ಪುಟ:Mrutyunjaya.pdf/೬೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೮೪

ಮೃತ್ಯುಂಜಯ

ಜಿಂಕೆ ಪ್ರಾಂತದಲ್ಲಿ ಕುಯಿಲು ಮುಗಿದಿತ್ತು. ದಾಟಿ ಮುಂದಕ್ಕೆ
ಹೋದರು. ಅಲ್ಲಿಯೂ ಹೊಲಗಳಲ್ಲಿ ದುಡಿಮೆ ಮುಕ್ತಾಯವಾಗಿತ್ತು.
ಬಟಾ ಮೆನ್ನನೊಡನೆ ಅಂದ :
“ನಮ್ಮದೇ ಆಗಿದ್ದ ಹಿಡಿಧಾನ್ಯವೂ ನಮಗೆ ದಕ್ಕಲಿಲ್ಲ....”
“ ಹುಂ ? ಹೌದು,” ಎಂದ ಮೆನ್ನ, ಸಂಜೆಯ ವೇಳೆಗೆ ತಲಪಲಿದ್ದ
ಅಬ್ಬುವನ್ನು ಕುರಿತು ಆತ ಯೋಚಿಸುತ್ತಿದ್ದ.
ಕಳೆದ ಬಾರಿ ಐಸಿಸ್ ಪಾತ್ರಧಾರಿಣಿ ದೇವಸೇವಕಿಯ ಹೆರಳನ್ನು ಮುಟ್ಟಿ
ಮಹಾ ಅರ್ಚಕ ಆಶೀರ್ವದಿಸುತ್ತಿದ್ದಾಗ ತಾನು ಗರ್ಭಗುಡಿಯ ಬಳಿಗೆ ಬಂದೆ
ಎಂದಲ್ಲವೆ ಆತ ಕೂಗಾಡಿದ್ದ__ರೇಗಾಡಿದ್ದು?
ಮೆನ್ನನಿಗೆ ನಗು ಬಂತು. ತನ್ನಷ್ಟಕ್ಕೆ ಸಣ್ಣನೆ ನಕ್ಕು ತನಗೂ ಆ
ಬದುಕಿಗೂ ಸಂಬಂಧವಿಲ್ಲ, ಇನ್ನು, ಪಿಶಾಚಬಣದ ಪಾಪದ ಕೂಳನ್ನು ತಾನು
ಮುಟ್ಟ ಬೇಕಾಗಿಲ್ಲ. ಸರಿಕಂಡಂತೆ ವರ್ತಿಸುವ, ನಂಬಿದ್ದನ್ನು ಸಾರುವ
ಸ್ವಾತಂತ್ರ್ಯವಿದೆ ತನಗೆ.
....ಸಂಜೆಗೆ ಅಬ್ಬು ಬಂತು,
ಖ್ನೆಮ್ನನ ಹೊರತಾಗಿ ದೋಣಿಯಲ್ಲಿದ್ದವರೆಲ್ಲ__ನೆಫಿಸ್ ಕೂಡಾ__
ದೂರದ ಗುಡ್ಡವನ್ನು, ಆದರೆ ಮೇಲಿನ ದೇವಮಂದಿರವನ್ನು ದಿಟ್ಟಿಸಿದರು.
ಖ್ನೆಮ್ನನ್ನೂ ಒಳಗೊಂಡ ಅವರೆಲ್ಲ “ ಓ ಒಸೈರಿಸ" ಓ ಒಸೈರಿಸ್ ” ಎಂದರು.
ರಾಮೆರಿಪ್ಟಾ ದೃಷ್ಟಿಹೀನ ವೃದ್ಧ ಹಾಡಿದ್ದುದನ್ನು ಜ್ಞಾಪಿಸಿಕೊಂಡ.
ತಾವೆಲ್ಲರೂ ಉಣ್ಣುತ್ತಿದ್ದಾಗ ಅವನು ತಂತಿ ಮಾಡಿದ್ದ
“ ಯೋ ಯೋ ಯೋ .
ಹೇಳುವೆ ಕೇಳಿ ಸೃಷ್ಟಿಯ ಕಥೆಯ
ಈ ಲೋಕದ ಆದಿ ಅನಾದಿಯ ಕಥೆಯ
ಯೋ ಯೋ ಯೋ ”
ರಾಮೆರಿಗೆ ಚಿಂತೆ : ಖ್ನೆಮ್ಮಾವ ಕೂಡಾ ಮುಂದೆ ಹೀಗೆ ಹಾಡು
ಹೇಳುತ್ತ ತಿರುಗಬೇಕಾಗುವುದೆ ? ಆಗ ಅವನನ್ನು ಕೈಹಿಡಿದು ನಡೆಸುವವರು
ಯಾರು ? ತಾನು ?