ್ಥವಾಯ್ತಾ ? ” “ ಇಲ್ಲ........" “ ಹ್ಞ. ಬಹಳ ಅರ್ಥವಿರೋ ಮಾತು, ಮುಂದೆ ಸಹಸ್ರ ಸಹಸ್ರ ವರ್ಷ ಅದು ಧ್ವನಿಸ್ತದೆ, ಪ್ರತಿಧ್ವನಿಸ್ತದೆ....ಕಡೆಗೆ ಒಂದು ದಿನ ಜನರಿಗೆ ಸಿಟ್ಟು ಬರದೆ....” ತನ್ನೊಳಗಿನ ಯಾತನೆಯನ್ನು ಮರೆಸಲು ಮೆನ್ನನಿಗೆ ನೆರವಾಯಿತು ಮಾತಿನ ಆ ವೈಖರಿ. ಅಹೂರಾಳೊಡನೆ ಬಟಾ ಬಂದು ತಲಪಿದ. ಧ್ವನಿ ತೆಗೆದು ರೋದಿಸಲು ಹೊರಟ ಅಂಬಿಗರನ್ನು “ಶ್ ! ” ಎಂದು ಬಟಾ ತಡೆದ. " ಆಗಬಾರದ್ದು ಆಯ್ತು. ಇನ್ನು__ಮುಂದಿನ ಕೆಲಸ,” ಎಂದ. ಮೆನ್ನ ಎದ್ದು ಹೇಳಿದ : “ ಆ ಅಂಜೂರ ಮರದ ಕೆಳಗೆ ಕೂತಿದ್ದೇನೆ. ಎಲ್ಲ ಆದಾಗ ನನ್ನನು ಕರೀರಿ.” "ಹೂಂ, ಅಯ್ಯ.” ಸೆಣಬಿನ ದೊಡ್ಡ ಚೀಲದಲ್ಲಿ ವಿನಿಮಯ ಸಾಮಗ್ರಿಗಳಿದ್ದವು. ಅಹೂರಾಳ ಗಂಡ ಅದನ್ನು ಹೊತ್ತುಕೊಂಡ.